September 6, 2026
Mumbai News Kannada
ಸುದ್ದಿ

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಇದರ ನೂತನ ಅಧ್ಯಕ್ಷರಾಗಿ ಶ್ರೀ ರಾಜೇಶ್ ಜೆ ಶೆಟ್ಟಿ ಆಯ್ಕೆ





ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಇದರ 60 ನೇ ವಾರ್ಷಿಕ ಮಹಾಸಭೆಯ ದಿನಾಂಕ 18/02/2024 ರಂದು ದೇವಸ್ಥಾನದ ಸಭಾಂಗಣದಲ್ಲಿ ಜರಗಿತು, ಶ್ರೀ ರಾಜೇಶ್ ಜೆ ಶೆಟ್ಟಿ ಅವರನ್ನು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಂಬೈಯ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯದಕ್ಷೆ ಚಿತ್ರ ಆರ್ ಶೆಟ್ಟಿ ಮಾತನಾಡುತ್ತ ನಮ್ಮ ಮೂಕಾಂಬಿಕೆಯ ಆಶೀರ್ವಾದದಿಂದ ನನಗೆ ಈ ದೊಡ್ಡ ಹುದ್ದೆ ಗೌರವ ದೊರೆತಿದೆ ರಾಜೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ದೇವಸ್ಥಾನ ಮುಂದೆ ಹೊಸ ಒಳ್ಳೆಯ ಕೆಲಸವನ್ನು ಮಾಡಲಿ ಎಂದು ಹಾರೈಸುತ್ತೇನೆ ಎಂದರು.

ಸಲಹೆಗಾರರು ಆದ ಸುಬ್ಬಯ್ಯ ಶೆಟ್ಟಿ ಯವರು ಮಾತನಾಡುತ್ತ ಎಲ್ಲರೂ ಸೇರಿ ಉತ್ತಮ ಕೆಲಸವನ್ನು ಮಾಡುವ ರಾಜೇಶ್ ಶೆಟ್ಟಿ ಅವರಿಗೆ ಸಹಕಾರವನ್ನು ಕೊಡೋಣ ಅಂತ ಹೇಳಿದರು.

ಟ್ರಸ್ಟಿ ಮೂಡು ಶೆಡ್ಡೆ ವಿಶ್ವನಾಥ್ ಶೆಟ್ಟಿ ಅವರು ಕರುಣಾಕರ ಶೆಟ್ಟಿ ಅವರು ಉತ್ತಮ ಕೆಲಸವನ್ನು ಮಾಡಿರುತ್ತಾರೆ ಅದೇ ಕೆಲಸವನ್ನು ರಾಜೇಶ್ ಶೆಟ್ಟಿ ಅವರು ಮುಂದುವರಿಸಿಕೊಂಡು ಹೋಗಬೇಕೆಂದು ಕೇಳಿಕೊಳ್ಳುತ್ತಿದ್ದೇವೆ. ಎಲ್ಲರೂ ವಜ್ರಮಹೋತ್ಸವದಲ್ಲಿಉತ್ತಮ ಕೆಲಸ ಮಾಡಿರುತ್ತಾರೆ ಎಂದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

ನಿಕಟಪೂರ್ವ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರವೀಣಾ ಪ್ರಕಾಶ್ ಶೆಟ್ಟಿ ಮಾತನಾಡುತ್ತ ಮಹಿಳಾ ವಿಭಾಗದ ಅಧ್ಯಕ್ಷೆ ಆಗಿ ಉತ್ತಮ ಕೆಲಸವನ್ನು ಮಾಡಿರುತ್ತೇನೆ ಮುಂದು ಸಹ ನನ್ನ ಸಹಕಾರ ಇದೆ ಎಂದರು.


ಮತ್ತೊಬ್ಬ ಸಲಹೆಗಾರರಾದ ದಯಾನಂದ ವಿ ಶೆಟ್ಟಿ ಮಾತನಾಡುತ್ತ ಇಲ್ಲಿನ ಭಕ್ತರಿಗೂ ದೇವಿ ಆಶೀರ್ವಾದ ಇದೆ ನನಗೂ ಸಹ ಆಶೀರ್ವಾದ ಸಿಕ್ಕಿದೆ ಕಾರ್ಯಕ್ರಮವನ್ನು ಒಳ್ಳೆಯ ರೀತಿಯಲ್ಲಿ ಮಾಡೋಣ ಅಂತ ಹೇಳಿದರು.


