
ಹೆಜಮಾಡಿ ಸಣ್ಣಗುಂಡಿ ಮೊಗವೀರ ಸಭಾ ಸಂಚಾಲಕತ್ವದ ಗೀತಾ ಮಂದಿರ ಸೇವಾ ಸಮಿತಿ, ತಾ. 16.7.25ರಂದು, ಪ್ರವಚನಕಾರರಾದ ಭಾಸ್ಕರ್ ಕೆ ಪಡುಬಿದ್ರಿ ಹಾಗೂ ವಚನಕಾರರಾದ ಗಣಪತಿ ಕಾಮತ್ ಪಡುಬಿದ್ರಿ, ಇವರಿಂದ ಪ್ರಾರಂಭಗೊಂಡ “ಕುಮಾರ ವ್ಯಾಸ ಭಾರತ” ಎಂಬ ಸತ್ಕಾವ್ಯ ವಾಚನದ ಮಂಗಳೋತ್ಸವ ಆಗಸ್ಟ್ 17ರಂದು, ಆದಿತ್ಯವಾರ, ರಾತ್ರಿ 8.30ಕ್ಕೆ ಜರಗಲಿದೆ.
ಕಾರ್ಯಕ್ರಮ :
ಮಧ್ಯಾಹ್ನ 3 ಗಂಟೆಗೆ : ಭಜನಾ ಕಾರ್ಯಕ್ರಮ (ಸ್ಥಳೀಯ ಭಜನಾ ತಂಡದವರಿಂದ)
ಸಂಜೆ ಗಂಟೆ 4ಕ್ಕೆ : ಕಥಾ ಪ್ರವಚನ ಪ್ರಾರಂಭ
ಸಂಜೆ 6ಗಂಟೆಗೆ : ಸಭಾ ಕಾರ್ಯಕ್ರಮ
ರಾತ್ರಿ 7 ಗಂಟೆಗೆ : ಶ್ರೀ ಪಾಂಡುರಂಗ ಭಜನಾ ಮಂದಿರ ಮಟ್ಟು ಪಟ್ನ ಇವರಿಂದ ದೇವರ ನಾಮ ಸಂಕೀರ್ತನೆ
ರಾತ್ರಿ ಗಂಟೆ 8.30 ಕ್ಕೆ : ಮಂಗಳೋತ್ಸವ
ರಾತ್ರಿ ಗಂಟೆ 9ರಿಂದ : ಪ್ರಸಾದ ವಿತರಣೆ ಅನ್ನ ಸಂತರ್ಪಣೆ
ಆ ಪ್ರಯುಕ್ತ ಭಕ್ತಾಭಿಮಾನಿಗಳು ಸಕಾಲದಲ್ಲಿ ಆಗಮಿಸಿ ಶ್ರೀ ಕೃಷ್ಣದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ
ಸಣ್ಣಗುಂಡಿ ಮೊಗವೀರ ಸಭಾ, ಸಣ್ಣಗುಂಡಿ ಮೊಗವೀರ ಮಹಿಳಾ ಸಭಾ, ಗೀತಾ ಮಂದಿರ ಸೇವಾ ಸಮಿತಿ, ಸಣ್ಣಗುಂಡಿ ಮೊಗವೀರ ಸಭಾ ಮುಂಬೈ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು ವಿನಂತಿಸಿದ್ದಾರೆ.





