ಮುಂಬಯಿ, ಮೇ 30: ಧಾರ್ಮಿಕ ಮತ್ತು ಸಾಮಾಜಿಕ ಸೇವಾಕರ್ತರಾದ, ಅಯ್ಯಪ್ಪ ಸ್ವಾಮಿಯ ಪರಮ ಭಕ್ತ ನವೀನ್ ಅಂಚನ್ ಅವರ ನೇತೃತ್ವದಲ್ಲಿ, ತುಳು-ಕನ್ನಡಿಗರ ಒಕ್ಕೂಟವಾದ ‘ಸ್ವಾಮಿ ಕೊರಗಜ್ಜ ನೇಮೋತ್ಸವ ಸಮಿತಿ ಮಲಾಡ್’ ಇದರ ವತಿಯಿಂದ ಮೇ 30ರ ಶನಿವಾರದಂದು ಮಲಾಡ್ ಪೂರ್ವದ ಪುಷ್ಪಾ ಪಾರ್ಕ್ನಲ್ಲಿರುವ ಉತ್ಕರ್ಷ ಶಾಲೆಯ ಮೈದಾನದಲ್ಲಿ ತಡಸಂಜೆ ‘ಸ್ವಾಮಿ ಕೊರಗಜ್ಜ ನೇಮೋತ್ಸವ’ ಜರುಗಲಿದೆ.
ಅಂದು ಅಪರಾಹ್ನ 3:00 ಗಂಟೆಯಿಂದ ಮಲಾಡ್ ಪೂರ್ವದ ಗೋಲ್ ಗಾರ್ಡನ್ನಿಂದ ಉತ್ಕರ್ಷ ಶಾಲಾ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಯಲಿದೆ.
ಕಾರ್ಯಕ್ರಮದ ವಿವರ:
ಸಂಜೆ 6:00 ರಿಂದ: ನೇಮೋತ್ಸವ ಪ್ರಾರಂಭ.
ರಾತ್ರಿ 8:00 ರಿಂದ: ಮಹಾ ಅನ್ನಸಂತರ್ಪಣೆ.
ತಡರಾತ್ರಿ: ಕೊರಗಜ್ಜನ ಕರಿಗಂಧ ಪ್ರಸಾದ ವಿತರಣೆ.
ಈ ಭಕ್ತಿಪೂರ್ವಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಮಲಾಡ್ ಪೂರ್ವದ ಸ್ವಾಮಿ ಕೊರಗಜ್ಜ ನೇಮೋತ್ಸವ ಸಮಿತಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




