32 C
Mumbai
April 24, 2026
Mumbai News Kannada
ಮುಂಬಯಿ

ಬಿಲ್ಲವರ ಎಸೋಸಿಯೇಷನ್ ಮುಂಬೈ: ತುಳು ನಾಟಕ ಸ್ಪರ್ಧೆ ಯಶಸ್ವಿ ಸಂಪನ್ನ:





​ರಂಗಭೂಮಿಯ ಕಿರೀಟ ಮುಡಿಗೇರಿಸಿಕೊಂಡ ಮೀರಾ ರೋಡ್ ಸ್ಥಳೀಯ ಸಮಿತಿ

ಚಿತ್ರ: ಧನಂಜಯ ಪೂಜಾರಿ, ವರದಿ: ವಾಣಿಪ್ರಸಾದ್ ಕರ್ಕೇರ

ಮುಂಬೈ: ಇಲ್ಲಿನ ಪ್ರತಿಷ್ಠಿತ ಸಂಸ್ಥೆಯಾದ ಬಿಲ್ಲವರ ಎಸೋಸಿಯೇಷನ್‌ನ ಸಾಂಸ್ಕೃತಿಕ ಉಪಸಮಿತಿಯು ಆಯೋಜಿಸಿದ್ದ ‘ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆ 2026’ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಜನವರಿ 24 ರಿಂದ 26 ರವರೆಗೆ ಮೂರು ದಿನಗಳ ಕಾಲ ನಡೆದ ಈ ಕಲಾ ಸಂಭ್ರಮದಲ್ಲಿ ವಿವಿಧ ಸ್ಥಳೀಯ ಸಮಿತಿಗಳಿಂದ ಒಟ್ಟು 15 ನಾಟಕಗಳು ಪ್ರದರ್ಶನಗೊಂಡು ಕಲಾಭಿಮಾನಿಗಳ ಮನಸೂರೆಗೊಂಡವು.

​ಜ. 26 ರಂದು ಎಸೋಸಿಯೇಷನ್‌ನ ಅಧ್ಯಕ್ಷ ಹರೀಶ್ ಜಿ. ಅಮೀನ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಬಾರಿಯ ಸ್ಪರ್ಧೆಯಲ್ಲಿ ಮೀರಾ ರೋಡ್ ಸ್ಥಳೀಯ ಸಮಿತಿಯು ಪ್ರಥಮ ಸ್ಥಾನ ಅಲಂಕರಿಸಿದರೆ, ಕಾಂದಿವಲಿ ಸಮಿತಿಯು ದ್ವಿತೀಯ ಹಾಗೂ ಡೊಂಬಿವಲಿ ಸಮಿತಿಯು ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿತು.

​ಪ್ರಶಸ್ತಿ ವಿಜೇತರ ವಿವರಗಳು:

ಅತ್ಯುತ್ತಮ ನಾಟಕಗಳು:

  • ಪ್ರಥಮ: ಬಗ್ಗನ ಭಾಗ್ಯ (ಮೀರಾ ರೋಡ್ ಸಮಿತಿ)
  • ದ್ವಿತೀಯ: ದೇಯಕ್ಕನ ದೈವದಿಲ್ಲು (ಕಾಂದಿವಲಿ ಸಮಿತಿ)
  • ತೃತೀಯ: ಸಂಸಾರ (ಡೊಂಬಿವಲಿ ಸಮಿತಿ)
ವಿಭಾಗಪ್ರಥಮದ್ವಿತೀಯತೃತೀಯ
ನಟಸಚಿನ್ ಪೂಜಾರಿ (ಬಗ್ಗನ ಭಾಗ್ಯ)ಕುಮಾರ್ ಪೂಜಾರಿ (ಎನ್ನಕಥೆ)ಜಗದೀಶ್ ಜೆ. ಕೋಟ್ಯಾನ್ (ಸಂಸಾರ)
ನಟಿಶಿಲ್ಪಾ ಪೂಜಾರಿ (ಬಗ್ಗನ ಭಾಗ್ಯ)ಪ್ರತಿಮಾ ಬಂಗೇರಾ (ದೇಯಕ್ಕನ ದೈವದಿಲ್ಲು)ಶ್ರುತಿ ಪೂಜಾರಿ (ಅಮ್ಮೇರ್)
ನಿರ್ದೇಶನಅಶೋಕ್ ವಳದೂರು (ಬಗ್ಗನ ಭಾಗ್ಯ)ಚಂದ್ರಕಾಂತ್ ಸಾಲ್ಯಾನ್ (ದೇಯಕ್ಕನ ದೈವದಿಲ್ಲು)ನವೀನ್ ಸುವರ್ಣ ಬೆಂಗ್ರೆ (ಸಂಸಾರ)
ಪೋಷಕ ನಟತೇಜಸ್ ಪಿ. ಪೂಜಾರಿ (ಸಂಸಾರ)ನೀಥೇಶ್ ಪೂಜಾರಿ (ದೇಯಕ್ಕನ ದೈವದಿಲ್ಲು)ಸುಜಾಲ್ ಕೆ. ಕಿರೋಡಿಯನ್ (ಎನ್ನಕಥೆ)
ಪೋಷಕ ನಟಿವಿಜಯಾ ಜ್ಯೋತಿ ಸಾಲಿಯಾನ್ (ದೇಯಕ್ಕನ ದೈವದಿಲ್ಲು)ಶ್ವೇತಾ ಅಮಿನ್ (ಮೋಕ್ಷ)ಪೂರ್ಣಿಮಾ ಅಮಿನ್ (ಅಮ್ಮೇರ್)
ಬಾಲ ನಟಪುನೀತ್ ಜೆ. ಕೋಟ್ಯಾನ್ (ಮೋಕ್ಷ)ಸಂತೃಪ್ತ್ ಪೂಜಾರಿ (ದೇಯಕ್ಕನ ದೈವದಿಲ್ಲ್)ನಿಹಾನ್ ಹರೀಶ್ ಕೋಟ್ಯಾನ್ (ಬಲಿ)
ಬಾಲ ನಟಿಸರಣ್ಯ ಪೂಜಾರಿ (ಯಕ್ಷನಿಲಯ)ಸಾನ್ವಿ ಪೂಜಾರಿ (ಅಮ್ಮೆರ್)ಧ್ರುತಿ ಸುರೇಶ್ ಪೂಜಾರಿ (ಬಲಿ)

