September 6, 2026
Mumbai News Kannada
ಪ್ರಕಟಣೆ

ಕರ್ನಾಟಕ ಸಂಘ, ಕಲ್ಯಾಣ : ಮೇ 1ರಂದು ಮಹಾರಾಷ್ಟ್ರ ದಿನಾಚರಣೆ






ಕಲ್ಯಾಣ, 24/04/25: “ಕರ್ನಾಟಕ ನಮ್ಮ ಜನ್ಮಭೂಮಿಯಾದರೆ ಮಹಾರಾಷ್ಟ್ರ ನಮ್ಮ ಕರ್ಮಭೂಮಿ.ಹಾಗೆ ಕರ್ನಾಟಕ ರಾಜ್ಯೋತ್ಸವದೊಂದಿಗೆ ಮಹಾರಾಷ್ಟ್ರ ರಾಜ್ಯೋತ್ಸವವನ್ನೂ ಆಚರಿಸಬೇಕೆಂಬ” ಸಂಘದ ಸಲಹೆಗಾರ ಡಾ. ಸುರೇಂದ್ರ ಶೆಟ್ಟಿಯವರ ಆಶಯದಂತೆ ಕಳೆದ 10 ವರ್ಷಗಳಿಂದ ನಾವು ಆಚರಿಸುತ್ತಿದ್ದು, ಈ ವರ್ಷ ಮೇ 1ರಂದು ಕಲ್ಯಾಣ(ಪ)ದ ಗಿರಿಜಾ ಪಯ್ಯಾಡೆ ಸಭಾಗ್ರಹದಲ್ಲಿ ಸಂಜೆ 5ರಿಂದ ಆಚರಿಸಲಾಗುವುದು. ಈ ಭವ್ಯ ಕಾರ್ಯಕ್ರಮದಲ್ಲಿ ಪ್ರಸಿದ್ಧ ನ್ಯಾಯವಾದಿ ಅಡ್ವಕೇಟ್ ಅಕ್ಷತಾ ಪ್ರಭುರವರು ಮುಖ್ಯ ಅತಿಥಿಯಾಗಿ, ಸಾಮಾಜಿಕ ಕಾರ್ಯಕರ್ತ ಶ್ರೀ ಮಿಲಿಂದ ಕುಲಕರ್ಣಿಯವರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶ್ರೀ ಅಭಿಜಿತ್ ವಿನಾಯಕ ಚಾಂದೆಕರ್ ರವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಕಲ್ಯಾಣ ಮುಂಬಯಿ ಪರಿಸರದ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಡಾ. ಶಶೀ ಪ್ರವೀಣ್ ಶೆಟ್ಟಿಯವರನ್ನು ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆಗೈದ ಭಕ್ತಿ ಶಾಸ್ತ್ರಿ ಡಾ. ಅಮಿತ್ ಜಯಂತ್ ದೇಶಮುಖ್ ರವರನ್ನು ಸನ್ಮಾನಿಸಲಾಗುವುದು. ವಿವಿಧ ಮನೋರಂಜನೆಯಿಂದ, ಪ್ರೀತಿ ಭೋಜನದಿಂದ ಕೂಡಿದ ಈ ಭವ್ಯ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಚಂದಕಾಣಿಸಿ ಕೊಡಬೇಕಾಗಿ ಪ್ರೋಗ್ರಾಮ್ ಕಮಿಟಿ ಅಧ್ಯಕ್ಷ ಶ್ರೀ ಭಾಸ್ಕರ ಶೆಟ್ಟಿ (ಗುರುದೇವ್), ಸಂಘದ ಅಧ್ಯಕ್ಷ ಶ್ರೀ ಕೆ. ಎನ್. ಸತೀಶ ಹಾಗೂ ಸಮಸ್ತ ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿಕೊಂಡಿದ್ದಾರೆ.



Related posts

ರಂಗ ತರಬೇತಿ ಶಿಬಿರಕ್ಕೆ ಆಹ್ವಾನ

Mumbai News Desk

ನ.21 ರಂದು ಬಿಲ್ಲವರ ಅಸೋಸಿಯೇಷನ್, ಮುಂಬಯಿ – ಕಲ್ವಾ ಸ್ಥಳೀಯ ಕಛೇರಿಯ ರಜತ ಮಹೋತ್ಸವದ ಸಂಭ್ರಮ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆ.17ರಂದು ಸಂಕ್ರಮಣ ಹಾಗೂ ನಾಗ ಪಂಚಮಿ ಪೂಜೆ

Mumbai News Desk

‘AATIDONJI DINA 2025’ Festival is all set to light up Dubai on 14th September 2025,

Mumbai News Desk

ಬಂಟ್ಸ್ ಫೋರಮ್ ಮೀರಾಭಾಯಂದರ್: ಜ.14 ವಾರ್ಷಿಕ ಭಜನಾ ಮಂಗಳೋತ್ಸವ , ಹಳದಿಕುಂಕುಮ

Mumbai News Desk

ಮಾ. 15 : ತುಳು ವೆಲ್ಫೇರ್ ಅಸೋಸಿಯೇಶನ್ ಡೊಂಬಿವಲಿ ಇದರ ಆಶ್ರಯದಲ್ಲಿ ಸೋಮನಾಥ ಎಸ್. ಕರ್ಕೇರರ “ಪೆರ್ಗ” ತುಳು ಹನಿಗವನ ಸಂಕಲನ ಬಿಡುಗಡೆ ಮತ್ತು ಕವಿಗೋಷ್ಠಿ

Mumbai News Desk