September 6, 2026
Mumbai News Kannada
ಪ್ರಕಟಣೆ

ಆಗಸ್ಟ್ 2 ಥಾಣೆಯಲ್ಲಿ : ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಇದರ ಜಂಟಿ ಆಯೋಜನೆಯಲ್ಲಿ “ರಾಮ ದರ್ಶನ- ಗದಾಯುದ್ಧ” ಯಕ್ಷಗಾನ ಪ್ರದರ್ಶನ.





ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈ ಮತ್ತು ಶ್ರೀ ಮಹಾ ಗಣಪತಿ ಯಕ್ಷಗಾನ ಮಂಡಳಿ ನಡೂರು ಮಂದಾರ್ತಿ ಇದರ ಜಂಟಿ ಆಯೋಜನೆಯಲ್ಲಿ ಕಲಾಸಂಘಟಕ, ಉದ್ಯಮಿ ರಾಜು ಮೆಂಡನ್ ವಂಡ್ಸೆ ಅವರ ಮುಂದಾಳತ್ವದಲ್ಲಿ ಅಗಸ್ಟ್ 2, ಶನಿವಾರ ಮಧ್ಯಾಹ್ನ 3 ರಿಂದ ಮುಲುಂಡ್ ಪಶ್ಚಿಮ, ಚೆಕ್ ನಾಕ ಹತ್ತಿರದ ನವೋದಯ ಕನ್ನಡ ಸೇವಾ ಸಂಘದ ನವೋದಯ ಜೂನಿಯರ್ ಕಾಲೇಜ್ ಸಭಾಂಗಣದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು, ಮಂದಾರ್ತಿ ಮೇಳದ ಮತ್ತು ಪ್ರತಿಷ್ಠಾನದ ಕಲಾವಿದರ ಕೂಡುವಿಕೆಯಲ್ಲಿ “ರಾಮ ದರ್ಶನ- ಗದಾಯುದ್ಧ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ರಾಜು ಮೆಂಡನ್ ವಂಡ್ಸೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಹರೇ ಕೃಷ್ಣ ಫೌಂಡೇಶನ್ ಟ್ರಸ್ಟ್ ನ ಕರುಣಾಕರ ಪುತ್ರನ್ ಉದ್ಘಾಟಿಸಲಿರುವರು. ಅಂತಾರಾಷ್ಟ್ರೀಯ ಖ್ಯಾತಿಯ ಪುರೋಹಿತ ಪ್ರವೀಣ್ ಜೆ ಭಟ್ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮನಿಷಾ ಕ್ಯಾಟಾರಿಂಗ್ ಸರ್ವಿಸಸ್ ನ ನಾರಾಯಣ ಚಂದನ್, ಖ್ಯಾತ ಉದ್ಯಮಿ ನಿತಶ್ ಶೆಟ್ಟಿ, ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈಯ ಅಧ್ಯಕ್ಷರು ರಾಜೇಂದ್ರ ಚಂದನ್, ಮನಸ್ವಿ ಕ್ಯಾಟಾರಿಂಗ್ ಸರ್ವಿಸಸ್ನ ಸುನಿಲ್ ಕುಂದರ್, ಶ್ರೀ ಶ್ರೀ ಪುಡ್ಸ್ ಬಾಂಧ್ರಾದ ಅಶೋಕ್ ಮರತೂರು, ಹೋಟೆಲ್ ಉಡುಪಿ ವಿಲೇಪಾರ್ಲೆ ಯ ಅರುಣ್ ಶೆಟ್ಟಿ, ರೇಲೀಸ್ ಹಾಸ್ಪಿಟಲಿಟಿ ಸರ್ವಿಸಸ್ನ ಮಹೇಂದ್ರ ಶೆಟ್ಟಿ, ಆಂಜನೇಯ ದೇವಸ್ಥಾನ ನಾಗೂರಿನ ಗೌರವ ಅಧ್ಯಕ್ಷ ಎನ್ ಡಿ ಚಂದನ್, ಗಾರ್ಮೆಂಟ್ ಡಿಸೈನರ್ ರಘುರಾಮ್ ಮೆಂಡನ್, ಪ್ರಧಾನ ಕ್ಯಾಟರಿಂಗ್ ಸರ್ವಿಸಸ್ ನ ಅಶೋಕ್ ಮೆಂಡನ್ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಅವರನ್ನು ಅತಿಥಿ ಗಣ್ಯರು ಸನ್ಮಾನಿಸಲಿರುವರು.
ಯಕ್ಷಗಾನದ ಹಿಮ್ಮೆಳದಲ್ಲಿ ಭಾಗವತವರಾಗಿ ಗಣೇಶ್ ಆಚಾರ್ಯ ಬಿಲ್ಲಾಡಿ, ಮದ್ದಳೆಯಲ್ಲಿ ಭಾಸ್ಕರ್ ದೇವಾಡಿಗ, ಚೆಂಡೆಯಲ್ಲಿ ಕುಮಾರ್ ಅಮೀನ್, ಮುಮ್ಮೆಳದಲ್ಲಿ ನರಸಿಂಹ ಚಿಣ್ಣಾಣಿ ಹೊನ್ನಬೈಲು ದೇವಲ್ಕುಂದ ರಾಕೇಶ, ಪ್ರಮೋದ್ ಕುಮಾರ್,ರಂಜಿತ್ ಕುಮಾರ್, ಸುರೇಶ್ ಶೆಟ್ಟಿ ನಂದ್ರೊಳ್ಳಿ, ಮಹೇಂದ್ರ ಶೆಟ್ಟಿ ನಂದ್ರೊಳ್ಳಿ,ರಾಘವೇಂದ್ರ ಬಗ್ವಾಡಿ, ತನ್ವಿ ರಾಮ್, ಸೌಜನ್ಯ ಬಿಲ್ಲವ , ಸುಕುಮಾರ್ ಹೆಗ್ಡೆ ಮೊದಲದವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಮಧ್ಯದಲ್ಲಿ ಲಘು ಉಪಹಾರ ಮತ್ತು ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.
ಯಕ್ಷಗಾನ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾ ರಸಿಕರು, ಯಕ್ಷಗಾನ ಪ್ರಿಯರು ಬಂದು ಸಹಕರಿಸುವಂತೆ ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು ಮಂದಾರ್ತಿ , ಇದರ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಲಾವಿದರು ವಿನಂತಿಸಿದ್ದಾರೆ.