ಮತ್ತೊಬ್ಬ ಟ್ರಸ್ಟೀ ಚಂದ್ರಹಾಸ ಶೆಟ್ಟಿ ಯವರು ರಾಜೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಒಳ್ಳೆಯ ಕೆಲಸವನ್ನು ಮಾಡಲಿ ಎಂದು ಶುಭ ಹಾರೈಸಿದರು.
ಬಿಲ್ಲವರ ಅಸೋಸಿಯೇಶನ್ ಲೋಕಲ್ ಆಫೀಸ್ ಕಲ್ಯಾಣ್ ಇದರ ಉಪ ಕಾರ್ಯಧ್ಯಕ್ಷ ದೇವಾನಂದ್ ಕೋಟ್ಯಾನ್ ಅವರು ನಮ್ಮ ಎಲ್ಲಾರ ಸಹಕಾರ ಇದೆ ಎಂದು ಹೇಳಿದರು

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಜೇಶ್ ಶೆಟ್ಟಿ ಯವರು ಮಾತನಾಡುತ್ತ ದೊಡ್ಡ ಜವಾಬ್ದಾರಿಯನ್ನು ನೀಡಿರುವುದಕ್ಕೆ ಧನ್ಯವಾದಗಳು, ಮುಂದೆಯು ಸಹ ಉತ್ತಮ ಕೆಲಸವನ್ನು ಸಹಕಾರ ಕೇಳುತ್ತೇನೆ ಎಂದರು.

ಅಧ್ಯಕ್ಷರಾದ ಕರುಣಾಕರ ಶೆಟ್ಟಿ ಅಧ್ಯಕ್ಷೀಯ ನುಡಿ ಗಳನ್ನಾಡುತ್ತ ನನ್ನ ಸಮಿತಿಯವರು ಎಲ್ಲರೂ ನನಗೆ ತುಂಬಾ ಸಹಕಾರವನ್ನು ನೀಡಿದ ನೀಡಿದ್ದಾರೆ ಅವರಿಗೆ ನಾನು ಚಿರಋಣಿ ಎಂದರು.

ಈ ಸಂದರ್ಭದಲ್ಲಿ ನಿರ್ಗಮನ ಸಮಿತಿಯ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು, ಹಾಗೂ ಉನ್ನತ ಹುದ್ದೆಗೆ ಏರಿದ ಬಂಟರ ಸಂಘ ಮುಂಬೈ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಚಿತ್ರ ಆರ್ ಶೆಟ್ಟಿ, ಮೆಂಬರ್ ಶಿಪ್ ಚೇರ್ಮನ್ ಅನಿಲ್ ಶೆಟ್ಟಿ ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಧ್ಯಕ್ಷ ಸುಬ್ಬಯ್ಯ ಶೆಟ್ಟಿ ಬಂಟರ ಸಂಘ ಮುಂಬಯಿ ಪ್ರಾದೇಶಿಕ ಸಮಿತಿ ಬಿವಂಡಿ ಟು ಬದ್ಲಾಪುರ ಕಾರ್ಯಧ್ಯಕ್ಷ ಸುಬೋಧ್ ಭಂಡಾರಿ ಇವರನ್ನು ಸತ್ಕರಿಸಲಾಯಿತು.

ಸುಜಾತ ಶೆಟ್ಟಿ ಜಾನಕಿ ಪೂಜಾರಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭ ಗೊಂಡು, ಜಗದೀಶ ಶೆಟ್ಟಿ ಬೇಳಂಜೆ ವಂದಿಸಿದರು. ದೀಪಕ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ನಂತರ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ನೂತನ ಪದಾಧಿಕಾರಿಗಳು :

ಗೌರವ ಅಧ್ಯಕ್ಷ ಚಂದ್ರಕಾಂತ ಎಸ್ ಶೆಟ್ಟಿ,
ಅಧ್ಯಕ್ಷ ರಾಜೇಶ್ ಜೆ ಶೆಟ್ಟಿ,
ಸಂಚಲಕ ಕರುಣಾಕರ ಜೆ ಶೆಟ್ಟಿ,
ಉಪಾಧ್ಯಕ್ಷ ಯುವರಾಜ್ ಕೆ ಪೂಜಾರಿ,
ಗೌರವ ಕಾರ್ಯದರ್ಶಿ ಜಗದೀಶ್ ಎಮ್ ಶೆಟ್ಟಿ ಬೆಳ್ಳಂಜೆ,
ಜೊತೆ ಕಾರ್ಯದರ್ಶಿ ಪ್ರೇಮ್ ಕುಮಾರ್ ಎಸ್ ರೈ, ಗಣೇಶ್ ಶೆಟ್ಟಿ.ನಂದ್ರೋಳಿ,
ಗೌರವ ಕೋಶಾಧಿಕಾರಿ ಸತೀಶ್ ನಾಗೇಶ್ ಶೆಟ್ಟಿ,
ಜೊತೆ ಕೋಶಾಧಿಕಾರಿ ಸದಾನಂದ ಸಾಲ್ಯಾನ್, ವಸಂತ್ ಶೆಟ್ಟಿ,
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್ ಶೆಟ್ಟಿ,
ಯುವ ವಿಭಾಗದ ಕಾರ್ಯಾಧ್ಯಕ್ಷ ದೀಪಕ್ ಎಸ್ ಬಂಗೇರ,

