September 6, 2026
Mumbai News Kannada
ಪ್ರಕಟಣೆ

ಜಯ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು : ಮಾ. 8ರಂದು ಜಾಗತಿಕ ಮಹಿಳಾ ದಿನಾಚರಣೆ





ಬಿಲ್ಲವ ಸಮಾಜದ ಮಹಾನ್ ನಾಯಕ, ಅಭಿವೃದ್ಧಿಯ ಹರಿಕಾರ ದಿ. ಜಯ ಸಿ ಸುವರ್ಣ ಅವರ ಅಭಿಮಾನಿಗಳ, ಹಿತೈಷಿಗಳ ಸಂಘಟನೆ ಜಯ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು ವತಿಯಿಂದ ಮಾರ್ಚ್ 8ರ ಶನಿವಾರ, ಮಧ್ಯಾಹ್ನ 2.30ಗಂಟೆಗೆ ‘ಜಾಗತಿಕ ಮಹಿಳಾ ದಿನಾಚರಣೆ’ ಕಾರ್ಯಕ್ರಮ ಆಯೋಜಿಸಲಾಗಿದೆ. ಗೊರೇಗಾಂವ್ ಪೂರ್ವ ದಿ ಜಯ ಸಿ ಸುವರ್ಣ ಮಾರ್ಗ, ಜಯಲೀಲಾ ಬ್ಯಾಂಕ್ವೆಟ್ಸ್ ಹಾಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಶಿತಾ ಸೂರ್ಯಕಾಂತ ಸುವರ್ಣ ವಹಿಸಲಿದ್ದಾರೆ.
ಈ ಶುಭಾವಸರದಲ್ಲಿ ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಭಾರತ್ ಬ್ಯಾಂಕ್ ನ ಮಾಜಿ ಉಪಕಾರ್ಯಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ ಸಾಲ್ಯಾನ್ ಅವರಿಗೆ ‘ಜಯ ಸುವರ್ಣ’ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಮುಖ್ಯ ಅತಿಥಿಯಾಗಿ ಥಾಣೆಯ ಮಾಜಿ ಮೇಯರ್ ಮೀನಾಕ್ಷಿ ಶಿಂದೆ ಆಗಮಿಸಲಿರುವರು.
ಗೌರವ ಅತಿಥಿಗಳಾಗಿ ಜಯಲಕ್ಷ್ಮಿ ಪಿ ಸಾಲ್ಯಾನ್, ಜಯಶ್ರೀ ಎಮ್ ಹೆಜಮಾಡಿ, ಆಶಾ ಆರ್ ಬಂಗೇರ, ಶೋಭಾ ಎಸ್ ಪೂಜಾರಿ, ಕೃಪಾ ಬಿ ರಾಠೋಡ್, ಸ್ನೇಹಾ ಪಿ ಪೂಜಾರಿ, ಪ್ರಭಾ ಎನ್ ಸುವರ್ಣ, ಸುಜಾತ ಎಸ್ ಕೋಟ್ಯಾನ್ ಉಪಸ್ಥಿತರಿರುವರು.
ಈ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು, ಹಿರಿಯ ನಾಗರಿಕ ದಂಪತಿಗಳನ್ನು, ಹಾಗೂ ಸಮಾಜ ಸೇವೆಯಲ್ಲಿ ಕೊಡುಗೆ ನೀಡಿದ ಮಹಿಳೆಯರನ್ನು ಗೌರವಿಸಲಾಗುವುದು.
ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮದೊಂದಿಗೆ, ಇತರ ಆಕರ್ಷಕ ವಿನೋದವಳಿ ಸ್ಪರ್ಧೆ ನಡೆಯಲಿದೆ.
ಜಯ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು, ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.



Related posts

ಮೂಲ ಸಿರಿ ಕುಮಾರ ಶ್ರೀ ಬ್ರಹ್ಮಲಿಂಗೇಶ್ವರ ಆದಿ ಆಲಡೆ, ಪಾಂಗಾಳ, ವಾರ್ಷಿಕ ಪಾಂಗಾಳ ಆಯನ ಸಿರಿಜಾತ್ರೆ

Mumbai News Desk

ಪುನೀತ್ ನ ಚಿಕಿತ್ಸೆ ನೆರವಿಗಾಗಿ ಮನವಿ

Mumbai News Desk

ಡಿ.18 ರಂದು ಬಂಟರ ಸಂಘ ಕುರ್ಲಾ ದಲ್ಲಿ ಸಮಾಜರತ್ನ ಲೀಲಾಧರ ಶೆಟ್ಟಿ, ಕಾಪು ಅವರ ಶ್ರದ್ಧಾಂಜಲಿ ಸಭೆ

Mumbai News Desk

ಸೆ.20 : ಮಾತೃಭೂಮಿ ಕೋ -ಆಪರೇಟಿವ್ ಕ್ರೆಡಿಟ್ ಸೊಸೈಟಿ ಇದರ 37ನೇ ವಾರ್ಷಿಕ ಮಹಾಸಭೆ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ(ರಿ) ಮುಂಬಯಿ : ಫೆ. 16 ರಂದು “ಅರಸಿನ ಕುಂಕುಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ”

Mumbai News Desk

ಶ್ರೀ ಹಟ್ಟಿಯಂಗಡಿ ಮೇಳದ ಹನ್ನೆರಡನೇ ವರ್ಷದ ಮುಂಬಯಿ ಪ್ರವಾಸ: ಜುಲೈ 10 ರಿಂದ 25 ರವರೆಗೆ ಯಕ್ಷಗಾನ ವೈಭವ

Mumbai News Desk