September 6, 2026
Mumbai News Kannada
ಮುಂಬಯಿ

ಶ್ರೀ ಅಯ್ಯಪ್ಪ ಭಕ್ತ ಮಂಡಳಿ, ಶ್ರೀ ಲಕ್ಷ್ಮೀ ನಾರಾಯಣ ಭಜನಾ ಸಮಿತಿ ಮೀರಾ ರೋಡ್ ಶ್ರೀ ಅಯ್ಯಪ್ಪ ಸ್ವಾಮಿ 29ನೇ ಮಹಾಪೂಜೆ





ಆರಾಧನೆ ಮನಸ್ಸಿನ ಉತ್ತಮ ಭಾವನೆಗಳನ್ನು ಏಕಾಗ್ರತೆಗೊಳಿಸುತ್ತದೆ. – ಗುರುಸ್ವಾಮಿ ಜಯಶೀಲ ತಿಂಗಳಾಯ

ಚಿತ್ರ, ವರದಿ; ರಮೇಶ್ ಉದ್ಯಾವರ

  ಮೀರಾರೋಡ್, ಡಿ. 24:    ಶ್ರೀ ಅಯ್ಯಪ್ಪ ಭಕ್ತ  ಮಂಡಳಿ ಮೀರಾರೋಡ್, ಶ್ರೀ ಲಕ್ಷ್ಮಿ ನಾರಾಯಣ ಭಜನಾ ಸಮಿತಿ ಮೀರಾರೋಡ್ ಯುನಿಟಿ ಅಪಾರ್ಟ್ಮೆಂಟ್ ಭಾರತಿ ಪಾರ್ಕ್ ಇಲ್ಲಿನ ಶ್ರೀ ಅಯ್ಯಪ್ಪ ಸ್ವಾಮಿಯ 29ನೇ  ಮಹಾಪೂಜೆಯು ಡಿ. 21ರಂದು ಗುರುಸ್ವಾಮಿ ಜಯಶೀಲ ಬಿ ತಿಂಗಳಾಯ ಬಡಾ ಎರ್ಮಾಳು ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಜರುಗಿತು.

    ಸಾಣೂರು ಸಾಂತಿಂಜ ಜನಾರ್ಧನ್ ಭಟ್ ರವರ ನೇತೃತ್ವದಲ್ಲಿ   ಪ್ರಾತಃ ಕಾಲದಲ್ಲಿ ಗಣ ಹೋಮ ಬಳಿಕ ಶ್ರೀ ಲಕ್ಷ್ಮೀನಾರಾಯಣ ಭಜನಾ ಸಮಿತಿ ಸದಸ್ಯರಿಂದ ಭಜನೆ ಜರುಗಿತು. ಮಧ್ಯಾಹ್ನ ಹಿರಿಕಿರಿಯ ವ್ರತಧಾರಿ ಸ್ವಾಮಿಯವರ ಶರಣಘೋಷ ಹರಿಹರ ಪುತ್ರ ಅಯ್ಯಪ್ಪ ಸ್ವಾಮಿಗೆ ಕರ್ಪೂರ ದೀಪ ಬೆಳಗಿಸಿ ಪಡಿಪೂಜೆ, ಗುರುಸ್ವಾಮಿ ಜಯಶೀಲ ತಿಂಗಳಾಯರವರು ವಿವಿಧ ಪೂಜಾಕೈಂಕರ್ಯ ನೆರವೇರಿಸಿ ಮಹಾ ಮಂಗಳಾರತಿಗೈದರು.

