28.4 C
Mumbai
March 7, 2026
Mumbai News Kannada
ಮುಂಬಯಿ

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಸಂಚಾಲಕರು ಶ್ರೀ ಮುಂಬ್ರಾ ಮಿತ್ರ ಭಜನಾ ಮಂದಿರ – 47 ನೇ ವಾರ್ಷಿಕ ಮಹಾ ಸಭೆ





ಮುಂಬ್ರಾ ಮಿತ್ರ ಭಜನಾ ಮಂಡಳಿಯ 47 ನೇ ವಾರ್ಷಿಕ ಮಹಾಸಭೆಯು 18 ಆಗಸ್ಟ್ ರಂದು ಬೆಳಿಗ್ಗೆ 10.30 ಗಂಟೆಗೆ ಸರಿಯಾಗಿ ಡೊಂಬಿವಿಲಿ ಪೂರ್ವದ ಯಶವಂತ್ ನಗರದ ರಾಮಚಂದ್ರ ನಿವಾಸ್ ದಲ್ಲಿರುವ ಮಂದಿರದ ಸಭಾಗ್ರಹದಲ್ಲಿ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಸುವರ್ಣರವರ ಅಧ್ಯಕ್ಷತೆಯಲ್ಲಿ ಜರಗಿತು ದೇವತಾ ಪ್ರಾರ್ಥನೆಯೊಂದಿಗೆ ಜರಗಿತು ಹಾಗೂ ಗತ ವರ್ಷದಲ್ಲಿ ನಿಧನರಾದ ಸದಸ್ಯರುಗಳಿಗೆ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಮಹಾಸಭೆಯಲ್ಲಿ ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಸಚಿನ್ ಜಿ. ಪೂಜಾರಿ ರವರು ಸ್ವಾಗತಿಸಿ ಮತ್ತು ಗತ ವರ್ಷದ ವರದಿ ಹಾಗೂ ಗತ ವರ್ಷದ ಮಹಾಸಭೆಯ ಟಿಪ್ಪಣಿಯನ್ನು ಓದಿ ಮಂಜೂರು ಮಾಡಲಾಯಿತು . ಕೋಶಾಧಿಕಾರಿ ಶ್ರೀ ಪ್ರವೀಣ್ ಶೆಟ್ಟಿ ಆಯಾ ವ್ಯಯ ಪಟ್ಟಿ ಮಂಡಿಸಿದರು.

ಸಭೆಯಲ್ಲಿ ನವೆಂಬರ್ ತಿಂಗಳಲ್ಲಿ ಏಕಾಹ ಭಜನೆ ಹಾಗು ಡಿಸೆಂಬರ್ ತಿಂಗಳಲ್ಲಿ ಕಾರ್ತೀಕ ದೀಪೋತ್ಸವ ಹಾಗು ರಕ್ತ ದಾನ ಶಿಬಿರ ಕೈಗೊಳ್ಳುವುದಾಗಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು ಮಂದಿರ ದ ಸುವರ್ಣ ಮಹೋತ್ಸವದ ಬಗ್ಗೆ ಪೂರ್ವ ತಯಾರಿ ಹಾಗು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮುಂಬರುವ ಸುವರ್ಣ ಮಹೋತ್ಸವಕ್ಕೆ ದೇವರಿಗೆ ಏಕ ಶಿಲಾ ಪಾಣಿ ಪೀಠ ಮತ್ತು ದೇವರ ಬಿಂಬಕ್ಕೆ ಪ್ರಭಾವಳಿಯ ಅವಶ್ಯಕತೆ ಇದ್ದು ಉಪಾಧ್ಯಕ್ಷರಾದ ಅರವಿಂದ್ ಪದ್ಮಶಾಲಿ, ಗೌರವ ಅಧ್ಯಕ್ಷರಾದ ನಿತಿನ್ ಪ್ರಕಾಶ್ ಪುತ್ರನ್ ರವರು ಮಾತಾಡುತ್ತ ನಾವೆಲ್ಲರೂ ಸೇರಿ ಪೂರ್ಣ ಸಹಕಾರ ನೀಡುವ ಬಗ್ಗೆ ಭರವಸೆ ನೀಡಿದರು.

