April 1, 2025
ಮುಂಬಯಿ

ಭಾಯಂದರ್ ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿಯ ಆಶ್ರಯದಲ್ಲಿ “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,

ಯಕ್ಷಗಾನದಿಂದ ಸನಾತನ ಧರ್ಮ ಜಾಗೃತಿ: ಸಾಣೂರು ಸಾಂತಿಂಜ ಜನಾರ್ಧನ್ ಭಟ್,
ಚಿತ್ರ ವರದಿ ದಿನೇಶ್ ಕುಲಾಲ್.

ಭಾಯಂದರ್, ಜು22: ಭಾಯಂದರ್ ಪೂರ್ವದ ಧಾರ್ಮಿಕ,ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಜನಾನುರಾಗಿಯಾಗಿರುವ ಶೇಖರ್ ಎಸ್. ಶೆಟ್ಟಿ (ಧರ್ಮಸೇವಕ)ಇವರ ಮಾರ್ಗದರ್ಶನದಲ್ಲಿ ಸ್ಥಾಪಿತವಾಗಿರುವ ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿಯ ಆಶ್ರಯದಲ್ಲಿ ಜುಲೈ 21 ರಂದು ರವಿವಾರ ಬಾಯಂದರ್ ಪೂರ್ವದ ಭಾರತ ರತ್ನ ಸಚಿನ್ ತೆಂಡೂಲ್ಕರ್ ಮೈದಾನದ ಬಳಿ ಗುರುದ್ವಾರದ ಹತ್ತಿರ ಇರುವ ಮುನಿಸಿಪಾಲ್ ಹಾಲ್ ನಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ(ರಿ)
ನಡೂರು, ಮಂದರ್ತಿ ಕಲಾವಿದರಿಂದ
ಧರ್ಮ ಸೇವಕ ಶೇಖರ್ ಶೆಟ್ಟಿ , ಸುಧಾಕರ್ ಶೆಟ್ಟಿ ಬಿಯಾಳಿ ಮಂದರ್ತಿ ಮತ್ತು ವಿಶ್ವನಾಥ್ ಶೆಟ್ಟಿ.
ಕರ್ನಿರೆ ಪಚ್ಚಂಗೇರಿ ಇವರ ಪ್ರಾಯೋಜಕತ್ವದಲ್ಲಿ
,”ಮಹಾಶಕ್ತಿ ವೀರಭದ್ರ” ಎಂಬ ಪೌರಾಣಿಕ ಪುಣ್ಯ ಕಥಾಭಾಗ ಯಕ್ಷಗಾನ ಬಯಲಾಟದ ರೂಪದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಮಾಡಿದ ಗುರುಗಳಾದ ಸಾಣೂರು ಸಾಂತಿಂಜ ಜನಾರ್ಧನ್ ಭಟ್,( ಪ್ರಧಾನ ಅರ್ಚಕರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾಶಿ ಗಾವ್,) ಶ್ರೀ ಅಯ್ಯಪ್ಪ ಭಕ್ತವೃಂದ ಅಂಧೇರಿ, ಇದರ ಸಂಸ್ಥಾಪಕ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ , ಯಕ್ಷಗಾನ ಕಲಾವಿದ ನಟರಾಜ್ ಜಪ್ತಿ ಇವರಿಗೆ ಗುರುವಂದನೆ ಸಲ್ಲಿಸಲಾಯ್ತು.
ಗೌರವವನ್ನು ಸ್ವೀಕರಿಸಿದ ಸಾಣೂರು ಸಾಂತಿಂಜ ಜನಾರ್ಧನ್ ಭಟ್ ಮಾತನಾಡುತ್ತಾ ಬಾಯಂದರ್ ಪರಿಸರದಲ್ಲಿ ಮೂಕಾಂಬಿಕಾ ಶಾಂತದುರ್ಗ ದೇವಸ್ಥಾನವನ್ನು ನಿರ್ಮಾಣ ಮಾಡಿ ,ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗದೊಂದಿಗೆ ಕಲಾ ಸೇವೆಯನ್ನು ಕೂಡ ಮಾಡುತ್ತಿರುವ ಧರ್ಮಸೇವಕ ಶೇಖರ್ ಶೆಟ್ಟಿ ಯವರು ಮತ್ತು ಸುಧಾಕರ್ ಶೆಟ್ಟಿ ಮಂದರ್ತಿಯವರು ಯಕ್ಷಗಾನವನ್ನು ಆಯೋಜಿಸಿ, ಧರ್ಮ ಸಂಸ್ಕೃತಿಯ ಜಾಗೃತಿ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಯಕ್ಷಗಾನ ತಂಡ ಕಳೆದ ವರ್ಷ ಕೂಡ ಉತ್ತಮ ಪ್ರಸಂಗವನ್ನು ನೀಡಿ ಕಲಾವಿದರ ಪ್ರಶಂಸೆಗೆ ಪಾತ್ರವಾಗಿದೆ. ಈ ವರ್ಷ ಕೂಡ ವೀರಭದ್ರನ ಕಥೆಯನ್ನು ಆಧರಿಸಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ, ಸನಾತನ ಧರ್ಮ ಉಳಿವಿಗೆ ಯಕ್ಷಗಾನ ಪೂರಕವಾಗಿದೆ ಯಕ್ಷಗಾನವನ್ನು ಉಳಿಸುವಲ್ಲಿ ನಾವೆಲ್ಲರೂ ಸಹಕಾರಿಯಾಗುವ ಎಂದು ನುಡಿದರು,

