July 23, 2026
Mumbai News Kannada
ಪ್ರಕಟಣೆ

ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಆಗಸ್ಟ್ 10ರಂದು ‘ಪ್ರತಿಭಾ ಪುರಸ್ಕಾರ’, “ಆಟಿಡೊಂಜಿ ದಿನ”







ಮುಂಬೈಯ ಪಶ್ಚಿಮ ಉಪನಗರ ನಾಯ್ಗ0ವ್, ವಸಾಯಿ, ನಾಲಾಸೋಪಾರ,ವಿರಾರ್ ಪರಿಸರದ ಮೊಗವೀರ ಬಂಧುಗಳ ಸಂಘಟನೆ ವಸಾಯಿ ತಾಲೂಕು ಮೊಗವೀರ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಅಟಿಡೊಂಜಿ ದಿನ ಕಾರ್ಯಕ್ರಮವು ಆಗಸ್ಟ್ 10ರಂದು,ರವಿವಾರ ಸಂಜೆ 4 ಗಂಟೆಯಿಂದ ವಸಾಯಿ ಪಶ್ಚಿಮ ಆನಂದ್ ನಗರ ನ್ಯೂ ವರ್ಷ ಸಂಕೀರ್ಣದ ಕೇಶವ ಕೊರಗಪ್ಪ ಸಾಲ್ಯಾನ್ ಸಭಾಗ್ರಹದಲ್ಲಿ ಜರಗಲಿದೆ.
ಮುಖ್ಯ ಅತಿಥಿಯಾಗಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ನೂತನ ಅಧ್ಯಕ್ಷ ಗಣೇಶ್ ಕಾಂಚನ್, ಗೌರವ ಅತಿಥಿಯಾಗಿ ದಿವ್ಯ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಸಿಎ ವೇದಪ್ರಕಾಶ್ ಶ್ರೀಯಾನ್, ಅತಿಥಿಗಳಾಗಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಶಿಕ್ಷಣ ಸಮಿತಿಯ ಅಧ್ಯಕ್ಷ ಅಜಿತ್ ಸುವರ್ಣ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವಾಧ್ಯಕ್ಷ ಸುರೇಶ್ ಕಾಂಚನ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಮಾಜಿ ಅಧ್ಯಕ್ಷ ಗೋಪಾಲ್ ಪುತ್ರನ್, ಹೋಟೆಲ್ ಉದ್ಯಮಿ ಸಂತೋಷ್ ಪುತ್ರನ್ ಆಗಮಿಸಲಿರುವರು.
ಸಂಘದ ಅಧ್ಯಕ್ಷರಾದ ಯಶೋಧರ ವಿ ಕೋಟ್ಯಾನ್, ಉಪಾಧ್ಯಕ್ಷ ದಯಾನಂದ್ ಕುಂದರ್, ಕಾರ್ಯದರ್ಶಿ ಶೇಖರ್ ಕರ್ಕೇರ, ಸಲಹೆಗಾರರಾದ ಮೋಹನ್ ಪುತ್ರನ್, ಖಜಾಂಚಿ ವಿಶ್ವನಾಥ್ ಬಂಗೇರ, ಸಂಚಾಲಕ ಪ್ರದೀಪ್ ಪುತ್ರನ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಪ್ರೇಮ ಎಸ್ ನಾಯಕ್, ಉಪಾಧ್ಯಕ್ಷೇ ಪಲ್ಲವಿ ಪುತ್ರನ್, ಸಲಹೆಗಾರರಾದ ಮೋಹಿನಿ ಮಲ್ಪೆ ಹಾಗೂ ಟ್ರಸ್ಟಿಗಳು ಮತ್ತು ಸರ್ವ ಸದಸ್ಯರು, ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.



Related posts

ಶ್ರೀ ಹನುಮಾನ್ ಭಜನಾ ಮಂಡಳಿ ಭಾಯಂದರ್ ಡಿ.30 ಕ್ಕೆ 26ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಭಾಯಂದರ್ ‌ ಸ್ಥಳೀಯ ಕಚೇರಿ:ಸೆ.13 ರಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಆಚರಣೆ

Mumbai News Desk

ವಸಯಿ ತಾಲೂಕು ಮೊಗವೀರ ಸಂಘ : ನಾಳೆ (ಮಾ.16) ಮಹಿಳಾ ದಿನಾಚರಣೆ

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಅ.17ಕ್ಕೆ 66ನೇ ಮಂಗಲೋತ್ಸವ.

Mumbai News Desk

ದಹಿಸರ್: ಜುಲೈ 19ರಂದು ಶ್ರೀ ಶನಿಮಹಾತ್ಮಾ ಸೇವಾ ಸಮಿತಿಯ 40ನೇ ವಾರ್ಷಿಕ ಮಹಾಸಭೆ

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ ಫಲಿಮಾರು ಹೊಸಾಗ್ಮೆನಾಳೆ (ಮೇ. 1) 91ನೇ ವಾರ್ಷಿಕ ಮಂಗಲೋತ್ಸವ, ಶ್ರೀ ದೇವರ ಮೂರ್ತಿ ಪ್ರತಿಷ್ಠಾ ದಿನಾಚರಣೆ, ಏಕಹಾ ಭಜನಾ ಕಾರ್ಯಕ್ರಮ

Mumbai News Desk