30.5 C
Mumbai
June 8, 2026
Mumbai News Kannada
ಪ್ರಕಟಣೆ

ಆಗಸ್ಟ್ 3ರಂದು ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಬಾಲ್ಕೂಮ್ ಥಾಣೆ, ಆಶ್ರಯದಲ್ಲಿ ಮಂದಾರ್ತಿ ಮೇಳದ ಕಲಾವಿದರಿಂದ “ಜಗನ್ಮಾತೆ ಶ್ರೀ ವನದುರ್ಗಿ” ಯಕ್ಷಗಾನ ಪ್ರದರ್ಶನ





ಥಾಣೆಯ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಬಾಲ್ಕೂಮ್ ಇದರ ಆಶ್ರಯದಲ್ಲಿ ಉದ್ಯಮಿ, ಕಲಾಸಂಘಟಕ ರಾಜು ಮೆಂಡನ್ ವಂಡ್ಸೆ ಅವರ ಸಂಯೋಜನೆಯಲ್ಲಿ ಆಗಸ್ಟ್ 3ರ, ರವಿವಾರ ಸಂಜೆ 3 ಗಂಟೆಯಿಂದ ಮುಲುಂಡ್ ಚೆಕ್ ನಾಕ ಸಮೀಪದ ನವೋದಯ ಜೂನಿಯರ್ ಕಾಲೇಜ್ ಸಭಾಂಗಣದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಮೇಳದ ಕಲಾವಿದರಿಂದ ‘ಜಗನ್ಮಾತೆ ಶ್ರೀ ವನದುರ್ಗೆ’ ಎಂಬ ಈ ವರ್ಷದ ನೂತನ ಪುಣ್ಯ ಕಥಾನಕವು ಯಕ್ಷಗಾನ ರೂಪದಲ್ಲಿ ಪ್ರದರ್ಶನಗೊಳ್ಳಲಿದೆ.
ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ್ ಕಾರ್ಯಕ್ರಮದ ಉದ್ಘಾಟಕರಾಗಿರುವರು.
ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಬಾಲ್ಕೂಮ್ ನ ಅಧ್ಯಕ್ಷ ಮನೋಜ್ ಎಲ್ ಹೆಗ್ಡೆ ಅಧ್ಯಕ್ಷತೆ ವಹಿಸಲಿರುವರು.
ಅಂತರರಾಷ್ಟ್ರೀಯ ಖ್ಯಾತಿಯ ಪುರೋಹಿತ, ಜ್ಯೋತಿಷಿ ಅಶೋಕ್ ಪುರೋಹಿತ್ ಶುಭ ಆಶೀರ್ವಾದ ನೀಡಲಿದ್ದಾರೆ.
ಅತಿಥಿ ಗಣ್ಯರುಗಳಾಗಿ ಥಾಣೆ ಬಂಟ್ಸ್ ಎಸೋಸಿಯೇಷನ್ ಅಧ್ಯಕ್ಷ ಅಶೋಕ್ ಎಂ ಶೆಟ್ಟಿ, ರೋಟರಿ ಕ್ಲಬ್ ಥಾಣೆಯ ಅಧ್ಯಕ್ಷ ಜಯರಾಮ್ ಮೆಂಡನ್, ಥಾಣೆ ಬಂಟ್ಸ್ ಎಸೋಸಿಯೇಷನ್ ನಿಕಟ ಪೂರ್ವ ಅಧ್ಯಕ್ಷ ಸುನಿಲ್ ಜೆ ಶೆಟ್ಟಿ, ಇನ್ನೋವೇಟಿವ್ ಎನ್‌ಡಿಟಿ ಸರ್ವಿಸಸ್ನ ಆಡಳಿತ ನಿರ್ದೇಶಕ ಅವಿನಾಶ್ ಪುತ್ರನ್, ನಿತ್ಯಾನಂದ ಸೇವಾ ಸಮಿತಿ ಥಾಣೆಯ ಅಧ್ಯಕ್ಷ ರಘುನಾಥ್ ಎ ರೈ , ಥಾಣೆಯ ಪ್ರಜಾ ಗ್ರೂಪ್ ಆಫ್ ಹೊಟೇಲ್ಸ್ ಸಿ ಎಂ ಶೆಟ್ಟಿ, ಹೋಟೆಲ್ ದುರ್ಗಾ ವಿಹಾರ್ ಥಾಣೆಯ ನವೀನ್ ಶೆಟ್ಟಿ, ಸ್ಟೇಟಸ್ ಗ್ರೂಪ್ ಆಫ್ ಹೋಟೆಲ್ ನ ರತ್ನಾಕರ್ ಚಂದನ್, ಮೊಗವೀರ ವ್ಯವಸ್ಥಾಪಕ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯ ಅರವಿಂದ ಪುತ್ರನ್ ಉಪಸ್ಥಿತರಿರುವರು.
ಕಾರ್ಯಕ್ರಮವನ್ನು ನವೋದಯ ಕನ್ನಡ ಸೇವಾ ಸಂಘ ಥಾಣೆಯ ಉಪಾಧ್ಯಕ್ಷ ರವಿ ಹೆಗ್ಡೆ ನಿರೂಪಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಮಂದಾರ್ತಿ ಮೇಳದ ಖ್ಯಾತ ಸ್ತ್ರಿ ಪಾತ್ರಧಾರಿ ದಿನಕರ ಕುಂದ್ರವ್ ನಡೂರು ಅವರನ್ನು ಅತಿಥಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ಪ್ರಿಯರು, ಕಲಾಭಿಮಾನಿಗಳು ಬಂದು ಸಹಕರಿಸುವಂತೆ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಬಾಲ್ಕೂಮ್ ನ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯವರು,ಸರ್ವ ಸದಸ್ಯರು ಹಾಗೂ ಕಾರ್ಯಕ್ರಮದ ಸಂಯೋಜಕ ರಾಜು ಮೆಂಡನ್ ವಂಡ್ಸೆ ವಿನಂತಿಸಿದ್ದಾರೆ.