ಗುರುವಂದನೆಯನ್ನು ಸ್ವೀಕರಿಸಿದ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಮಾತನಾಡುತ್ತಾ, ಮಳೆಯ ಆರ್ಭಟದ ನಡುವೆ ಈ ಪರಿಸರದ ಕಲಾ ಆರಾಧಕರು ಬಾರಿ ಸಂಖ್ಯೆಯಲ್ಲಿ ಸೇರಿಕೊಂಡಿದ್ದಾರೆ, ಸರಕಾರ ಮಾಡುವ ಕೆಲಸವನ್ನು ನಮ್ಮೂರಿನ ತುಳು ಕನ್ನಡಿಗರು ಮಾಡುತ್ತಿದ್ದಾರೆ ಕೊರೋನದ ಸಂದರ್ಭದಲ್ಲಿ ಜೀವದ ಹಂಗು ತೊರೆದು ಬಹಳಷ್ಟು ಜನ ಸಮಾಜ ಸೇವೆ ಮಾಡಿದ್ದಾರೆ, ವೇದಿಕೆಯಲ್ಲಿರುವ ಗಣ್ಯರು, ಇಲ್ಲಿ ಸೇರಿಕೊಂಡಿರುವ ಎಲ್ಲರಿಗೂ ದೇವರು ಮೆಚ್ಚುವಂಥ ಸಮಾಜ ಸೇವೆಯನ್ನು ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲಿ. ದೇವರನ್ನು ಕ್ಷಣಮಾತ್ರ ಪ್ರಾರ್ಥಿಸಿದರೆ ಯಾವುದೇ ಸಂದರ್ಭದಲ್ಲಿ ಕೂಡ ನಮ್ಮನ್ನು ರಕ್ಷಿಸುತ್ತಾನೆ. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಧಾರ್ಮಿಕ, ಸಾಮಾಜಿಕ ಸೇವೆಯನ್ನು ಮಾಡಿದಾಗ ನಮ್ಮೊಳಗೆ ಭಗವಂತ ಸೇರಿಕೊಳ್ಳುತ್ತಾನೆ ಎಂದು ನುಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮೀರಾ ಬಾಯಂಂದರ ನ, ಬಿ ಜೆ ಪಿ ಯುವ ಬ್ರಿಗೇಡ್ ನ ಸಚ್ಚಿದಾನಂದ ಶೆಟ್ಟಿ, ಮುನ್ನಲಾಯಿ ಗುತ್ತು, ಮಾತನಾಡುತ್ತಾ ನಮ್ಮಕರಾವಳಿಯ ಸಾಂಸ್ಕೃತಿಕ ರಾಯಭಾರಿ ಎಂದರೆ ಅದು ಮಹಾರಾಷ್ಟ್ರ ಅದರಲ್ಲೂ ಮೀರಾ-ಭಾಯಂದರ್ ಪರಿಸರದಲ್ಲಿ ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ಹಾಗೂ ಕಲಾ ಸೇವೆ ಅತ್ಯಂತ ಹೆಚ್ಚು ನಡೆಯುವ ಪ್ರದೇಶವಾಗಿದೆ, ಒಂದು ಕಾರ್ಯಕ್ರಮ ನಡೆಯಬೇಕೆಂದರೆ ಅದರಲ್ಲಿ ಎಷ್ಟು ಕಷ್ಟವಿದೆ ಎನ್ನುವುದು ಕಾರ್ಯಕ್ರಮದ ಆಯೋಜಕರಿಗೆ ಮಾತ್ರ ಗೊತ್ತು, ಆದರೆ ಆಯೋಜಕರು ಕಲೆ, ಕಲಾವಿದರ ಮೇಲೆ ಪ್ರೀತಿ ಇಟ್ಟು ಎಲ್ಲವನ್ನೂ ಸಂತೋಷದಿಂದ ನಡೆಸುತ್ತಾರೆ, ಗುರುಪೂರ್ಣಿಮೆಯ ಈ ಶುಭ ಸಂದರ್ಭದಲ್ಲಿ ಗುರುಗಳೆಲ್ಲರ ಆಶೀರ್ವಾದ ನಮಗಲ್ಲ ಇರಲಿ ಎಂದು ನುಡಿದರು.