Related posts

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ : ಮೀರಾ ಭಾಯಂದರ್ ಶಾಖೆಯ ವತಿಯಿಂದ ಜನೆವರಿ 18ರಂದು ‘ಕ್ರೀಡಾಕೂಟ – 2026’

Mumbai News Desk

ಜ.12. ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ಡೊಂಬಿವಿಲಿ ಸಮಿತಿಯ ವಾರ್ಷಿಕೋತ್ಸವ,

Mumbai News Desk

ಅ.21, ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡ ಇದರ 55ನೇ ವಾರ್ಷಿಕ ಮಹಾಪೂಜೆ.

Mumbai News Desk

ಜ.5 ರಂದು ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಇದರ 11ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಮತ್ತು ಮಹಾಪೂಜೆ.

Mumbai News Desk

‘AATIDONJI DINA 2025’ Festival is all set to light up Dubai on 14th September 2025,

Mumbai News Desk

ಸೆ.7 ರಂದು ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು ವತಿಯಿಂದ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಐಕಳ ಹರೀಶ್ ಶೆಟ್ಟಿ ಅವರಿಗೆ ‘ಶಿವಗಿರಿ ಸಮ್ಮಾನ್ ಪ್ರಶಸ್ತಿ’ ಪ್ರಧಾನ ಸಮಾರಂಭ

Mumbai News Desk