
ಡೊಂಬಿವಲಿಯ ತುಳು ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ಶ್ರೀ ಜಗದಂಬ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ನಾಗರ ಪಂಚಮಿ ಪೂಜೆಯು ಮಂದಿರದ ಪ್ರದಾನ ಅರ್ಚಕರಾದ ಸುಬ್ರಹ್ಮಣ್ಯ ರಾವ್ ಭಟ್ ಮೀರಾ ರೋಡ್ ಹಾಗು ಜಗದೀಶ್ ಭಟ್ ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರಗಿತು.

ಬೆಳಿಗ್ಗೆ ಪ್ರಾತಃ ಕಾಲ ಶ್ರೀ ದೇವಿಗೆ ಅಭಿಷೇಕ, ನಿತ್ಯ ಪೂಜೆ ನಡೆದು 8.30 ರಿಂದ ನಾಗ ತನು, ಅಭಿಷೇಕ ಹಾಗು 11.30 ರಿಂದ ಆಶ್ಲೇಷ ಬಲಿ ಪೂಜೆ ನಡೆದು 12:30 ಗೆ ಮಹಾಮಂಗಳಾರತಿ ಬೆಳಗಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.

ಈ ಧಾರ್ಮಿಕ ಉತ್ಸವದಲ್ಲಿ ಮಂದಿರದ ಅಧ್ಯಕ್ಷರಾದ ದಿವಾಕರ್ ರೈ ದಂಪತಿಗಳು ಉಪಾಧ್ಯಕ್ಷರಾದ ರವೀಂದ್ರ ವೈ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಕೋಶಾಧಿಕಾರಿ ಸಂತೋಷ್ ಶೆಟ್ಟಿ ದಂಪತಿಗಳು, ಜೊತೆ ಕೋಶಾಧಿಕಾರಿ ಹರೀಶ್ ಕೋಟ್ಯಾನ್, ಮಂದಿರದ ಸಲಹೆಗಾರರಾದ ಸತೀಶ್ ಶೆಟ್ಟಿ ಅಜೆಕಾರು ದಂಪತಿಗಳು, ಡೊಂಬಿವಲಿಯ ಸಮಾಜ ಸೇವಕ ಬಿಜೆಪಿ ಸೌತ್ ಸೇಲ್ ಅಧ್ಯಕ್ಷರಾದ ರತನ್ ಪೂಜಾರಿ, ಬಿಲ್ಲವರ ಅಸೋಸಿಯೇಷನ್ ಮುಂಬಯಿ ಯ ಕೋಶಾಧಿಕಾರಿ ರವಿ ಸನಿಲ್ ದಂಪತಿಗಳು, ಸಾಯಿನಾಥ್ ಮಿತ್ರ ಮಂಡಳಿಯ ಅಧ್ಯಕ್ಷರಾದ ಮೋಹನ್ ಸಾಲ್ಯಾನ್, ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿಯ ದಿನೇಶ್ ಮೊಗವೀರ, ಉದ್ಯಮಿ ಲಕ್ಷ್ಮಣ ಪೂಜಾರಿ, ಉದ್ಯಮಿ ರವಿ ಪೂಜಾರಿ ಹಾಗೂ ಅನೇಕ ಡೊಂಬಿವಲಿಯ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಂದಿರದ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಸಹಕರಿಸಿದರು. ಹೆಚ್ಚಿನ ಭಕ್ತರು ಬಂದು ಪೂಜೆ ಹಾಗೂ ಅನ್ನಸಂರ್ಪಣೆ ಯಲ್ಲಿ ಪಾಲ್ಗೊಂಡರು.




