September 6, 2026
Mumbai News Kannada
ತುಳುನಾಡು

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ – ವಿಜೃಂಭಣೆಯಿಂದ ಜರಗಿದ ಗುರುಪೂರ್ಣಿಮ ಮಹೋತ್ಸವ.





ಉಡುಪಿ,ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ ಗುರುಪೂರ್ಣಿಮ ಮಹೋತ್ಸವ ಜುಲೈ 21ರಂದು, ಗುರು ಭಕ್ತರ, ಉಪಸ್ಥಿತಿಯಲ್ಲಿ ಭಕ್ತಿ, ಶ್ರದ್ದೆಯಿಂದ,ವಿಜೃಂಭಣೆಯಿಂದ ಜರಗಿತು.
ಅಂದು ಬೆಳ್ಳಿಗೆ 5 ಗಂಟೆಗೆ ಕಾಕಡ ಆರತಿ ಬೆಳಗಳಾಯಿತು.
ನಂತರ ಭಕ್ತರಿಂದ ಗುರುದೇವರಿಗೆ ಸೀಯಾಳ ಅಭಿಷೇಕ ನಡೆಯಿತು.
ಮಧ್ಯಾಹ್ನ 12 ಗಂಟೆಗೆ ಶ್ರೀ ನಿತ್ಯಾನಂದ ಸ್ವಾಮಿಗೆ ಮಹಾಪೂಜೆ ನಡೆಯಿತು. ಮಹಾಪೂಜೆಯ ಬಳಿಕ ಬಾಲಾಭೋಜನ ಮತ್ತು ಅನ್ನಸಂತರ್ಪಣೆ ಆರಂಭವಾಯಿತು.


ತಡ ಸಂಜೆ ಪಲ್ಲಕ್ಕಿ ಉತ್ಸವ, ಮಹಾಪೂಜೆಯಾಗಿ ಸೇರಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಗುರು ಪೂರ್ಣಿಮಾ ಮಹೋತ್ಸವದಲ್ಲಿ ಮಂದಿರದ ಆಡಳಿತ ಟ್ರಸ್ಟಿ, ಮುಂಬಯಿಯ ಉದ್ಯಮಿ ಕೆ. ಕೆ ಆವರ್ಸೆಕರ್, ಮಂದಿರ ಮಠದ ಎಕ್ಸಿಕ್ಯೂಟಿವ್ ಟ್ರಸ್ಟಿ ಕೆ ದಿವಾಕರ ಶೆಟ್ಟಿ ತೋಟದಮನೆ, ಕಾರ್ಯದರ್ಶಿ ತೋನ್ಸೆ ನವೀನ್ ಶೆಟ್ಟಿ, ಜಾಯಿಂಟ್ ಎಕ್ಸಿಕ್ಯೂಟಿವ್ ಟ್ರಸ್ಟಿ ಕೆ ಮೋಹನ ಚಂದ್ರ ನಂಬಿಯಾರ್, ಕಾಂಞಂಗಾಡ್‌ ನ ಟ್ರಸ್ಟಿ ಕುಮಾರ್ ಎನ್ ಬಂಗೇರ, ಕೋಶಾಧಿಕಾರಿ ನರಸಿಂಹ ಶೆಣೈ, ಮಾಜಿ ಸಚಿವ ಬಿ. ನಾಗರಾಜ್ ಶೆಟ್ಟಿ, ರಮೇಶ್ ಶೆಟ್ಟಿ ಪಾಲ್ಗರ್, ಸಿ ಕೆ ಪಾಟೀಲ್ ಸಿ ಏ ಮುಂಬಯಿ, ಗಣೇಶ್ ಶೆಟ್ಟಿ ಸಿ ಎಸ್, ನ್ಯಾಯವಾದಿ ರವಿ ಕೋಟ್ಯಾನ್ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು, ಗುರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿ ಹಾಗೂ ಸೇವಾ ಸಮಿತಿಯ ಸದಸ್ಯರು ಗುರು ಪೂರ್ಣಿಮಾ ಮಹೋತ್ಸವ ಸಾಂಗವಾಗಿ ನಡೆಯುವಲ್ಲಿ ಶ್ರಮಿಸಿದರು.



Related posts

ಶ್ರದ್ದಾ ಭಕ್ತಿಯಿಂದ ನೆರೆದ ಜನ ಸಾಗರದೊಂದಿಗೆ ಸಸಿಹಿತ್ಲು ಶ್ರೀ ಭಗವತೀ ದೇವಿಗೆ ಅದ್ದೂರಿಯ ಬ್ರಹ್ಮಕಲಶೋತ್ಸವ

Mumbai News Desk

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರದ ನಿಮ್ಮಿತ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ

Mumbai News Desk

ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಕ್ಷೇತ್ರ ಪ್ರದಕ್ಷಿಣೆಯ 23ನೇ ದಿನ : ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನ ದರುಶನ

Mumbai News Desk

ಲಯನ್ಸ್ ಕ್ಲಬ್ ಕೆಮ್ಮಣ್ಣು ಅಸ್ತಿತ್ವಕ್ಕೆ : ಸ್ಥಾಪಕ ಅಧ್ಯಕ್ಷರಾಗಿ ಜಗದೀಶ್ ಕೆಮ್ಮಣ್ಣು ಹಾಗೂ ಪದಾಧಿಕಾರಿಗಳ ಆಯ್ಕೆ

Mumbai News Desk

ಹರಿಶ್ಚಂದ್ರ ಪಿ. ಸಾಲ್ಯಾನ್‌ ನುಡಿಮುತ್ತು ಕೃತಿ ಬಿಡುಗಡೆ ಸಮಾರಂಭ

Mumbai News Desk

ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ: 2027ರ ಫೆಬ್ರವರಿ 18 ರಿಂದ 28ರ ವರೆಗೆ ದಿನಾಂಕ ನಿಗದಿ; ಸಮಿತಿ ಕಚೇರಿ ಉದ್ಘಾಟನೆ

Mumbai News Desk