ಮಂದಿರದ ವತಿಯಿಂದ ಜರಗುವ ಧಾರ್ಮಿಕ , ಸಾಮಾಜಿಕ , ಶೈಕ್ಷಣಿಕ ಕಾರ್ಯಕ್ರಮಗಳಿಗೆ ತನು-ಮನ-ಧನ ದ ಸಹಾಯವನ್ನು ನೀಡುತಾ ಬಂದಿರುವ ದಾನಿಗಳಿಗೆ , ಸದಸ್ಯರುಗಳಿಗೆ ಕೃತಜ್ಞತೆಯನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು. ಹೊಸದಾಗಿ ಮಂದಿರದ ಸದಸ್ಯತನವನ್ನು ಪಡೆದ ಎಲ್ಲ ಸದಸ್ಯರನ್ನು ಅಭಿನಂದಿಸಲಾಯಿತು .

ಮಂದಿರದ ಕಾರ್ಯಕಲಾಪದ ಬಗ್ಗೆ ಸದಸ್ಯರ ಪರವಾಗಿ ಸುರೇಶ್ ನಾಯ್ಕ್ , ಲತೇಶ್ ಸಾಲಿಯಾನ್ , ಹರೀಶ್ ಪದ್ಮಶಾಲಿ , ಪ್ರಶಾಂತ್ ಪೂಜಾರಿ, ಸವಿತಾ ಸಾಲಿಯಾನ್ , ಸ್ನೇಹ ಪೆವೇಕರ್ , ನಯನ ಕಾಂಚನ್ ಸಲಹೆ ನೀಡಿ ಸಹಕರಿಸಿದರು. ನಂತರ ಗೌರವ ಪ್ರದಾನ ಕಾರ್ಯದರ್ಶಿ ಸಚಿನ್ ಪೂಜಾರಿ ರವರು ಸರ್ವರನ್ನು ವಂದಿಸಿದರು.



Related posts

ಶ್ರೀ ಬಾಟ್ಲಾ ದೇವಿ ಅಯ್ಯಪ್ಪ ಭಕ್ತವೃಂದ ಭಾಟ್ಲಾ ದೇವಿ ಮಂದಿರ ದಹಿಸರ್ ಪೂರ್ವ 35ನೇ ಅಯ್ಯಪ್ಪ ಮಹಾಪೂಜೆ,  ಅನ್ನ ಸಂತರ್ಪಣೆ

Mumbai News Desk

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್  ಸ್ಥಳೀಯ ಸಮಿತಿ, ಕಾರ್ಯಾಧ್ಯಕ್ಷರಾಗಿ ಆನಂದ ಕೆ. ಕುಲಾಲ್ , ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ  ರತ್ನಾ ಡಿ ಕುಲಾಲ್  ಆಯ್ಕೆ

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಮಹಿಳಾ ವಿಭಾಗದ ವತಿಯಿಂದ ಅಷ್ಟ ವಿನಾಯಕ ದರ್ಶನ ಪ್ರವಾಸ.

Mumbai News Desk

ಕರ್ನಾಟಕ ಸಂಘ ಡೊಂಬಿವಲಿ: ಪುರಂದರ ದಾಸರ ಆರಾಧನಾ ಮಹೋತ್ಸವ ಹಾಗೂ ಪುರಂದರದಾಸರ ಭಜನಾ ಸ್ಪರ್ಧೆ

Mumbai News Desk

ಬಂಟರ ಸಂಘ ಮುಂಬಯಿ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯಿಂದ  “ಶ್ರೀ ಶನೀಶ್ವರ ಮಹಾತ್ಮ” ತಾಳಮದ್ದಳೆ.

Mumbai News Desk

ಮುಲುಂಡಿನ ವಿದ್ಯಾ ಪ್ರಸಾರಕ ಮಂಡಳದ ಕನ್ನಡ ಮಾಧ್ಯಮದ ಶಾಲೆಯಲ್ಲಿ ಪಾಲಕ ಶಿಕ್ಷಕ ಸಂಘದ ಮಹಾಸಭೆ

Mumbai News Desk