ತಾಂತ್ರಿಕ ವಿಭಾಗ:

  • ಸಂಗೀತ: I. ದಿವಾಕರ್ ಕಟೀಲ್ (ಬಗ್ಗನ ಭಾಗ್ಯ), II. ಅರವಿಂದ್ ಪದ್ಮಶಾಲಿ (ಸಂಸಾರ), III. ದಿವಾಕರ ಕಟೀಲ್ (ಸೋಕ್ರೇಟಿಸ್).
  • ರಂಗವಿನ್ಯಾಸ: I. ಸುರೇಶ್ ಕೋಟ್ಯಾನ್ (ಬಗ್ಗನ ಭಾಗ್ಯ), II. ಅಶೋಕ್ ಕೋಡ್ಯಾಡ್ಕ (ದೇಯಕ್ಕನ ದೈವದಿಲ್ಲ್), III. ಪಲ್ಲವಿ (ಚಂದ).
  • ಬೆಳಕು: I. ಮಹೇಶ್ (ಚಂದ), II. ಲತೇಶ್ ಎಂ. ಪೂಜಾರಿ (ಬಲಿ), III. ಚಂದ್ರಕಾಂತ್ ಸಾಲಿಯಾನ್ (ಸಂಸಾರ).
  • ಪ್ರಸಾದನ: I. ಮಂಜುನಾಥ್ ಶೆಟ್ಟಿಗಾರ್ (ದೇಯಕ್ಕನ ದೈವದಿಲ್ಲು), II. ಮಂಜುನಾಥ್ ಶೆಟ್ಟಿಗಾರ್ (ಬಗ್ಗನ ಭಾಗ್ಯ), III. ಮಂಜುನಾಥ್ ಶೆಟ್ಟಿಗಾರ್ (ಬಲಿ).
  • ವಸ್ತ್ರವಿನ್ಯಾಸ: I. ಚಂದ್ರಕಾಂತ್ ಸಾಲಿಯಾನ್ (ಬಗ್ಗನ ಭಾಗ್ಯ), II. ಲತಾ ಬಂಗೇರ (ದೇಯಕ್ಕನ ದೈವದಿಲ್ಲು), III. ಅಶೋಕ ಕೊಡ್ಯಾಡ್ಕ (ಬಲಿ).

ತೀರ್ಪುಗಾರರ ಮೆಚ್ಚುಗೆ ಪಡೆದ ವಿಶೇಷ ಪಾತ್ರಗಳು:

  1. ಪ್ರಿಯಾ. ವಿ. ಅಮೀನ್ (ಶಾಂತಕ್ಕ – ಸಂಸಾರ)
  2. ​ರಾಮಚಂದ್ರ ಸಾಲಿಯಾನ್ (ವಾವನ – ಯಕ್ಷ ನಿಲಯ)
  3. ​ಭವ್ಯ ಸುರೇಶ್ ಪೂಜಾರಿ (ಅಂಬಿಕಾ – ಬಲಿ)
  4. ​ದಿಶಾಶ್ರೀ ಪೂಜಾರಿ (ಸೋನಿ – ಎನ್ನ ಕತೆ ಏರ್ಲ ಎನ್ನಂದಿನ)
  5. ​ಪ್ರಜ್ಞ (ರಶ್ಮಿ – ಕಾಜಿ)
  6. ​ಕಾವ್ಯ ಉದಯ್ ಬಂಗೇರ (ಶ್ರುತಿ – ಏರೆಗ್ಲಾ ಪನ್ನೋಡ್ಚಿ)

​ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಅದ್ಧೂರಿ ಕಾರ್ಯಕ್ರಮವು ಮುಂಬೈನಲ್ಲಿ ತುಳು ಭಾಷೆ ಮತ್ತು ರಂಗಭೂಮಿಯ ಕಳೆಯನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು.



Related posts

ಕರ್ನಾಟಕ ಸಂಘ ಡೊಂಬಿವಲಿ ಕ್ರೀಡಾ ವಿಭಾಗದ ವತಿಯಿಂದ ಕೇರಮ್ ಮತ್ತು ಚೆಸ್ ಸ್ಪರ್ಧೆ.

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದಸಮಾಜದ ವಿದ್ಯಾರ್ಥಿಗಳಿಗಾಗಿ ಏರ್ಪಟ್ಟ ಚಿತ್ರಕಲಾ ಸ್ಪರ್ಧೆ :

Mumbai News Desk

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ;ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk

ಗೋರೆಗಾಂವ್ ಪೂರ್ವ  ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ವಜ್ರ ಮಹೋತ್ಸವ, 

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ, ನೂತನ ಪದಾಧಿಕಾರಿಗಳ ಆಯ್ಕೆ. ಗೌ.ಅಧ್ಯಕ್ಷರಾಗಿ ಸುರೇಶ್ ಪೂಜಾರಿ, ಅಧ್ಯಕ್ಷರಾಗಿ ಸಿ.ಎ. ಪೂಜಾರಿ ಅಯ್ಕೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಾಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಗುರು ಪೂರ್ಣಿಮ ಪೂಜೆ.

Mumbai News Desk