ಉಪ ಸಮಿತಿ :

ಸಾಂಸ್ಕೃತಿಕ ಕಾರ್ಯಕ್ರಮ ಶ್ರದ್ಧಾ ಆಳ್ವಾ, ಅಂಕಿತಾ ಪೂಜಾರಿ,
ಸಂಪರ್ಕ ಅಧಿಕಾರಿ ಜಯರಾಮ ಹೆಗ್ಡೆ,
ಸಮಾಜ ಕಲ್ಯಾಣ ಸಮಿತಿ ಸಂತೋಷ್ ಎಚ್ ಶೆಟ್ಟಿ,
ಸದಸ್ಯತ್ವ ಜಗನಾಥ್ ಶೆಟ್ಟಿ, ಕ್ಯಾಟರಿಂಗ್ ,ಸದಾಶಿವ ಜಿ ಸುವರ್ಣ,
ಪೂಜಾ ಮೇಲ್ವಿಚಾರಣೆ ಅಶೋಕ್ ಎಸ್ ಶೆಟ್ಟಿ,
ಅಲಂಕಾರ ರೋಹಿತ್ ಶೆಟ್ಟಿಗಾರ್, ಗಣೇಶ್ ಎಮ್ ಶೆಟ್ಟಿ,

ಸಮಿತಿಯ ಸದಸ್ಯರು :

ದಯಾನಂದ್ ಡಿ ಶೆಟ್ಟಿ,
ಮೋಹನ್ ಮೂಲ್ಯ,
ಮನ್ಮಥ ಶೆಟ್ಟಿ,
ದೇವರಾಜ್ ಶೆಟ್ಟಿ,
ರಘು ಶೆಟ್ಟಿ,
ಶ್ರೀಧರ್ ಮೂಲ್ಯ,
ಸತೀಶ್ ಶೆಟ್ಟಿ ನಂದ್ರೋಳಿ,
ಭಾಸ್ಕರ್ ಎನ್ ಶೆಟ್ಟಿ,
ಅನಿಲ್ ಶೆಟ್ಟಿ ವಕ್ಕೇರಿ,
ರವಿ ಎನ್ ಶೆಟ್ಟಿ, ಆಲೂರು
ಜಗದೀಶ್ ಪೂಜಾರಿ,
ಮಂಜುನಾಥ್ ಶೆಟ್ಟಿ ಸಾಯಿ ಶ್ರದ್ಧಾ,
ಉದಯ್ ಕೆ ಕೋಟ್ಯಾನ್,
ಮಂಜುನಾಥ್ ಶೆಟ್ಟಿ ಮಂಡಾಡಿ,

ವಿಶೇಷ ಅಮಂತ್ರಿತರು :

ಭಾಸ್ಕರ್ ಶೆಟ್ಟಿ ದೊಡ್ಡರಂಗಡಿ,
ವಾಸು ಕೆ ಶೆಟ್ಟಿ,
ರತ್ನಾಕರ್ ಪೂಜಾರಿ,
ಗಣೇಶ್ ಎಚ್ ಶೆಟ್ಟಿ,
ಪ್ರಶಾಂತ್ ಶೆಟ್ಟಿ,
ದೇವನಂದ್ ಕೋಟ್ಯಾನ್,
ಪ್ರಕಾಶ್ ಕುಂಠಿನಿ,
ನಾಗಕಿರಣ್ ಶೆಟ್ಟಿ,
ಶ್ರೀಕಾಂತ್ ಪೂಜಾರಿ,
ನಂದೀಶ್ ಪೂಜಾರಿ,
ಆನಂದ್ ಶೆಟ್ಟಿ ಎಕ್ಕರ್,
ಹರೀಶ್ ಶೆಟ್ಟಿ ಜಗದಂಬ,
ಸಂತೋಷ್ ಶೆಟ್ಟಿ ಸೆಂಟ್ರಲ್ ಪಾರ್ಕ್,
ಸದಾನಂದ್ ಶೆಟ್ಟಿ ಡಾಲ್ಫಿನ್ ಹೋಟೆಲ್
ತಾರನಾಥ್ ಶೆಟ್ಟಿ,
ರಾಜ ಪೂಂಜಾ,
ಭಗವಾನ್ ಆಳ್ವ,
ಜಗದೀಶ್ ರಾಮ ಬಂಜನ್,
ಸುರೇಶ್ ಪೂಜಾರಿ,

