September 6, 2026
Mumbai News Kannada
ಮುಂಬಯಿ

ಬಂಟರ ಸಂಘ ಮುಂಬಯಿ ; ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿ ಯುವ ವಿಭಾಗದ ವತಿಯಿಂದ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ





ರಕ್ತದಾನಕ್ಕೆ ಭಯಪಡುವ ಅಗತ್ಯವಿಲ್ಲ ಅದರಿಂದ ಮತ್ತೊಬ್ಬನ  ಜೀವ ಉಳಿಯುವಂತಾಗುತ್ತದೆ – ಪ್ರವೀಣ್ ಭೋಜ ಶೆಟ್ಟಿ.

ಚಿತ್ರ ವರದಿ: ದಿನೇಶ್ ಕುಲಾಲ್ 

ಬಂಟರ ಸಂಘ ಮುಂಬಯಿ  ಮೀರಾ -ಭಾಯಂದರ್ ಪ್ರಾದೇಶಿಕ  ಸಮಿತಿಯ  ಯುವ ವಿಭಾಗದ ಆಶ್ರಯದಲ್ಲಿ ರಕ್ತದಾನ  ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ , ಜುಲೈ 6,  ರಂದು ಬೆಳಿಗ್ಗೆಯಿಂದ  ಮಧ್ಯಾಹ್ನ ವರೆಗೆ ಮೀರ ರೋಡ್ ನ ವಿಜಯ್ ಪಾರ್ಕ್ ಪಕ್ಕದ, ಶಾಂತಿ ಪಾರ್ಕ್ ನ ಸ್ವಸ್ತಿಕ್ ಅಂಬರ್ ಪ್ಲಾಜಾ ಬ್ಯಾಂಕ್ವೆಟ್ಸ್ ನಲ್ಲಿ ನಡೆಯಿತು.

ರಕ್ತದಾನ ಶಿಬಿರವನ್ನು ಬಂಟರ ಸಂಘ ಮುಂಬೈ ಇದರ ಅಧ್ಯಕ್ಷ  ಪ್ರವೀಣ್ ಭೋಜ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಮಾತನಾಡುತ್ತಾ ಯುವ ವಿಭಾಗದ ಸದಸ್ಯರು ಬಹಳ ಉತ್ಸಾಹದಿಂದ ಕಾರ್ಯಕ್ರಮವನ್ನುಆಯೋಜಿಸಿದ್ದಾರೆ. ಯಾವುದೇ ಕಂಪನಿಗಳಲ್ಲಿ ಉತ್ಪತ್ತಿ ಮಾಡಲಾಗದ ರಕ್ತ ಮನುಷ್ಯನ ಶರೀರದಲ್ಲಿ  ಉತ್ಪತ್ತಿ ಯಾಗುದರಿಂದ ಇನ್ನೊಬ್ಬರ ಬದುಕಿಗೆ  ಅಗತ್ಯವಿರುವ ಸಂದರ್ಭದಲ್ಲಿ ದಾನ  ಮಾಡಬೇಕು . ರಕ್ತದಾನಕ್ಕೆ ಭಯಪಡುವ ಅಗತ್ಯವಿಲ್ಲ ಅದರಿಂದ ಮತ್ತೊಬ್ಬರ ಜೀವ  ಉಳಿಯುವಂತಾಗುತ್ತದೆ. ಪ್ರಾದೇಶಿಕ ಸಮಿತಿಯಲ್ಲಿ ಗಿರೀಶ್ ಶೆಟ್ಟಿ ತೆಳ್ಳಾರ್ ಮತ್ತು ರವೀಂದ್ರ ಶೆಟ್ಟಿ ಕೊಟ್ರಪಾಡಿ ಅವರು ಬಹಳಷ್ಟು ಸಮಾಜದ ಬಂಧುಗಳಿಗೆ ಆಶಯವಾಗುವ ರೀತಿಯಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನನೀಯ   ಎಂದು ನುಡಿದರು.

 ಮುಖ್ಯ ಅತಿಥಿ ಮೀರಾ ಭಾಯಂದರ್ ಶಾಸಕ
 ನರೇಂದ್ರ ಎಲ್. ಮೆಹ್ತಾ ಮಾತನಾಡಿ ಪ್ರದೇಶದ ತುಳು – ಕನ್ನಡಿಗರ  ಆರೋಗ್ಯ ಮತ್ತು ಶೈಕ್ಷಣಿಕವಾಗಿ ಬಲಿಷ್ಠಗೊಳ್ಳಲು ಬಂಟರ ಸಂಘದ  ಪ್ರಾದೇಶಿಕ ಸಮಿತಿಯು ಬಹಳಷ್ಟು ಜನಪರ ಕಾರ್ಯಗಳನ್ನು  ಮಾಡುತ್ತಿದೆ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ  ಮೀರಾ  ಭಾಯಂದರ್ ನಲ್ಲಿ ಎಲ್ಲಾ ಅನುಕೂಲಗಳು ಇವೆ . ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚು ಜವಾಬ್ದಾರಿ ವಹಿಸಬೇಕು ಎಂದು ನುಡಿದರು. 

