32 C
Mumbai
March 7, 2026
Mumbai News Kannada
ಪ್ರಕಟಣೆ

ಶ್ರೀ ಗುರುದೇವ ನಿತ್ಯಾನಂದ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನ ಸಾಕಿನಾಕ. ಡಿ.21 ರಿಂದ 24ರ ತನಕ ಪುನರ್ ಪ್ರತಿಷ್ಟೆ..





ಅಂಧೇರಿ ಪಶ್ಚಿಮ ಸಾಕಿನಾಕ ,ಲೋಕಮಾನ್ಯ ತಿಲಕ್ ನಗರದ ಶ್ರೀ ಗುರುದೇವ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಮಂದಿರದ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಡಿ.21 ರಿಂದ ಡಿ.24ರ ತನಕ ವಿದ್ವಾನ್ ಕೃಷ್ಣರಾಜ ತಂತ್ರಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.


ಕಾರ್ಯಕ್ರಮದ ವಿವರ :


ಡಿ 21 ಗುರುವಾರ ಸಂಜೆ 5 ಗಂಟೆಯಿಂದ 9 ರ ತನಕ ಪ್ರಿತೋದ್ದಾರ ,ವಾಸ್ತು ಹೋಮ, ಬಲಿ ಬಳಿಕ ಅನ್ನಸಂತರ್ಪಣೆ.


ಡಿ.22 ಕ್ಕೆ ಬೆಳ್ಳಿಗ್ಗೆ 5ರಿಂದ 9 – ಗಣಹೋಮ, ಪ್ರತಿಷ್ಠಾ, ದುರ್ಗಾ ಹೋಮ, ಪ್ರಸನ್ನ ಪೂಜೆ, ನಾಗ ಸೇವೆ, ಮದ್ಯಾಹ್ನ 1.30ರ ಬಳಿಕ ಅನ್ನಸಂತರ್ಪಣೆ. ನಂತರ 3ರಿಂದ ರಾತ್ರಿ 9 ರ ತನಕ ಭಜನೆ, ಬಳಿಕ ಅನ್ನಸಂತರ್ಪಣೆ.


ಡಿ.23ಕ್ಕೆ ಮದ್ಯಾಹ್ನ 12ರಿಂದ ರಾತ್ರಿ 9ಗಂಟೆ ವರೆಗೆ ವಿವಿಧ ಮಂಡಳಿಗಳ ಸದಸ್ಯರಿಂದ ಹರಿನಾಮ ಸಂಕೀರ್ತನೆ.


ಡಿ.24,ಆದಿತ್ಯವಾರ ಸಂಜೆ 5 ಗಂಟೆಯಿಂದ ಉದ್ಘಾಟನಾ ಸಮಾರಂಭ (ಗೌರವ ಅತಿಥಿ ಶಾಸಕ ದಿಲೀಪ್(ಮಾಮ)ಲಾಂಡೆ .
ರಮಾನಾಥ ಕೋಟ್ಯಾನ್ ಮತ್ತು ಪರಿವಾರದ ಪ್ರಯೋಜತ್ವದಲ್ಲಿ ಅನ್ನಸಂತರ್ಪಣೆ.


ಶ್ರೀ ಗುರುದೇವ ನಿತ್ಯಾನಂದ ಬಾಬಾ ಹಾಗೂ ಶ್ರೀ ಚಾಮುಂಡೇಶ್ವರಿ ದೇವಿಯ ಪುನರ್ ಪ್ರತಿಷ್ಠೆಯ ಪ್ರಯುಕ್ತ ನಡೆಯಲಿರುವ 4 ದಿನಗಳ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತ್ತೆ , ಶ್ರೀ ನಿತ್ಯಾನಂದ ಚಾಮುಂಡೇಶ್ವರಿ ಭಕ್ತ ವೃಂದದ ಪರವಾಗಿ ಶ್ರೀಮತಿ ರಾಜೇಶ್ವರಿ ಎಂ ಶೆಟ್ಟಿ ವಿನಂತಿಸಿದ್ದಾರೆ.


ಹೆಚ್ಚಿನ ಮಾಹಿತಿಗೆ : 8976800627 / 8655532067 / 9833966193
ಸಂಪರ್ಕಿಸಿ.



Related posts

ಎ. 13ರಂದು ಮಾಡೂರು ಶ್ರೀ ಪಾಡಾಂಗರ ಭಗವತಿ ಕ್ಷೇತ್ರದಲ್ಲಿ ಕುಮಾರ್ ಬಂಗೇರ ಮತ್ತು ಮನೆಯವರಿಂದ ಹರಕೆಯ ಕೋಲ

Mumbai News Desk

ಅಕ್ಟೋಬರ್ 26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ, ಸಾಹಿತ್ಯ ಚರ್ಚೆ

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬಯಿ – ಸೆ. 28ಕ್ಕೆ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಹಾಗೂ ನೂತನ ವೆಬ್ಸೈಟ್ ಲೋಕಾರ್ಪಣೆ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ: ಅಕ್ಟೋಬರ್ 27ರಂದು 57 ನೇ ವಾರ್ಷಿಕ ಮಹಾಸಭೆ.   

Mumbai News Desk

ಕರ್ನಾಟಕ ಸಂಘ, ಕಲ್ಯಾಣ: ಮಾ.8 ರಂದು ಮಹಿಳಾ ದಿನಾಚರಣೆ

Mumbai News Desk

ಮೇ. 31 ರಂದು ಮಲಾಡ್ ಪೂರ್ವ ದ  ಉತ್ಕರ್ಷ ಶಾಲೆಯ ಮೈದಾನದಲ್ಲಿ ಸ್ವಾಮೀ ಕೊರಗಜ್ಜ ನೇಮೋತ್ಸವ.

Mumbai News Desk