July 23, 2026
Mumbai News Kannada
ಪ್ರಕಟಣೆ

ಕರ್ನಾಟಕ ಸಂಘ, ಕಲ್ಯಾಣ : ಮೇ 1ರಂದು ಮಹಾರಾಷ್ಟ್ರ ದಿನಾಚರಣೆ








ಕಲ್ಯಾಣ, 24/04/25: “ಕರ್ನಾಟಕ ನಮ್ಮ ಜನ್ಮಭೂಮಿಯಾದರೆ ಮಹಾರಾಷ್ಟ್ರ ನಮ್ಮ ಕರ್ಮಭೂಮಿ.ಹಾಗೆ ಕರ್ನಾಟಕ ರಾಜ್ಯೋತ್ಸವದೊಂದಿಗೆ ಮಹಾರಾಷ್ಟ್ರ ರಾಜ್ಯೋತ್ಸವವನ್ನೂ ಆಚರಿಸಬೇಕೆಂಬ” ಸಂಘದ ಸಲಹೆಗಾರ ಡಾ. ಸುರೇಂದ್ರ ಶೆಟ್ಟಿಯವರ ಆಶಯದಂತೆ ಕಳೆದ 10 ವರ್ಷಗಳಿಂದ ನಾವು ಆಚರಿಸುತ್ತಿದ್ದು, ಈ ವರ್ಷ ಮೇ 1ರಂದು ಕಲ್ಯಾಣ(ಪ)ದ ಗಿರಿಜಾ ಪಯ್ಯಾಡೆ ಸಭಾಗ್ರಹದಲ್ಲಿ ಸಂಜೆ 5ರಿಂದ ಆಚರಿಸಲಾಗುವುದು. ಈ ಭವ್ಯ ಕಾರ್ಯಕ್ರಮದಲ್ಲಿ ಪ್ರಸಿದ್ಧ ನ್ಯಾಯವಾದಿ ಅಡ್ವಕೇಟ್ ಅಕ್ಷತಾ ಪ್ರಭುರವರು ಮುಖ್ಯ ಅತಿಥಿಯಾಗಿ, ಸಾಮಾಜಿಕ ಕಾರ್ಯಕರ್ತ ಶ್ರೀ ಮಿಲಿಂದ ಕುಲಕರ್ಣಿಯವರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶ್ರೀ ಅಭಿಜಿತ್ ವಿನಾಯಕ ಚಾಂದೆಕರ್ ರವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಕಲ್ಯಾಣ ಮುಂಬಯಿ ಪರಿಸರದ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಡಾ. ಶಶೀ ಪ್ರವೀಣ್ ಶೆಟ್ಟಿಯವರನ್ನು ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಗೈದ ಭಕ್ತಿ ಶಾಸ್ತ್ರಿ ಡಾ. ಅಮಿತ್ ಜಯಂತ್ ದೇಶಮುಖ್ ರವರನ್ನು ಸನ್ಮಾನಿಸಲಾಗುವುದು. ವಿವಿಧ ಮನೋರಂಜನೆಯಿಂದ, ಪ್ರೀತಿ ಭೋಜನದಿಂದ ಕೂಡಿದ ಈ ಭವ್ಯ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಚಂದಕಾಣಿಸಿ ಕೊಡಬೇಕಾಗಿ ಪ್ರೋಗ್ರಾಮ್ ಕಮಿಟಿ ಅಧ್ಯಕ್ಷ ಶ್ರೀ ಭಾಸ್ಕರ ಶೆಟ್ಟಿ (ಗುರುದೇವ್), ಸಂಘದ ಅಧ್ಯಕ್ಷ ಶ್ರೀ ಕೆ. ಎನ್. ಸತೀಶ ಹಾಗೂ ಸಮಸ್ತ ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿಕೊಂಡಿದ್ದಾರೆ.



Related posts

ಮಾ. 08 ರಂದು ಥಾಣೆಯಲ್ಲಿ ಸಾಫಲ್ಯ ಸೇವಾ ಸಂಘದ ಮುಖವಾಣಿ’ಸಾಫಲ್ಯ’ ತ್ರೈಮಾಸಿಕದ ಬೆಳ್ಳಿ ಹಬ್ಬ ಹಾಗೂ ಮಹಿಳಾ ದಿನಾಚರಣೆ

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿಡಿ. 3 ರಂದು 35 ನೇ ವಾರ್ಷಿಕ ಮಹಾಸಭೆ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರದಿಂದ ‘ಯಕ್ಷ ಸೌರಭ ಪ್ರವಾಸಿ ಯಕ್ಷಗಾನ ಮೇಳ’ಸೆಪ್ಟೆಂಬರ್ 7ರಂದು ರಾಮಾಂಜನೇಯ ಯಕ್ಷಗಾನ ಪ್ರದರ್ಶನ – ಕುಮಟಾ ಗಣಪತಿ ನಾಯಕ್ ಅವರ ಆಂಜನೇಯನ ಪಾತ್ರ ಪ್ರಮುಖ ಆಕರ್ಷಣೆ

Mumbai News Desk

ಡಿ. 29. ಕನಕದಾಸ ಜಯಂತಿ, ಕುವೆಂಪು ಜಯಂತಿ ಗೌರವಾರ್ಥ,ಕರ್ನಾಟಕ ರಾಜ್ಯೋತ್ಸವ ಸಂಭ್ರಮ – ಕರುನಾಡ ಡಿಂಡಿಮ – 2024.

Mumbai News Desk

ಮಾ.29 : ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಹೆಜಮಾಡಿ ಜೀರ್ಣೋದ್ಧಾರ ಸಮಿತಿಯಿಂದ ಮುಂಬಯಿಯಲ್ಲಿ “ಸಿರಿ-ನುಡಿ” ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಜೀರ್ಣೋದ್ಧಾರ ಕಾರ್ಯದ ಪ್ರಗತಿ ಪರಿಶೀಲನೆ

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ, ಥಾಣೆ : ಮೇ 18ರಂದು ಸಾಮೂಹಿಕ ಅಶ್ಲೇಷ ಬಲಿ ಪೂಜೆ

Mumbai News Desk