   ಮುಂಬೈ ಬಂಟರ ಸಂಘದ ಜೊತೆ ಕಾರ್ಯದರ್ಶಿ   ಗಿರೀಶ್ ಶೆಟ್ಟಿ ತೆಳ್ಳಾರ್, ಮಾತನಾಡಿ ರಕ್ತದಾನದ ಬಗ್ಗೆ ಭಯಪಡದೆ ಪ್ರತಿಯೊಬ್ಬರು ರಕ್ತದಾನವನ್ನು ಮಾಡುವಂತಹ ಆಗಬೇಕು. ಈ ಪ್ರಾದೇಶಿಕ ಸಮಿತಿಯ ಎಲ್ಲರೂ ರಕ್ತದಾನ ಮಾಡುವುದಕ್ಕೆ ಉತ್ಸಾಹದಿಂದ ಸೇರಿಕೊಂಡಿದ್ದಾರೆ. ರಕ್ತದಾನವನ್ನು ಮಾಡುವುದರಿಂದ ಶರೀರಕ್ಕೆ ಉತ್ತಮ. ಎಲ್ಲರಿಗೂ ರಕ್ತ ನೀಡುವುದಕ್ಕೆ  ಆಗುವುದಿಲ್ಲ. ಬಂಟರ ಸಂಘ ಆರೋಗ್ಯ ಮತ್ತು ಶಿಕ್ಷಣ ಅತಿ ಹೆಚ್ಚ ಮಹತ್ವ ನೀಡುತ್ತಾ ಸಮಾಜದ ಜನರಿಗೆ ಸಹಕಾರಿಯಾಗುತ್ತದೆ ಎಂದು ನುಡಿದರು .

 ಸ್ತ್ರೀರೋಗತಜ್ಞ ಡಾ. ಪ್ರತಾಸ್ವಿನಿ ಶೆಟ್ಟಿ ಸಲಹೆ ಸೂಚನೆಗಳನ್ನು ನೀಡುತ್ತಾ ಬಂಟರ ಸಂಘದ ಈ ಪ್ರಾದೇಶಿಕ ಸಮಿತಿಯು ಸಮಾಜದ ಜನರ ಕಾಳಾಜಿಯನ್ನು ಹೆಚ್ಚು ವಹಿಸುತ್ತಿದೆ. ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಹೆಚ್ಚು ಗಮನದಲ್ಲಿ ಇಡಬೇಕು ಅದರಲ್ಲೂ ಮಹಿಳೆಯರು  ತಮಗೆ ಯಾವುದೇ ಕಾಯಿಲೆಗಳು,ಆರೋಗ್ಯದಲ್ಲಿ ಏರುಪೇರುಗಳಾದಾಗ ವೈದ್ಯರನ್ನು ಸಂಪರ್ಕಿಸಬೇಕು ಆದ್ದರಿಂದ ಅವರ ಆರೋಗ್ಯ ಸ್ಥಿತಿ ಧರಿಸಿಕೊಳ್ಳಬಹುದು ವ್ಯಾಯಾಮ, ಯೋಗ ಮಾಡುವ ಅಭ್ಯಾಸವನ್ನು ಮಾಡಬೇಕು ಎಂದು ನುಡಿದರು.

ಪ್ರಾದೇಶಿಕ ಸಮಿತಿಯ ಸಲಹೆ ಸಮಿತಿಯ ಕಾರ್ಯಾಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರ್ ಬಂಟರ ಸಂಘದ ಯೋಜನೆಗಳ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ, ಶುಭಾರಂಭ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ಪ್ರಾದೇಶಿಕ ಸಮಿತಿಯ ಉಪಕಾರ್ಯಧ್ಯಕ್ಷ ಅರವಿಂದ್ ಎ, ಶೆಟ್ಟಿ,ಡಾ. ಗೌರೀಶ್ ಶೆಟ್ಟಿ,  (ಮಲ್ಲಿಕಾ ಹೆಲ್ತ್ ಕ್ಲಿನಿಕ್).ಡಾ. ಸಾಯಿನಾಥ್ ಹೆಗ್ಡೆ,( ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ಹೃದಯ ಶಸ್ತ್ರಚಿಕಿತ್ಸಕ) ಪ್ರಾದೇಶಿಕ ಸಮಿತಿಯ 
ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಜೊತೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ,  ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ವಸಂತಿ ಶೆಟ್ಟಿ, ಯುವ ವಿಭಾಗದ ಕಾರ್ಯಧ್ಯಕ್ಷ ವೃಷಬ್ ಶೆಟ್ಟಿ ,ಉಪಾಧ್ಯಕ್ಷ ಸುಶಾಂತ್ ಶೆಟ್ಟಿ.ಕಾರ್ಯದರ್ಶಿ ನಿರೀಕ್ಷಾ ಶೆಟ್ಟಿ, ಖಜಾಂಚಿ
ಸ್ವಾತಿ ಶೆಟ್ಟಿ. ಜೊತೆ ಕಾರ್ಯದರ್ಶಿಅನುಷಾ ಶೆಟ್ಟಿ ಉಪಸ್ತರಿದ್ದರು.
 ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ, ಸ್ವಾಗತಿಸಿದರು.ಯುವ ವಿಭಾಗದ ಕಾರ್ಯಧ್ಯಕ್ಷ ವೃಷಬ್ ಶೆಟ್ಟಿ ಯುವ ವಿಭಾಗದ ಕಾರ್ಯ ಚಟುವಟಿಕೆಗಳ ಬಗ್ಗೆ ಮತ್ತು ರಕ್ತದಾನ ಶಿಬಿರದ ಬಗ್ಗೆ  ತಿಳಿಸಿದರುಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ ಧನ್ಯವಾದ ನೀಡಿದರು. ಚಲನಚಿತ್ರ ನಟ
ಪ್ರತಿಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ವಸಂತಿ ಆಶೋಕ್ ಶೆಟ್ಟಿ ಪ್ರಾರ್ಥನೆ ಮಾಡಿದರು.


