32 C
Mumbai
March 7, 2026
Mumbai News Kannada
ಮುಂಬಯಿ

ಮುಂಬಯಿ ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ ಸರಸ್ವತಿ ದೇವಿ ಪೂಜಾರಾಧನೆ





ಸಂತಾಕ್ರೂಜ್ : ಮುಂಬೈಯ ಪ್ರತಿಷ್ಟಿತ ಸಂಸ್ಥೆಯಾದ ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ ಸರಸ್ವತಿ ದೇವಿಯ ಪೂಜಾರಾಧನೆಯ ಕಾರ್ಯಕ್ರಮವು ದಿನಾಂಕ 14/02/2025 ರ ಶುಕ್ರವಾರ ಸಾಯಂಕಾಲ 7-00 ಗಂಟೆಗೆ ರಂದು ಶಾಲೆಯ ಸಭಾ ಭವನದಲ್ಲಿ ಅದ್ದೂರಿಯಾಗಿ ಜರುಗಿತು.ಶಾರದಾ ದೇವಿ ಪೂಜಾರಾಧನೆಯ ಕಾರ್ಯಕ್ರಮವು ಮಾತೃ ಸಂಸ್ಥೆಯ ಶಾಲಾ ಸಮಿತಿಯ ಸಲಹೆಗಾರ ಬನ್ನಂಜೆ ರವೀಂದ್ರ ಅಮೀನ ಅವರ ಮಾರ್ಗದರ್ಶನದಡಿ
ಯಲ್ಲಿ ಜರುಗಿತು.

ಸಂಗೀತ ಎಂಬ ದೇವತಾ ಆರಾಧನೆ ಕಲೆಯ ಮೊದಲ ಮೆಟ್ಟಲು ಭಜನೆ ಭಕ್ತಿ ತನ್ಮಯತೆಯಿಂದ ದಿನವೂ ದೇವರ ನಾಮ ಹಾಡುವುದರಿಂದ ನಮ್ಮ ಮನಸ್ಸು ಸಾತ್ವಿಕತೆಯ ಮಾರ್ಗದೆಡೆಗೆ ಸಾಗುತ್ತದೆ. ಜೀವನ ಉಲ್ಲಾಸದಿಂದ ತುಡಿಯುತ್ತದೆ. ಬಾಳು ಸಾರ್ಥಕತೆಯನ್ನು ಪಡೆಯುತ್ತದೆ. ಇಂತಹ ಭಕ್ತಿ ಮಾರ್ಗದೆಡೆಗೆ ಸಾಗಲು ಭಜನೆ ದೇವರ ಮಾಡಬೇಕು. ಮತ್ತು ಬ್ರಹ್ಮ ಶಕ್ತಿಯನ್ನು ಪಡೆದ ಜ್ಞಾನ ದೇವತೆಯಾದ ಸರಸ್ವತಿ ದೇವಿಗೆ ಪೂಜೆ ಸಲ್ಲಿಸಿದರೆ ಜ್ಞಾನ ಸಂಪನ್ನವಾಗುತ್ತದೆ ಎಂದು ಯಶಸ್ವಿ ಭಜನಾ ಮಂಡಳಿ ಡೊಂಬಿವಲಿಯ ಮುಖ್ಯ ರೂವಾರಿ ಯಕ್ಷಗಾನದ ಭಾಗವತರಾದ ಶ್ರೀ ನಾರಾಯಣ ಪೂಜಾರಿ ಅವರು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಪೂಜಾರಾಧನೆಯನ್ನು ಭಜನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಭಕ್ತಿ ಸುಧೆಯನ್ನು ಉಣ ಪಡಿಸಿ ಜ್ಞಾನದ ಬೆಳಕನ್ನು ಹರಿಸಿದರು.ಯಶಸ್ವಿ ಭಜನಾ ಮಂಡಳಿ ಡೊಂಬಿವಲಿ ಇದರ ಮುಖ್ಯ ಪಾತ್ರದಾರಿ ಯಕ್ಷಗಾನದ ಭಾಗವತರಾಗಿರುವ ಶ್ರೀ ನಾರಾಯಣ ಪೂಜಾರಿ ಅವರಿಗೆ ಶಾಲಾ ಸಮಿತಿಯ ಸಲಹೆಗಾರ ಮಾರ್ಗದರ್ಶಕ ಶ್ರೀ ಬನ್ನಂಜೆ ರವೀಂದ್ರ ಅಮೀನ ಅವರು ಶಾಲು ಹೊದಿಸಿ ಪುಷ್ಪ ಗುಚ್ಚಮತ್ತು ನೆನಪಿನ ಕಾಣಿಕೆಯನ್ನು ಕೊಟ್ಟು ಗೌರವಿಸಿದರು. ಮತ್ತು ಇನ್ನೊರ್ವ್ ಸದಸ್ಯೆ ಶೀಲಾ ಸುವರ್ಣ ಅವರಿಗೆ ಶ್ರೀಮತಿ ನಮಿತಾ ಸುವರ್ಣರು ಶಾಲು ಹೊದಿಸಿ ಗುಚ್ಚ ನೀಡಿ ಸತ್ಕರಿಸಿದರು.ಬೋರ್ಡ ಪರೀಕ್ಷೆ ಬರೆಯುತ್ತಿರುವ ನಮ್ಮ ಶಾಲಾ ಹತ್ತನೇ ವಿದ್ಯಾರ್ಥಿಗಳಿಗೆ ಶುಭ ಕೋರಲಾಯಿತು.