ಮತ್ತೋರ್ವ ಅತಿಥಿ ಬಂಟರ ಸಂಘ ಮೀರಾ ಭಾಯಂದ‌ರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ಟಾಪಾಡಿ ಗುತ್ತು, ಮಾತನಾಡುತ್ತಾ ಯಕ್ಷಗಾನ, ನಾಟಕ ಮೀರಾ-ಭಾಯಂದರ್ ಪರಿಸರದಲ್ಲಿ ನಡೆದಷ್ಟು ಮುಂಬೈಯ ಯಾವುದೇ ಉಪನಗರದಲ್ಲಿ ನಡೆಯುವುದು ಕಡಿಮೆ, ಯಕ್ಷಗಾನಕ್ಕೆ ಕಲಾಭಿಮಾನಿಗಳು ಪ್ರೋತ್ಸಾಹ ನೀಡಿದವರೆಂದರೆ ಅದು ಈ ಪರಿಸರದವರು, ಇಂದು ಕಾರ್ಯಕ್ರಮ ಆಯೋಜಿಸಿಕೊಂಡವರಲ್ಲಿ ಸುಧಾಕರ್ ಶೆಟ್ಟಿ ಮಂದಾರ್ತಿಯವರು ಓರ್ವ ಪ್ರಾಮಾಣಿಕ ಸಮಾಜ ಸೇವಕ ,ಕೊರೋನಾ ಸಂದರ್ಭದಲ್ಲಿ ಕೂಡ ಬಹಳಷ್ಟು ಜನರಿಗೆ ಸಹಕಾರವನ್ನು ನೀಡುವಲ್ಲಿ ಶ್ರಮಿಸಿದ್ದಾರೆ. ಯಕ್ಷಗಾನ ಕಾರ್ಯಕ್ರಮಕ್ಕೆ ಕೇಳದೆ ದಾನ ನೀಡುವ ಪ್ರವರ್ತಿಯನ್ನು ಬೆಳೆಸಿಕೊಳ್ಳಿ,, ಇಂದು ನಡೆದ ಯಕ್ಷಗಾನದ ಕಾರ್ಯಕ್ರಮದೊಟ್ಟಿಗೆ ಬಡ ಕುಟುಂಬವೊಂದಕ್ಕೆ ಆರ್ಥಿಕ ನೆರವನ್ನು ನೀಡಿದ್ದಾರೆ, ಇದು ಬಹಳ ಅಗತ್ಯವಾದ ಕಾರ್ಯವಾಗಿದೆ. ಯಕ್ಷಗಾನ ನಾಟಕ ಮಾಡಿದರೆ ಸಾಲದು , ಕಷ್ಟದವರಿಗೆ ಸಹಕಾರ ನೀಡುವ ಕಾರ್ಯವನ್ನು ಮಾಡುವ ಎಂದು ನುಡಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯ ಅಧ್ಯಕ್ಷ, ಎನ್‌ಸಿಪಿ ಯ ಮುಖಂಡ ಡಾ. ಹರೀಶ್ ಶೆಟ್ಟಿ ಮಾತನಾಡುತ್ತಾ ಯಕ್ಷಗಾನದಲ್ಲಿ ಇಂದಿನ ದೇವ ದೇವತೆಯರ ಕಾರ್ಣಿಕವನ್ನು ತೋರಿಸುತ್ತಾರೆ ಅದರಿಂದ ಕಲಾವಿದರಿಗೂ ಮತ್ತು ಪ್ರೇಕ್ಷಕರಿಗೂ ಪುಣ್ಯದ ಫಲ ಲಭಿಸುತ್ತದೆ. ಹಿಂದೂ ಧರ್ಮವನ್ನು ಜಾಗೃತಿಸುವ ಕಾರ್ಯ ಕೂಡ ಯಕ್ಷಗಾನದಲ್ಲಿ ನಡೆಯುತ್ತದೆ. ಇಂದು ಬಾಂಧವರೆಲ್ಲರೂ ಧರ್ಮದ ರಕ್ಷಣೆಗಾಗಿ ಪ್ರಾರ್ಥನೆ ಮಾಡುತ್ತಾರೆ ಅನ್ಯ ಧರ್ಮದವರು ಹಿಂದುಗಳನ್ನು ಹೇಗೆ ನಾಶ ಮಾಡಬೇಕು ಎನ್ನುವುದನ್ನು ಪ್ರಾರ್ಥಿಸುತ್ತಾರೆ ಆದ್ದರಿಂದ ನಮ್ಮ ಪ್ರಾರ್ಥನೆ ಸರ್ವರ ಶ್ರೇಯ ಅಭಿವೃದ್ಧಿಗಾಗಿ ನಡೆಯಬೇಕು ಎಂದು ನುಡಿದರು.
ವೇದಿಕೆಯಲ್ಲಿ ಧರ್ಮಸೇವಕ ಶೇಖರ್ ಶೆಟ್ಟಿ , ಸುಧಾಕರ್ ಶೆಟ್ಟಿ ಬಿಯಾಳಿ ಮಂದರ್ತಿ, ಸಮಾಜ ಸೇವಕರಾದ ಸಂತೋಷ್ ಶೆಟ್ಟಿ LIC, ಸತೀಶ್ ಪೂಜಾರಿ ಹೋಟೆಲ್ ಸದಾನಂದ್ ಭಾಯಂದರ, ಉದ್ಯಮಿ ಅಜಿತ್ ಶೆಟ್ಟಿ, ಮೀರಾ- ಭಾಯಂದರ್ ನ ನವ ತರುಣ ಮಿತ್ರ ಮಂಡಳಿಯ ಅಧ್ಯಕ್ಷ, ಹೋಟೆಲ್ ಉದ್ಯಮಿ ಯೋಗೇಶ್ ಗಾಣಿಗ, ಮಣಿಕಂಠ ಸೇವಾ ಸಮಿತಿಯ ಅಧ್ಯಕ್ಷ ಜಯರಾಮ್ ಶೆಟ್ಟಿ, ಯಕ್ಷಗಾನದ ಪ್ರಧಾನ ಭಾಗವತರಾದ ಸದಾಶಿವ ಅಮೀನ್ ಕೊಕ್ಕರಣೆ, ಮಾಜಿ ನಗರ ಸೇವಿಕ ನೀಲಂ ಧವನ್ ಮತ್ತಿತರರು ಉಪಸ್ಥರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನಕ್ಕೆ ವಿಶೇಷವಾಗಿ ಸಹಕಾರ ನೀಡಿದ ಸುಧಾಕರ್ ಶೆಟ್ಟಿ ಬಿಯಾಳಿ ಮಂದರ್ತಿ ದಂಪತಿ ಮತ್ತು ವಿಶ್ವನಾಥ್ ಶೆಟ್ಟಿ ಕರ್ನಿರೆ ಪಚ್ಚಂಗೇರಿ ಇವರನ್ನು ವೇದಿಕೆ ಗಣ್ಯರು ಗೌರವಿಸಿದರು.
ಇದೇ ಸಂದರ್ಭದಲ್ಲಿ ಸಂಘಟಕರಿಂದ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಲಾಯಿತು.