       ಗುರುಸ್ವಾಮಿ ಜಯಶೀಲ ತಿಂಗಳಾಯ  ಮಾತನಾಡಿ,  ನಿಯಮಿತ ಶ್ರದ್ಧಾ ಭಕ್ತಿ ಯ ಪೂಜಾ ಪುರಸ್ಕಾರಗಳಿಂದ ನಮ್ಮ ಆಧ್ಯಾತ್ಮಿಕ ಶಕ್ತಿ ಬೆಳೆಯುತ್ತದೆ. ದೇವರ ಪ್ರತಿಬಿಂಬವನ್ನು ನಾವು ಹತ್ತಿರದಿಂದ ನೋಡುವ ಮೂಲಕ ನಮ್ಮ ಅಂತರಾಳದಲ್ಲಿ  ಮನಸ್ಸಿನ ಭರವಸೆ ಧೈರ್ಯ ಸುರಕ್ಷಾ ಭಾವನೆಗಳು ಮೂಡುತ್ತದೆ. ಆರಾಧನೆಯ ಮೂಲಕ ಮನಸ್ಸಿನ ಉತ್ತಮ ಭಾವನೆಗಳು ಏಕಾಗ್ರತೆಗೊಳ್ಳುತ್ತದೆ. ಭಜನೆ  ಕೀರ್ತನೆಯಿಂದ ಭಗವಂತನ ಸಾನಿಧ್ಯ ಪಡೆಯಲು ಮತ್ತು. ಕಠಿಣ ಪರಿಶ್ರಮದ  ಮೂಲಕ ಮಾಡುವ ವ್ರತದಿಂದ  ಅಯ್ಯಪ್ಪ    ವ್ರತಧಾರಿಗಳು ಕಠಿಣ ಶ್ರಮ ಮತ್ತು ಶ್ರದ್ಧಾ ಭಕ್ತಿಯ ಮೂಲಕ ಪರಿಪೂರ್ಣ ಫಲಸಿದ್ಧಿ ಪಡೆಯಲು ಸಾಧ್ಯ‌. ಭಕ್ತರು ದಾನಿಗಳು ಹಾಗೂ ಸಮಿತಿಯ ಸದಸ್ಯರು ಮತ್ತು ಶ್ರೀ ಲಕ್ಷ್ಮಿನಾರಾಯಣ ಭಜನಾ ಮಂಡಳಿ ಸರ್ವ ಸದಸ್ಯರ ನಿಸ್ಸಾರ್ಥ ಸೇವೆ ಸಹಕಾರದಿಂದ 29ನೇ  ಅಯ್ಯಪ್ಪ ಸ್ವಾಮಿ ಮಹಾಪೂಜೆ ಯಶಸ್ವಿಯಾಗಿ ಜರುಗಿದೆ ಎಂದು ಹೇಳಿ ಗುರುಸ್ವಾಮಿಯವರಿಗೆ ಅನುಗ್ರಹ ಪ್ರಸಾದ ನೀಡಿದರು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ನೆರವೇರಿತು. 

ದೇವರ ಪ್ರತಿಬಿಂಬದ ಮೂಲಕ ದೇವರನ್ನು ಸ್ಮರಿಸಿದಾಗ ದೇವರ ರೂಪ ನಮ್ಮ ಮನಸ್ಸಿನಲ್ಲಿ ನೆಲೆ ನಿಲ್ಲುತ್ತದೆ. ಪೂಜಾ ವೇಳೆಯ ಸಂಕಲ್ಪ ಹೃದಯದ ಅಂತರಾಳದಲ್ಲಿ ಸ್ಥಾಪಿತಗೊಳ್ಳುತ್ತದೆ    ಶ್ರೀ ಲಕ್ಷ್ಮಿನಾರಾಯಣ ನೆಲೆನಿಂತ ಈ ಪುಣ್ಯ ಜಾಗದಲ್ಲಿ ಶ್ರೀ ಹರಿಪುತ್ರ ಅಯ್ಯಪ್ಪ ಸ್ವಾಮಿಯ ಈ ವಿಶೇಷ ಪೂಜಾ   ಕಾರ್ಯಕ್ರಮಕ್ಕೆ ವಿಶೇಷವಾಗಿ  ತನುಮನಧನಗಳಿಂದ ಸಹಕರಿಸಿದ ಭಕ್ತರಿಗೂ ಹಾಗೂ ಭಕ್ತಿಯಿಂದ ದರ್ಶನ ಪಡೆದ ಸರ್ವರಿಗೂ ಅಯ್ಯಪ್ಪ ಸ್ವಾಮಿಯ ಅನುಗ್ರಹ  ಪ್ರಾಪ್ತಿಯಾಗಲಿ 

ಸಾಣೂರು ಸಾಂತಿಂಜ  ಜನಾರ್ಧನ ಭಟ್, ಪ್ರಧಾನ ಅರ್ಚಕರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮೀರಾಗಾಂವ್

ಪ್ರೀತಿ ಪ್ರೇಮ ಭಾವೈಕ್ಯತೆಯ ಸೌಹಾರ್ದತೆ ಜೊತೆಗೆ ಆಧ್ಯಾತ್ಮಿಕತೆಯ ಸಂಸ್ಕೃತಿ ಯೊಂದಿಗೆ ಬೆಳೆಯುತ್ತಿರುವ ಮೀರಾ-ಬಾಯಂಧರ್ ನಗರಕ್ಕೆ ದಕ್ಷಿಣ ಭಾರತದ ಕೊಡುಗೆ ಅನನ್ಯವಾಗಿದೆ . ಮೂಲಭೂತ ಪ್ರಗತಿಯ ಚಿಂತನೆಗೆ ಹೆಚ್ಚು ಒತ್ತು ನೀಡುವ ಮೂಲಕ ಇಲ್ಲಿನ ಜನರ ಆಶಯದಂತೆ ನಗರವನ್ನು ಸಮೃದ್ಧ ಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸುಭದ್ರ ದೇಶದ ಪ್ರಗತಿಯ ಕಾಲಘಟ್ಟದಲ್ಲಿ ದೇಶವು ಇನ್ನಷ್ಟು ದೂರ ದೃಷ್ಟಿ ಚಿಂತನೆಯ ಮೂಲಕ ದೇಶವು ಉನ್ನತ ಭವಿಷ್ಯದತ್ತ ಸಾಗಲಿದೆ.

ನರೇಂದ್ರ ಎಲ್. ಮೆಹ್ತಾ ,ಸ್ಥಳೀಯ ಶಾಸಕರು ಮೀರಾ ಬಾಯಂಧರ್

ಕಾರ್ಯಕ್ರಮದಲ್ಲಿ ಬಂಟರ ಸಂಘ ಮೀರಾ ಬಾಯಂಧರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು ಬಂಟರ ಸಂಘ ಮುಂಬೈ ಜೊತೆ ಕಾರ್ಯದರ್ಶಿ, ಗಿರೀಶ್ ಶೆಟ್ಟಿ ತೆಳ್ಳಾರು ಸ್ಥಳೀಯ ಬಿಜೆಪಿ ನೇತಾರ ಸಂಪತ್ ಶೆಟ್ಟಿ ಬಂಟ್ಸ್ ಫೋರಂ ಮೀರಾ ಬಾಯಂಧರ್ ಅಧ್ಯಕ್ಷರಾದ ಉದಯ ಶೆಟ್ಟಿ ಮಲಾರ್ ಬೀಡು ಇನ್ನಿತರ ಸ್ಥಳೀಯ ಸಂಘ ಸಂಸ್ಥೆ ಗಳ ಪದಾಧಿಕಾರಿಗಳು  ಗಣ್ಯರು,  ಉದ್ಯಮಿಗಳು ಅಯ್ಯಪ್ಪ ಸ್ವಾಮಿಯ ಸಾವಿರಾರು ಭಕ್ತರು ದರ್ಶನ ಪಡೆದರು ಶ್ರೀ ಅಯ್ಯಪ್ಪ ಸ್ವಾಮಿ ಕೃಪೆಗೆ ಪಾತ್ರರಾದರು  ಬಳಿಕ ಅನ್ನ ಸಂತರ್ಪಣೆ ನೆರವೇರಿತು.. ರಂಗನಟ ನಿರ್ದೇಶಕ ಜಿ.ಕೆ.ಕೆಂಚನಕೆರೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.



Related posts

ಮುಂಬೈಯ ಉದ್ಯಮಿ, ಸಂಘಟಕ ಶ್ರೀನಿವಾಸ ಸಾಫಲ್ಯ ಅವರ ಸೋಮೇಶ್ವರ ನಿವಾಸದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ,ಶ್ರೀ ಶನಿ ಮಹಾಪೂಜೆ.

Mumbai News Desk

ದಿ. ಕರ್ನಾಟಕ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿ 28ನೇ ವಾರ್ಷಿಕ ಮಹಾಸಭೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) 25ನೇ ಸಂಸ್ಥಾಪನಾ ದಿನಾಚರಣೆ, 25 ಸಂಘ – ಸಂಸ್ಥೆಗಳಿಗೆ ವಿಶೇಷ ಪುರಸ್ಕಾರ ಸಮಾರಂಭಕ್ಕೆ ಚಾಲನೆ

Mumbai News Desk

ಮಲಾಡ್   ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆಯ 12ನೇ ವಾರ್ಷಿಕ ಮಹಾಪೂಜೆ

Mumbai News Desk

ಡೊಂಬಿವಲಿ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರ: 67ನೇ ವಾರ್ಷಿಕ ಮಹಾಪೂಜೆ ಸಂಭ್ರಮ

Mumbai News Desk

ಬಿಲ್ಲವರ ಅಸೋಸಿಯೇಷನ್‌ನ ಭಾಂಡುಪ್ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ಜಯಂತಿ ಉತ್ಸವ

Mumbai News Desk