32 C
Mumbai
March 7, 2026
Mumbai News Kannada
ತುಳುನಾಡು

ಕಾಪು : ಧರ್ಮಪಾಲ ಯು ದೇವಾಡಿಗ ಮತ್ತು ಪರಿವಾರದವರ ಹರಕೆ ಮಾರಿ ಪೂಜೆ ಯಶಸ್ವಿ ಸಂಪನ್ನ





ದೇವಾಡಿಗ ಮಹಾಮಂಡಲದ ಅಧ್ಯಕ್ಷ, ಅಖಿಲ ಭಾರತ ತುಳು ಒಕ್ಕೂಟ ಇದರ ಮಾಜಿ ಅಧ್ಯಕ್ಷ ಧರ್ಮಪಾಲ ಯು ದೇವಾಡಿಗ ಅವರು ಸಕುಟುಂಬ – ಪರಿವಾರ ಸಮೇತರಾಗಿ ಅಕ್ಟೋಬರ್ 28ರ ಮಂಗಳವಾರದಂದು ಕಾಪುವಿನ ಶ್ರೀ ಹಳೇಮಾರಿಯಮ್ಮ ದೇವರಿಗೆ ಹರಕೆ ಮಾರಿ ಪೂಜೆ ಸೇವೆ ನೀಡಿದರು.
ಅಂದು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಹೂವಿನ ಪೂಜೆಯ ಬಳಿಕ ಹೊರೆ ಕಾಣಿಕೆಗಳೊಂದಿಗೆ ಮೆರವಣಿಗೆಯಲ್ಲಿ ಶ್ರೀ ಹಳೇಮಾರಿಯಮ್ಮನವರ ಸನ್ನಿಧಿಯಲ್ಲಿ ಹರಕೆ ಮಾರಿ ಪೂಜೆ ಸೇವೆ ನೀಡಿದರು.ಸುಜಾತಾ ಡಿ ದೇವಾಡಿಗ ಅವರು ದೇವಿಗೆ ಮಲ್ಲಿಗೆ ಹಾಗೂ ಪಟ್ಟಿ ಸೀರೆಯನ್ನು ಸಮರ್ಪಿಸಿದರು. ಶ್ರೀ ಮಾರಿಯಮ್ಮನವರನ್ನು ಬೆಳ್ಳಿರಥದಲ್ಲಿ ಸವಾರಿ ಮಾಡಲಾಯಿತು.


ಹರಕೆ ಮಾರಿ ಪೂಜೆಯ ನಂತರ ಬುಧವಾರದಂದು ಸ್ತಳೀಯ ಕೆ ವನ್ ಹೋಟೆಲ್ ನ ಸಭಾಭವನದಲ್ಲಿ ಧರ್ಮ ಪಾಲ ದೇವಡಿಗರು ಅನ್ನದಾನ ಸೇವೆ ನೀಡಿದರು. ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಿ ಧರ್ಮಪಾಲ ದೇವಾಡಿಗ, ಸುಜಾತ ಧರ್ಮಪಾಲ ದೇವಾಡಿಗ, ಡಾ. ಪೂನಂ ಆರ್ ಶರೀಗಾರ್, ಡಾ. ರಾಹುಲ್ ಶೇರಿಗಾರ್, ಪವನ್ ಡಿ ದೇವಾಡಿಗ, ನಿಮ್ಮಿ ಪವನ್ ದೇವಾಡಿಗ, ಚಿತ್ರ ಶೇರಿಗಾರ್ ಹಾಗೂ ಕುಟುಂಬದ ಸದಸ್ಯರು ಕ್ರತಾರ್ಥರಾದರು.


ದೇವಾಡಿಗ ಹಾಗೂ ಪರಿವಾರದ ಸದಸ್ಯರು, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಜಿ ಶೆಣೈ, ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಶೇಖರ್ ಆರ್ ಬೆಲ್ಚಡ, ದೇವಾಡಿಗ ಸಂಘ ಮುಂಬೈ ಅಧ್ಯಕ್ಷ ರವಿ ಯಸ್ ದೇವಾಡಿಗ ಮತ್ತು ಗಣ್ಯರು ಹಾಗೂ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗೀಗಳಾದರು.

.

.

.



Related posts

ಮೂಲ್ಕಿ: “ಅಮ್ಮನ ಆಸರೆ” ಕಾರ್ಯಕ್ರಮಕ್ಕೆ ಚಾಲನೆ

Mumbai News Desk

ಯುವವಾಹಿನಿಯ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ

Mumbai News Desk

ಮುಲ್ಕಿ ವಿಜಯ ರೈತ ಸಂಘದ ಅಧ್ಯಕ್ಷರಾಗಿ ರಂಗನಾಥ ಶೆಟ್ಟಿ ಕಿಲ್ಪಾಡಿ ಬಂಡಸಲೆ ಆಯ್ಕೆ,

Mumbai News Desk

ಕಾಪು: ಜನ ಮೆಚ್ಚಿದ ತಹಶೀಲ್ದಾರ್ ಡಾ. ಪ್ರತಿಭಾ ಅವರಿಗೆ ಆತ್ಮೀಯ ಬೀಳ್ಕೊಡುಗೆ

Mumbai News Desk

ವಿಶ್ವ ಗಾಣಿಗರ ಚಾವಡಿ ಮಂಗಳೂರು – ಉಚಿತ ವೈದ್ಯಕೀಯ ಶಿಬಿರ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಗಡಿಪ್ರದಾನ ಸ್ವೀಕರಿಸಿದ ಪಾತ್ರಾಡಿಗುತ್ತು  ಪುಷ್ಪರಾಜ್ ಶೆಟ್ಟಿ ಸಾಮಾನಿ ಗುತ್ತಿನಾರ್ ಗೌರವ,

Mumbai News Desk