ಟ್ರಸ್ಟಿಗಳು :
ಚಂದ್ರಹಾಸ ಎನ್ ಶೆಟ್ಟಿ ತಾಳಿಪಾಡಿ ಗುತ್ತು,
ಪ್ರಭಾಕರ್ ಜೆ ಶೆಟ್ಟಿ,
ಮೂಡುಶೆಡ್ಡೆ ವಿಶ್ವನಾಥ್ ಶೆಟ್ಟಿ,
ವಾಮನ್ ಎಮ್ ಶೆಟ್ಟಿ,
ಡಾ‌.ಸುರೇಂದ್ರ ವಿ ಶೆಟ್ಟಿ,
ಕೃಷ್ಣ ಜಿ ಮಾತ್ರೆ,
ದಯಾಶಂಕರ್ ಪಿ ಶೆಟ್ಟಿ,

ಸಲಹೆಗಾರರು :
ಭಾಸ್ಕರ್ ಶೆಟ್ಟಿ ಗುರುದೇವ್,
ಇಂದ್ರಾಳಿ ದಿವಾಕರ್ ಶೆಟ್ಟಿ,
ಶ್ರೀಮತಿ ಚಿತ್ರ ಆರ್ ಶೆಟ್ಟಿ,
ಸುಬ್ಬಯ್ಯ ಎ ಶೆಟ್ಟಿ,
ಅನಿಲ್ ಶೆಟ್ಟಿ ಐರೋಲಿ,
ಸತೀಶ್ ಎನ್ ಶೆಟ್ಟಿ,
ದಯಾನಂದ್ ವಿ ಶೆಟ್ಟಿ,
ಸುಭೋದ್ ಭಂಡಾರಿ,
ಉದಯ್ ಕೆ ಶೆಟ್ಟಿ,
ರವೀಂದ್ರ ವೈ ಶೆಟ್ಟಿ,
ಸುಧೀರ್ ಜೆ ಶೆಟ್ಟಿ,
ಪ್ರಕಾಶ್ ಶೆಟ್ಟಿ ಮೆಟ್ರೋ,
ಕ್ರಷ್ಣ ಜಿ ಪೂಜಾರಿ,
ಕೆ ಮೋನಪ್ಪ ಪೂಜಾರಿ,
ಸುದಾನಂದ ಆರ್ ಶೆಟ್ಟಿ,
ಜಯ್ ಪ್ರಸಾದ್ ಶೆಟ್ಟಿ,.



Related posts

ಕಟೀಲು:ಚಂದು ಪೂಜಾರಿ ನಿಧನ.

Mumbai News Desk

ಮೀರಾ ಡಹಾಣೂ ಬಂಟ್ಸ್ (ರಿ) . ವಾರ್ಷಿಕ ಟರ್ಫ್ ಫುಟ್ ಬಾಲ್ ಟೂರ್ನಮೆಂಟ್.

Mumbai News Desk

ಆಧುನಿಕ ವಿದ್ಯೆಗಿಂತ ಆಧ್ಯಾತ್ಮಿಕ ವಿದ್ಯೆ ಅಧಿಕ: ಶ್ರೀ ಪುತ್ತಿಗೆ ಶ್ರೀಗಳು

Mumbai News Desk

ಮಂಗಳೂರು : ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್,ಪೃಥ್ವಿ ಸೇವಾ ಟ್ರಸ್ಟ್, ವಿಶ್ವ ಬೆಳಕು ಸೌಹಾರ್ದ ಸಹಕಾರಿ ಸಂಘದ ಜಂಟಿ ಆಶ್ರಯದಲ್ಲಿ ಬ್ರಹತ್ ರಕ್ತದಾನ ಶಿಬಿರ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (21/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಜಾರಿಗೆ ಕಟ್ಟೆ ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ದಿವಾಕರ್ ಪೂಜಾರಿ ನಿಧನ

Mumbai News Desk