ಉತ್ಸಾಹದಿಂದ ಪಾಲ್ಗೊಂಡ ರಕ್ತದಾನಿಗಳು, 2೦5 ಯೂನಿಟ್ ರಕ್ತಸಂಗ್ರಹ.

ಬೆಳಿಗ್ಗೆಯಿಂದ ತಡಸಂಜೆ ಅವರಿಗೆ ನಡೆದ ರಕ್ತದಾನ ಶಿಬಿರದಲ್ಲಿ ಮೀರಾ ಭಯಂದರ್  ಪರಿಸರದ ತುಳು ಕನ್ನಡಿಗರು ಮತ್ತು ಹೋಟೆಲ್ ಸಿಬ್ಬಂದಿಗಳು ಅಪಾರ ಸಂಖ್ಯೆಯಲ್ಲಿ ರಕ್ತದಾನವನ್ನು ನೀಡಿದರು. ಬಂಟರ ಸಮಾಜದ ಯುವಕರು ಮಹಿಳೆಯರು ಸೇರಿದಂತೆ. ಹಿರಿಯರು ಕೂಡ ರಕ್ತದಾನ ನೀಡಲು ಮುಂದಾಗಿದ್ದರು. ಬಂಟರ ಸಂಘದ ಪದಾಧಿಕಾರಿಗಳು ಮತ್ತು ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಕೂಡ ರಕ್ತದಾನವನ್ನು ನೀಡಿರುವರು.ಸುಮಾರು 2೦5 ಯೂನಿಟ್ ರಕ್ತ ಸಂಗ್ರಹವಾಗಿದೆ

B. Dinesh Kulal

Mob.: 9821868674

B. Dinesh Kulal

Mob.: 9821868674



Related posts

ಬೈಂದೂರು-ಕುಂದಾಪುರ ಬಿಲ್ಲವರು ಮುಂಬಯಿ ಸ್ನೇಹ ಸಮ್ಮಿಲನ, ಅರಸಿನ ಕುಂಕುಮ ಮತ್ತು ಮನೋರಂಜನಾ ಕಾರ್ಯಕ್ರಮ

Mumbai News Desk

ಮದರ್ ಇಂಡಿಯಾ 19ನೇ ಈಸ್ಟ್ ಬಾಂಬೆ ಹಳೇ ವಿದ್ಯಾರ್ಥಿ ಸ್ಕೌಟ್ ಬಳಗದ 4ನೇ ವಾರ್ಷಿಕ ಸ್ನೇಹ ಸಮ್ಮಿಲನ.

Mumbai News Desk

2023/24 ಎಚ್ ಎಸ್ ಸಿ .ಪರೀಕ್ಷೆಯಲ್ಲಿ   ಸಾಧಿಕಾ ಅಮಿತ್ ಶೆಟ್ಟಿ ಶೇ.89.17%

Mumbai News Desk

ಶ್ರೀ ರಜಕ ಸಂಘ, ಡೊಂಬಿವಿಲಿ ಪ್ರಾದೇಶಿಕ ವಲಯದ ವತಿಯಿಂದ ಶ್ರೀ ಗುರು ಪೂಜಾ ಕಾರ್ಯಕ್ರಮ ಯಶಸ್ವಿ

Mumbai News Desk

ಬಿಲ್ಲವರ ಅಸೋಸಿಯೇಶನ್, ಜೋಗೇಶ್ವರಿ ಸ್ಥಳೀಯ ಕಚೇರಿಯಲ್ಲಿ, ಸಂಭ್ರಮದ “ಆಟಿದ ಒಂಜಿ ದಿನ” ಆಚರಣೆ.

Mumbai News Desk

ಬಹುಮುಖ ಪ್ರತಿಭೆ ಕು. ಪ್ರಿಷಾ ಜಿತೇಂದ್ರ ಕೋಟ್ಯಾನ್ ಅವರ ಭರತನಾಟ್ಯ ರಂಗಪ್ರವೇಶ

Mumbai News Desk