ವಿಶ್ವನಾಥ್ ಶೆಟ್ಟಿಕರ್ನಿರೆ ಪಚ್ಚಂಗೇರಿ ಕಾರ್ಯಕ್ರಮವನ್ನುನಿರೂಪಿಸಿ, ಧನ್ಯವಾದ ನೀಡಿದರು,

ಕಾರ್ಯಕ್ರಮಕ್ಕೆ ವಿಶೇಷ ಸಹಕಾರವನ್ನು ಮೋಹನ್ ರೈ ಗುರು ಸ್ವಾಮಿ ನವದುರ್ಗ , ಕಿಶೋರ್ ಶೆಟ್ಟಿ ಹೋಟೆಲ್ ಸರಂಗ್ ಕಾಶಿ ಮೀರಾ , ಪ್ರಸನ್ನ ಶೆಟ್ಟಿ ಮಾಣಿ ಬೆಟ್ಟು ,ಸುರೇಶ್ ಶೆಟ್ಟಿ ಕಳತ್ತೂರು( ಓಂ ಸಾಯಿ ಡೆಕೋರೇಟರ್), ಅರುಣ್ ಶೆಟ್ಟಿ ಶ್ರೀ ಕಟೀಲೇಶ್ವರಿ ಬೋರಿವಲಿ , ಸದಾನಂದ ಪೂಜಾರಿ ಹೋಟೆಲ್ ಜಸೇನ್ ಮಲಾಡ್ , ಭಾರತ್ ಬ್ಯಾಂಕಿನ ನಿರ್ದೇಶಕ ನರೇಶ್ ಪೂಜಾರಿ , ನಟರಾಜ್ ಶೆಟ್ಟಿ – ಹೋಟೆಲ್ ಉದ್ಯಮಿ , ಹರೀಶ್ ರೈ – ಸಮಾಜ ಸೇವಕರು , ಪ್ರವೀಣ್ ಶೆಟ್ಟಿ ಹೋಟೆಲ್ ಬ್ಲೂ ನೈಟ್ , ಅರುಣ್ ಪಕ್ಕಳ ಅರುಣ್ ಕ್ಲಾಸ್ ಬಾಯಂದರ್, ಅರುಣ್ ಶೆಟ್ಟಿ ಪಣಿಯೂರ್ ಯುವ ಬ್ರಿಗೇಡ್ ಮಿರಾ – ಬಾಯಂದರ್, ಸುರೇಂದ್ರ ಹೆಗ್ಡೆ , ಅಜಿತ್ ಶೆಟ್ಟಿ ಹೋಟೆಲ್ ಅಕ್ಷಯ್ , ನಟರಾಜ್ ಶೆಟ್ಟಿ ಹೋಟೆಲ್ ಉದ್ಯಮಿ ,ಉದಯ್ ಶೆಟ್ಟಿ ಬಿಯಾಳಿ , ಶಶಿಧ‌ರ್ ಶೆಟ್ಟಿ ಬಿಯಾಳಿ, ಮೋಹನ್ ಶೆಟ್ಟಿ ಶಾಂತ ದುರ್ಗಾ ಸೇವಾ ಸಮಿತಿ, ರವಿ ಶೆಟ್ಟಿ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ವಿಶೇಷ ಸಹಕಾರವನ್ನು ನೀಡಿದ ಶಾಂತ ದುರ್ಗಾ ಸೇವಾ ಸಮಿತಿ ಮಹಿಳಾ ವಿಭಾಗದ ಮಹಿಳಾ ವಿಭಾಗದ ಸೌಮ್ಯಲತಾ,.ಯಶೋಧ ಕೋಟ್ಯಾನ್ .ವಂದನಾ ಶೆಟ್ಟಿ ,ಶೋಭಾ ಶೇಕರ ಶೆಟ್ಟಿ ,ಕುಶಾಲ ಬಂಗೇರ ,ಶೋಭಾ ರಮೇಶ್ ಶೆಟ್ಟಿ,ವಿಜಯ ಲಕ್ಷಿ ಸುವರ್ಣ ,ಶಕುಂತಳ ಸಾಲಿಯಾನ್ .