April 1, 2025
ಸುದ್ದಿ

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಮಿಸ್ ಕ್ವೀನ್ ಕರಾವಳಿ 2025 ಆಗಿ ಪೂರ್ವಿ ಇ ಕುಲಾಲ್ ಆಯ್ಕೆ

ಮೂಡುಬಿದಿರೆಯ ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊ ನೇತೃತ್ವದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ 22 ಫೆಬ್ರವರಿ 2025 ರಂದು ಆಯೋಜಿಸಿದ್ದ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ -2025 ಸ್ಪರ್ಧೆಯಲ್ಲಿ 60 ಮಕ್ಕಳು ಭಾಗವಹಿಸಿದ್ದು, ಒಟ್ಟು 65,555 ರೂ. ಬಹುಮಾನ ನೀಡಲಾಗಿದೆ ಎಂದು ಸ್ಪರ್ಧೆಯ ತೀರ್ಪುಗಾರ ಸಂದೀಪ್ ಶೆಟ್ಟಿ ಮಂಗಳೂರು ತಿಳಿಸಿದರು.
7ರಿಂದ 11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಿನ್ಸ್ ಆಫ್ ಕರಾವಳಿ 2025 ವಿನ್ನರ್ ಆಗಿ ಮಂಗಳೂರು ಎಸ್‌ಡಿಎಂ ಶಾಲೆಯ ಶೌರ್ಯ ರಾವ್, ಬಾಲಕಿಯರ ವಿಭಾಗದಲ್ಲಿ ಪ್ರಿನ್ಸೆಸ್ ಆಫ್ ಕರಾವಳಿ 2025 ವಿನ್ನರ್ ಆಗಿ ಮಂಗಳೂರು ಕಾರ್ಮೆಲ್ ಸಿಬಿಎಸ್‌ಇ ಶಾಲೆಯ ವಿಯಾ ಸಾಯಿ, ಸ್ಟಾರ್ ಕಿಡ್ ಕರಾವಳಿ 2025 ವಿನ್ನರ್ ಆಗಿ ಕುಳಾಯಿ ರಾಯನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಐಶಾನಿ ಶೆಟ್ಟಿ ಆಯ್ಕೆಯಾಗಿದ್ದಾರೆ .


11ರಿಂದ 17 ವರ್ಷದೊಳಗಿನ ಹುಡುಗರ ವಿಭಾಗದ ಮಿಸ್ಟರ್ ಟೀನ್ ಕರಾವಳಿ 2025 ವಿನ್ನರ್ ಆಗಿ ಕಿನ್ನಿಗೋಳಿ ಸೈಂಟ್ ಮೇರೀಸ್ ಸೆಂಟ್ರಲ್ ಸ್ಕೂಲ್‌ನ ಸಾನ್ವಿತ್ ಕುಲಾಲ್, ಹುಡುಗಿಯರ ವಿಭಾಗದಲ್ಲಿ ಮಿಸ್ ಟೀನ್ ಕರಾವಳಿ 2025 ವಿನ್ನರ್ ಆಗಿ ಮೂಡುಬಿದರೆ ರೋಟರಿ ಇಂಗ್ಲಿಷ್ ಮೀಡಿಯಂ ಶಾಲೆಯ ಧನ್ವಿ ಶೆಟ್ಟಿ, ಮಿಸ್ ಕ್ವೀನ್ ಕರಾವಳಿ 2025 ವಿನ್ನರ್ ಆಗಿ ಉಡುಪಿ ಹಿರಿಯಡ್ಕ ಗ್ರೀನ್ ಪಾರ್ಕ್ ಶಾಲೆಯ ಪೂರ್ವಿ ಕುಲಾಲ್, ಪಾಪ್ಯುಲರ್ ಐಕಾನ್ ಕರಾವಳಿ 2025 ವಿನ್ನರ್ ಆಗಿ ಆಲಂಗಾರು ಸೈಂಟ್ ಥೋಮಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಸಾಧ್ವಿ ಶೆಟ್ಟಿ ವಿನ್ನರ್ ಆಗಿ ಆಯ್ಕೆಯಾಗಿದ್ದಾರೆ ಎಂದರು.
ಸ್ವಾಮೀಸ್ ಬೆದ್ರ ಕ್ಲಾಸಿಕ್ 2025 ಮಿ. ದಕ್ಷಿಣ ಕನ್ನಡ ದೇಹದಾರ್ಢ್ಯ ಸ್ಪರ್ಧೆಯಲ್ಲಿ 100 ಸ್ಪರ್ಧಿಗಳು ಭಾಗವಹಿಸಿದ್ದು, ವಿಜೇತರಿಗೆ ಒಟ್ಟು 3 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ ಎಂದರು.
ಸಂಸ್ಥೆಯ ಸ್ವಾಮಿಪ್ರಸಾದ್, ಎಂ.ಜೆ. ಅನೀಶ್, ಸ್ಪರ್ಧೆಯಲ್ಲಿ ವಿಜೇತ ಮಕ್ಕಳು ಉಪಸ್ಥಿತರಿದ್ದರು.

Related posts

ಪೂರ್ವ ಆಫ್ರಿಕಾದಲ್ಲಿ ಬಂಟ ಸಂಭ್ರಮ -2೦23 ಕಾರ್ಯಕ್ರಮ

Mumbai News Desk

ಖಾರ್ ಪೂರ್ವ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿಯಾದ ಯೋಗೇಶ್ ಕೆ. ಹೆಜ್ಮಾಡಿ ಹಾಗೂ ಅವರ ಧರ್ಮಪತ್ನಿಯವರಾದ ಲೀಲಾವತಿ ವೈ. ಹೆಜ್ಮಾಡಿ* ಯವರು ದಾಂಪತ್ಯ ಜೀವನದ ಸುವರ್ಣ ಮಹೋತ್ಸವಕ್ಕೆ ಪಾದಾರ್ಪಣೆ

Mumbai News Desk

ರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಮತ್ತು ಸಬಲೀಕರಣ ಸಮಸ್ಯೆಗಳ ಬಗ್ಗೆ ಚರ್ಚೆ.

Mumbai News Desk

ಬೆಂಗಳೂರಲ್ಲಿ ಮುಂಬಯಿಯ ನಿಶಿತ ಸೂರ್ಯಕಾಂತ್ ಸುವರ್ಣರ ಇಮೇಜ್ ಕನ್ಸಲ್ಟೆಂಟ್ ನ ಅದ್ದೂರಿಯ ಕರ್ನಾಟಕ ಸ್ಟೈಲ್ ಐಕಾನ್ 2023 ಕಾರ್ಯಕ್ರಮ

Mumbai News Desk

ಕೊಂಡೆವೂರು ಶ್ರೀಗಳ 21 ನೇ ಚಾತುರ್ಮಾಸ್ಯ ವ್ರತಾಚರಣೆಉಪ್ಪಳ ಜು:    ಕೊಂಡೆವೂರು

Mumbai News Desk

ಉಭಯ ಜಿಲ್ಲೆಗಳ ಹೆದ್ದಾರಿ ಸಮಸ್ಯೆಯ ಪರಿಹಾರಕ್ಕೆ ಕೇಂದ್ರ ಸಚಿವರನ್ನು ಭೇಟಿಯಾದ ಉಡುಪಿ/ ಮಂಗಳೂರು ಸಂಸದರು

Mumbai News Desk