July 23, 2026
Mumbai News Kannada
ತುಳುನಾಡು

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ – ವಿಜೃಂಭಣೆಯಿಂದ ಜರಗಿದ ಗುರುಪೂರ್ಣಿಮ ಮಹೋತ್ಸವ.







ಉಡುಪಿ,ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ ಗುರುಪೂರ್ಣಿಮ ಮಹೋತ್ಸವ ಜುಲೈ 21ರಂದು, ಗುರು ಭಕ್ತರ, ಉಪಸ್ಥಿತಿಯಲ್ಲಿ ಭಕ್ತಿ, ಶ್ರದ್ದೆಯಿಂದ,ವಿಜೃಂಭಣೆಯಿಂದ ಜರಗಿತು.
ಅಂದು ಬೆಳ್ಳಿಗೆ 5 ಗಂಟೆಗೆ ಕಾಕಡ ಆರತಿ ಬೆಳಗಳಾಯಿತು.
ನಂತರ ಭಕ್ತರಿಂದ ಗುರುದೇವರಿಗೆ ಸೀಯಾಳ ಅಭಿಷೇಕ ನಡೆಯಿತು.
ಮಧ್ಯಾಹ್ನ 12 ಗಂಟೆಗೆ ಶ್ರೀ ನಿತ್ಯಾನಂದ ಸ್ವಾಮಿಗೆ ಮಹಾಪೂಜೆ ನಡೆಯಿತು. ಮಹಾಪೂಜೆಯ ಬಳಿಕ ಬಾಲಾಭೋಜನ ಮತ್ತು ಅನ್ನಸಂತರ್ಪಣೆ ಆರಂಭವಾಯಿತು.


ತಡ ಸಂಜೆ ಪಲ್ಲಕ್ಕಿ ಉತ್ಸವ, ಮಹಾಪೂಜೆಯಾಗಿ ಸೇರಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಗುರು ಪೂರ್ಣಿಮಾ ಮಹೋತ್ಸವದಲ್ಲಿ ಮಂದಿರದ ಆಡಳಿತ ಟ್ರಸ್ಟಿ, ಮುಂಬಯಿಯ ಉದ್ಯಮಿ ಕೆ. ಕೆ ಆವರ್ಸೆಕರ್, ಮಂದಿರ ಮಠದ ಎಕ್ಸಿಕ್ಯೂಟಿವ್ ಟ್ರಸ್ಟಿ ಕೆ ದಿವಾಕರ ಶೆಟ್ಟಿ ತೋಟದಮನೆ, ಕಾರ್ಯದರ್ಶಿ ತೋನ್ಸೆ ನವೀನ್ ಶೆಟ್ಟಿ, ಜಾಯಿಂಟ್ ಎಕ್ಸಿಕ್ಯೂಟಿವ್ ಟ್ರಸ್ಟಿ ಕೆ ಮೋಹನ ಚಂದ್ರ ನಂಬಿಯಾರ್, ಕಾಂಞಂಗಾಡ್‌ ನ ಟ್ರಸ್ಟಿ ಕುಮಾರ್ ಎನ್ ಬಂಗೇರ, ಕೋಶಾಧಿಕಾರಿ ನರಸಿಂಹ ಶೆಣೈ, ಮಾಜಿ ಸಚಿವ ಬಿ. ನಾಗರಾಜ್ ಶೆಟ್ಟಿ, ರಮೇಶ್ ಶೆಟ್ಟಿ ಪಾಲ್ಗರ್, ಸಿ ಕೆ ಪಾಟೀಲ್ ಸಿ ಏ ಮುಂಬಯಿ, ಗಣೇಶ್ ಶೆಟ್ಟಿ ಸಿ ಎಸ್, ನ್ಯಾಯವಾದಿ ರವಿ ಕೋಟ್ಯಾನ್ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು, ಗುರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿ ಹಾಗೂ ಸೇವಾ ಸಮಿತಿಯ ಸದಸ್ಯರು ಗುರು ಪೂರ್ಣಿಮಾ ಮಹೋತ್ಸವ ಸಾಂಗವಾಗಿ ನಡೆಯುವಲ್ಲಿ ಶ್ರಮಿಸಿದರು.



Related posts

ಹೆಜಮಾಡಿ ಕೋಡಿಯಲ್ಲಿ ರೋಬೋಟಿಕ್ ಮತ್ತು ಇನ್ನೋವೇಶನ್ ಲ್ಯಾಬ್ ಉದ್ಘಾಟನೆ

Mumbai News Desk

ಉಡುಪಿ : ಜ. 9ರಂದು ಶೀರೂರು ಮಠದ ಶ್ರೀಗಳ ಉಡುಪಿ ‘ಪುರ ಪ್ರವೇಶ’.

Mumbai News Desk

ಕಾರ್ಲೆ ಭಗವತಿ ಕ್ಷೇತ್ರದ ದೈವ ಪಾತ್ರಿ, ಮೋಯ ಜನಾಂಗದ ದಿವ್ಯ ಚೇತನ ದಿ.ಕೃಷ್ಣ ಬೆಳ್ಚಪ್ಪಾಡರು ಶಿರಿಯ, ಅವರ 42ನೇ ಪುಣ್ಯ ಸ್ಮರಣೆ

Mumbai News Desk

ಅಮೀನ್ ಮೂಲಸ್ಥಾನದಲ್ಲಿ ವಾರ್ಷಿಕ ವರ್ಧಂತ್ಯುತ್ಸವ ವೈಭವ: ಶ್ರದ್ಧಾಭಕ್ತಿಯಿಂದ ಜರುಗಿದ ಪೂಜಾ ಕೈಂಕರ್ಯಗಳು

Mumbai News Desk

ಅಸಹಾಯಕ ಕುಟುಂಬಕ್ಕೆ ಸೂರು ನಿರ್ಮಿಸಿ ಆಸರೆಯಾದ ಕುತ್ಯಾರು ಕುಲಾಲ ಸಂಘ..

Mumbai News Desk

ಬಿರುವೆರ್‌ ಕಾಪು ಸೇವಾ ಸಮಿತಿ ವತಿಯಿಂದ ಆಟಿ ಕಷಾಯ ವಿತರಣೆ

Mumbai News Desk