ಶೀಲಾ ಶೆಟ್ಟಿ,ರಮಾ ಸಫಲಿಗ,ಅನಿತಾ ಶೆಟ್ಟಿ.ವಂದನಾ ಶೆಟ್ಟಿ.ಪ್ರೇಮ ಲೋಕೇಶ್, ಹಾಗೂ ಸದಸ್ಯರನ್ನು ಶೇಖರ್ ಶೆಟ್ಟಿ ಗೌರವಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ರಾಜೇಶ್ ಶೆಟ್ಟಿ ತೆಳ್ಳಾರ್ ಇವರ ಸಹಕಾರದಿಂದ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಮಳೆಯ ಆರ್ಭಟದ ನಡುವೆ ಕಿಕ್ಕೇರಿದು ತುಂಬಿದ ಸಭಾಂಗಣದಲ್ಲಿ ಯಕ್ಷ ಕಲಾಭಿಮಾನಿಗಳಿಗೆ ಕಲಾವಿದರು ಯಕ್ಷಗಾನದ ರಸದೌತಣ ನೀಡಿದರು.

Related posts

ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ಸನ್ಮಾನ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ )ಥಾಣೆ ಸಮಿತಿಯ ಅಧ್ಯಕ್ಷರಾಗಿ ಗೋಪಾಲ ಎಸ್ ಚಂದನ್ ಆಯ್ಕೆ.

Mumbai News Desk

ಕಲ್ಯಾಣ್- ಉಲ್ಲಾಸನಗರ ಕನ್ನಡಿಗರಿಂದ ಮಾರಣಕಟ್ಟೆ ಮೇಳದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಯಕ್ಷಗಾನ ಪ್ರದರ್ಶನ’

Mumbai News Desk

ಏ.23 – 25: ಉಳೆಪಾಡಿ ಶ್ರೀ ಉಮಾಮಹೇಶ್ವರ ಮಹಾ ಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ರೋಷನ್ ಬಾಲಕೃಷ್ಣ ಮೂಲ್ಯ ಗೆ ಶೇ 84.60 ಅಂಕ.

Mumbai News Desk

ಬಿಲ್ಲವರ ಅಸೋಸಿಯೇಶನ್ ಮಲಾಡ್ ಸ್ಥಳೀಯ ಕಚೇರಿ – 170ನೇ ಗುರು ಜಯಂತಿ ಆಚರಣೆ.

Mumbai News Desk