ಶಾಲೆಯಲ್ಲಿ ನಡೆದ ಸರಸ್ವತಿ ದೇವಿ ಕಾರ್ಯಕ್ರಮದಲ್ಲಿ ಯಶಸ್ವಿ ಭಜನಾ ಮಂಡಳಿ ಡೊಂಬಿವಲಿ ಇವರು ಸುಂದರವಾಗಿ ಹಾಡುಗಾರಿಕೆಯಿಂದ ವಿದ್ಯಾರ್ಥಿಗಳನ್ನು ಮುಗ್ಧಗೊಳಿಸಿದರು.ಈ ಸುಂದರವಾದ ಭಕ್ತಿ ಕಾರ್ಯಕ್ರಮದಲ್ಲಿ ಎಸ್ ಎಮ್ ಡಿ ಸಿ ಅಧ್ಯಕ್ಷೆ ಶ್ರೀಮತಿ ತಾಹಿರ ಶೇಕ್,ವಕೋಲಾ ಶಾಲಾ ಶಿಕ್ಷಕ ಆನಂದ ಭಾವಿಕಟ್ಟಿ,ಹಳೆ ವಿದ್ಯಾರ್ಥಿಗಳಾದ ಸುಷ್ಮಾ ಪೂಜಾರಿ, ನಿಕಿತಾ ಪೂಜಾರಿ ರಶ್ಮಿ ಸ್ವಾಮಿ ಮೀನಾಕ್ಷಿ ಪೂಜಾರಿ ವಾಸು ಗೌಡ ಸುದರ್ಶನ ಗೌಡ ಅಶೋಕ ಗೌಡ ಉಪಸ್ಥಿತಿದ್ದು ಶೋಭೆ ತಂದರು.

ಸರಸ್ವತಿ ದೇವಿಯ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಾಧ್ಯಾಪಕ ಶ್ರೀ ಮಲ್ಲಿಕಾರ್ಜುನ ಬಡಿಗೇರರು ಪ್ರಾರ್ಥನೆ ಸಲ್ಲಿಸಿದರು.ಪೂಜಾ ಕಾರ್ಯಕ್ರಮದ ಯಶಸ್ವಿಗೆ ಶಿಕ್ಷಕ-ಶಿಕ್ಷಕೇತರರು ಸಹಕರಿಸಿದರು.ಸರ್ವರು ದೇವಿ ಪ್ರಸಾದ ಸ್ವೀಕರಿಸಿ ದೇವಿ ಕೃಪೆಗೆ ಪಾತ್ರರಾದರು.ಕೊನೆಗೆ ಉಪಹಾರದ ವ್ಯವಸ್ಥೆಯನ್ನು ಮಸೂಮ ಸಂಸ್ಥೆಯವರು ಮಾಡಿದ್ದರು.

===============================



Related posts

ದಹಿಸರ್ ಪೂರ್ವ :ಶ್ರೀ ಜಯಸ್ವಾಮಿ ದಹಿಸರ್ ಅತ್ತೂರು ಗುಂಡ್ಯಡ್ಕ ಇವರ ಆಯೋಜನೆಯಲ್ಲಿ, 18ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ ಸಂಪನ್ನ

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ) ಮುಂಬಯಿ ನೂತನ ಅಧ್ಯಕ್ಷರಾಗಿ ರವೀಶ್ ಜಿ ಆಚಾರ್ಯ ಆಯ್ಕೆ 

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಮೀರಾಗಾಂವ್ 33ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ, ದೀಪೋತ್ಸವ, ಅನ್ನದಾನ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ ಕೋಟ್ಯಾನ್ ಆಯ್ಕೆ.

Mumbai News Desk

ಡೊಂಬಿವಲಿ: ಶ್ರೀ ಜೈ ಭವಾನಿ ಶನೀಶ್ವರ ಮಂದಿರದಲ್ಲಿ ಶನಿ ಮಹಾಪೂಜಾ ಮಹೋತ್ಸವ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರೀಕ್ಷಾ ಪುಷ್ಪರಾಜ್ ಪೂಂಜಾ ಗೆ ಶೇ 93.20 ಅಂಕ.

Mumbai News Desk