Related posts

ಜೂ 29: , ಮೈಸೂರು ಅಸೋಸಿಯೇಶನ್  ಮುಂಬಯಿ, ಅಂತರಾಷ್ಟ್ರೀಯ ಕಲಾವಿದೆ ಸ್ಮಿತಾ ಬೆಳ್ಳೂರ್ ಸಂಗೀತ ಕಾರ್ಯಕ್ರಮ

Mumbai News Desk

ಕಾಂದಿವಲಿ ಪೂರ್ವ ಶ್ರೀ ಸದ್ಗುರು ಶನೀಶ್ವರ ಸೇವಾ ಸಮಿತಿನ 30 ರಂದು 50 ನೇ ವಾರ್ಷಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಮಹೋತ್ಸವ ಮತ್ತು ಅನ್ನದಾನ

Mumbai News Desk

ಜ 5 ರಂದು ಕೆಲ್ಲಪುತ್ತಿಗೆ ಶ್ರೀ ಧರ್ಮಶಾಸ್ತ ಭಕ್ತವೃಂದ ದ21ನೇ ವರ್ಷದಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಯಕ್ಷಗಾನ ಪ್ರದರ್ಶನ

Mumbai News Desk

ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಅಸಲ್ಪ :ಜ. 18ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಪರಿವಾರ ದೇವತೆಗಳಿಗೆ ದೀಪಾರಾಧನೆ.

Mumbai News Desk

ಜನವರಿ 2 ರಿಂದ 12 ರವರೆಗೆ ರಂಗ್ ದ ರಾಜೆ ಸುಂದರ್ ರೈ ಮಂದಾರ ಸಾರಥ್ಯದ ‘ಅಮ್ಮ ಕಲಾವಿದೆರ್ ಕುಡ್ಲ’ ತಂಡದಿಂದ ‘ಆನ್ ಮಗೆ’ ನಾಟಕದ ಮುಂಬೈ, ಪುಣೆ ಪ್ರದರ್ಶನ

Mumbai News Desk

ಸಾರ್ವಜನಿಕ ಶ್ರೀ ಶನಿಶ್ಚರ ಸೇವಾ ಸಮಿತಿ, ವಸಾಯಿ : ಫೆ. 14ರಂದು ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಹಾಗೂ ಶ್ರೀ ಶನಿಶ್ಚರ ಮಹಾಪೂಜೆ

Mumbai News Desk