32 C
Mumbai
March 7, 2026
Mumbai News Kannada
ಪ್ರಕಟಣೆ

ನ.29 ರಂದು ಮುಂಬಯಿ ವಿವಿಯ ಕನ್ನಡ ವಿಭಾಗದಲ್ಲಿ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭ





ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಗೋರೆಗಾಂವ್ ಕರ್ನಾಟಕ ಸಂಘದ ಸಂಯುಕ್ತ ಆಶ್ರಯದಲ್ಲಿ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

​ದಿನಾಂಕ 29-11-2025, ಶನಿವಾರದಂದು, ಅಪರಾಹ್ನ 2.30 ರಿಂದ, ಸಾಂತಾಕ್ರೂಜ್ ಪೂರ್ವದಲ್ಲಿರುವ ಕಲೀನಾ ಕ್ಯಾಂಪಸ್‌ನ ಜೆ.ಪಿ.ನಾಯಕ್ ಭವನದಲ್ಲಿ ಈ ಸಮಾರಂಭ ನಡೆಯಲಿದೆ.

​ಸಮಾರಂಭದಲ್ಲಿ ಲೇಖಕ ಶ್ರೀನಿವಾಸ ಜೋಕಟ್ಟೆ ಅವರ ಮೂರು ಕೃತಿಗಳು ಮತ್ತು ಅನಿತಾ ಪಿ. ತಾಕೊಡೆ ಅವರ ಒಂದು ಕೃತಿ ಲೋಕಾರ್ಪಣೆಗೊಳ್ಳಲಿವೆ.

​ಬಿಡುಗಡೆಗೊಳ್ಳಲಿರುವ ಕೃತಿಗಳ ವಿವರ:

  1. “ಅದೆಲ್ಲಾ ಬಿಟ್ಟು” (ಕತೆಗಳು – ಸಾಹಿತ್ಯ ಸುಗ್ಗಿ ಪ್ರಕಾಶನ, ಬೆಂಗಳೂರು) – ಶ್ರೀನಿವಾಸ ಜೋಕಟ್ಟೆ
  2. “ಪ್ರಚಂಡ ಮತ್ತು ಮಹಾಕಾಲ” (ಲೇಖನಗಳು) – ಶ್ರೀನಿವಾಸ ಜೋಕಟ್ಟೆ
  3. “ಬದುಕು ಬತ್ತದ ಭರವಸೆ” (ಲೇಖನಗಳು – ಶ್ರೀರಾಮ ಪ್ರಕಾಶನ, ಮಂಡ್ಯ) – ಶ್ರೀನಿವಾಸ ಜೋಕಟ್ಟೆ
  4. “ಮೇಣಕ್ಕಂಟಿದ ಬತ್ತಿ” (ತಾಕೊಡೆ ಎಂಟರ್ ಪ್ರೈಸಸ್, ಮುಂಬಯಿ) – ಅನಿತಾ ಪಿ. ತಾಕೊಡೆ (ಈ ಕೃತಿಯು ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ ವಿಜೇತವಾಗಿದೆ.)

​ಕಾರ್ಯಕ್ರಮದ ವಿವರ:

  • ಅಧ್ಯಕ್ಷತೆ: ಡಾ. ಜಿ.ಎನ್. ಉಪಾಧ್ಯ (ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥರು)
  • ಕೃತಿಗಳ ಬಿಡುಗಡೆ:
    • ​ಸೂರ್ಯಕಾಂತ್ ಜಯ ಸುವರ್ಣ (ಕಾರ್ಯಾಧ್ಯಕ್ಷರು: ಭಾರತ್ ಬ್ಯಾಂಕ್, ಅಧ್ಯಕ್ಷರು: ರಾಷ್ಟ್ರೀಯ ಬಿಲ್ಲವ ಮಹಾಮಂಡಲ)
    • ​ಮಿತ್ರಾ ವೆಂಕಟ್ರಾಜ್ (ಪ್ರಶಸ್ತಿ ಪುರಸ್ಕೃತ ಕತೆಗಾರರು, ಕಾದಂಬರಿಕಾರರು)
    • ​ವಿಕ್ರಾಂತ್ ಎಸ್. ಉರ್ವಲ್ (ಆಡಳಿತ ನಿರ್ದೇಶಕರು: ಐಐಟಿಸಿ ಮುಂಬಯಿ)
  • ಕೃತಿಗಳ ಪರಿಚಯ:
    • ​ಡಾ| ದಿನೇಶ್ ಶೆಟ್ಟಿ ರೆಂಜಾಳ (ಪತ್ರಕರ್ತರು, ಉದಯವಾಣಿ – ಮುಂಬಯಿ)
    • ​ಅಮಿತಾ ಭಾಗ್ವತ್ (ಸಾಹಿತಿ, ‘ಹವ್ಯಕ ಸಂದೇಶ’ದ ಮಾಜಿ ಸಂಪಾದಕರು)
  • ಪ್ರಾಸ್ತಾವಿಕ: ಸರಿತಾ ಸುರೇಶ ನಾಯಕ್ (ಉಪಾಧ್ಯಕ್ಷರು: ಗೋರೆಗಾಂವ್ ಕರ್ನಾಟಕ ಸಂಘ)
  • ಕಾರ್ಯಕ್ರಮ ನಿರ್ವಹಣೆ: ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ (ಸಹಪ್ರಾಧ್ಯಾಪಕರು, ಕನ್ನಡ ವಿಭಾಗ ಮುಂಬಯಿ ವಿ.ವಿ.)

​ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಗೋರೆಗಾಂವ್ ಕರ್ನಾಟಕ ಸಂಘದ ಪದಾಧಿಕಾರಿಗಳು ಎಲ್ಲಾ ಪುಸ್ತಕ ಪ್ರೇಮಿಗಳಿಗೆ ಈ ಸಮಾರಂಭಕ್ಕೆ ಹಾರ್ದಿಕ ಸ್ವಾಗತವನ್ನು ಕೋರಿದ್ದಾರೆ.



Related posts

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 34ನೇ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ: ನವೆಂಬರ್ 30ರಂದು ವಿಜೃಂಭಣೆಯ ಆಚರಣೆ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ, ಥಾಣೆ : ಮೇ 18ರಂದು ಸಾಮೂಹಿಕ ಅಶ್ಲೇಷ ಬಲಿ ಪೂಜೆ

Mumbai News Desk

ಮಾ. 8 ರಂದು ಜಗಜ್ಯೋತಿ ಕಲಾವೃಂದ ಕಚೇರಿಯಲ್ಲಿ ಮಹಾಶಿವರಾತ್ರಿ ಪೂಜೆ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ(ರಿ) ಮುಂಬಯಿ : ಫೆ. 16 ರಂದು “ಅರಸಿನ ಕುಂಕುಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ”

Mumbai News Desk

ನ.19 ರಂದು ಪುಣೆಯಲ್ಲಿ ಸುವರ್ಣಯುಗ ಪುಸ್ತಕ ಬಿಡುಗಡೆ, ಭಾರತ್ ಬ್ಯಾಂಕ್ ನ ನೂತನ ನಿರ್ದೇಶಕರುಗಳಿಗೆ ಸನ್ಮಾನ

Mumbai News Desk

ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಆಗಸ್ಟ್ 10ರಂದು ‘ಪ್ರತಿಭಾ ಪುರಸ್ಕಾರ’, “ಆಟಿಡೊಂಜಿ ದಿನ”

Mumbai News Desk