30.6 C
Mumbai
April 23, 2026
Mumbai News Kannada
ಪ್ರಕಟಣೆ

ಸಿದ್ದಿವಿನಾಯಕನ ಕ್ಷೇತ್ರದ *ಶ್ರೀ ಹಟ್ಟಿಯಂಗಡಿ ಮೇಳದ* 10 ನೇ. ವರ್ಷದ ಮುಂಬಯಿ  ತಿರುಗಾಟ – ಜುಲೈ 13 ರಿಂದ. 15 ವರೆಗೆ ಪೂನಾ, ಮುಂಬಯಿ  ಮಹಾನಗರದಲ್ಲಿ ಯಕ್ಷಗಾನ.





    ಉಡುಪಿ ಜಿಲ್ಲೆಯ ಕುಂದಾಪುರದ ಪುರಾಣ ಪ್ರಸಿದ್ದ ಸಿದ್ದಿವಿನಾಯಕನ ಕ್ಷೇತ್ರದ *ಶ್ರೀ ಹಟ್ಟಿಯಂಗಡಿ ಮೇಳದ* 10 ನೇ ವರ್ಷದ ತಿರುಗಾಟದ ಸಂಭ್ರಮದಲ್ಲಿ ಜುಲೈ 13 ರಿಂದ ಪೂನಾ,ಮುಂಬಯಿ ತಿರುಗಾಟ ಹಮ್ಮಿಕೊಂಡಿದ್ದು 15 ರಿಂದ ಮುಂಬಯಿ ಮಹಾನಗರದ ಸುತ್ತಮುತ್ತ ಯಕ್ಷಗಾನ ಆಡಿಸುವವರು ಸಂಪರ್ಕಿಸಬಹುದು.ಮಂಡಳಿಯ ನೂತನ ಕಥಾನಕವಾಗಿ ನಾಗಶ್ರೀ ಜಿ.ಎಸ್ ರಚನೆಯ *ಯದುವಂಶೋದ್ದರಣ* ಹಾಗೂ ಬೇಳೂರು ವಿಷ್ಣುಮೂರ್ತಿ ನಾಯಕ್ ರಚನೆಯ *ಸಿರಿ ಸಿಂಗಾರಿ*  ಖ್ಯಾತ ಪ್ರಸಂಗಗಳಾಗಿದ್ದು ಇತರೇ ಪೌರಾಣಿಕ ಆಖ್ಯಾನಗಳನ್ನೂ ಪ್ರದರ್ಶನ ನಡೆಸುತ್ತಾರೆ . ಯಕ್ಷಗಾನ ಸೇವೆಯ ಮೂಲಕ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.ಮೇಳದಲ್ಲಿ *ವೀರ ಚಂದ್ರಹಾಸ* ಚಿತ್ರದ ನಟ,ನಟಿಯರಾದ ಶಿಥಿಲ್ ಶೆಟ್ಟಿ, ನಾಗಶ್ರೀ ಜಿ.ಎಸ್ ವಿಶೇಷ ಪಾತ್ರ ನಿರ್ವಹಿಸಲಿದ್ದಾರೆ….ಹಿರಿಯ ಕಲಾವಿದ ಹಾಸ್ಯ ಸಾಮ್ರಾಟ ರಮೇಶ್ ಭಂಡಾರಿ ಭಾಗವಹಿಸಲಿದ್ದು,ನರಸಿಂಹ ಗಾಂವ್ಕರ್,ಮಾರುತಿ ನಾಯ್ಕ,ಶ್ರೀಕಾಂತ್ ರಟ್ಟಾಡಿ,ತಿಲಕ್ರಾಜ್,ನವೀನ್ ಕೋಡಿ,ಸುರಾಗ್ ಹೇರೂರು ಮುಂತಾದ ಕಲಾವಿದರು ಹಾಗೂ ವಿನಯ್ ಶೆಟ್ಟಿಕಾವ್ರಾಡಿ,ಪ್ರಭಾಕರ ಹೆಗಡೆ,ಸಾಣ್ಮನೆ ಭಾಗವತಿಕೆ,ಮೂರೂರು ಸುಬ್ರಹ್ಮಣ್ಯ ಹೆಗಡೆ ಮದ್ದಲೆ,ರಾಕೇಶ್ ಮಲ್ಯ ಚಂಡೆ ವಾದಕರಾಗಿ ಭಾಗವಹಿಸಲಿದ್ದಾರೆ .ಪ್ರತೀ ದಿನದ ಯಕ್ಷಗಾನ ಮಾಹಿತಿ ಪತ್ರಿಕೆಯಲ್ಲಿ ಪ್ರಕಟಗೊಳ್ಳಲಿದ್ದು ಹೆಚ್ಚಿನ ಸಂಖ್ಯೆ ಯಲ್ಲಿ ಬಂದು ಕಲಾವಿದರನ್ನು ಪ್ರೋತ್ಸಾಹಿಸಲು ಕೋರಲಾಗಿದೆ            – *ರಂಜಿತ್ ಶೆಟ್ಟಿ ವಕ್ವಾಡಿ*        ಮೇಳದ ಯಜಮಾನರು ಆಟಗಳಿಗೆ ಸಂಪರ್ಕಿಸಿ..

9141930593/9900800593

B. Dinesh Kulal

Mob.: 9821868674



Related posts

ಪೇಜಾವರ ಮಠದಲ್ಲಿ ಹರಿಕಥಾ ವಿದ್ವಾನ್ “ವಿಶ್ವೇಶ ದಾಸ” ಕೈರ ಬೆಟ್ಟು ವಿಶ್ವನಾಥ್ ಭಟ್ ಅವರ  “ತ್ರಿದಿನ ಹರಿಕಥಾ ಸಂಕೀರ್ತನೆ”

Mumbai News Desk

ಮೈಸೂರು ಅಸೋಸಿಯೇಷನ್,  ಮುಂಬಯಿ ಪೆ  17 ರಿಂದ 19 ರವರಿಗೆ* ಶ್ರೀರಂಗ ರಂಗೋತ್ಸವ*

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸನ್ ನಗರ ಥಾಣೆ, ಫೆ. 1ರಂದು 18ನೇ ವಾರ್ಷಿಕ ಶ್ರೀ ಶನಿ ಮಹಾ ಪೂಜೆ

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, ಜ. 12 ರಂದು 88 ನೇ ವಾರ್ಷಿಕೋತ್ಸವ,

Mumbai News Desk

ಶ್ರೀ ಬಾಲಾಜಿ ಸನ್ನಿಧಿ ಪಲಿಮಾರ್ ಮಠ ಜ. 26ರಂದು ವಾರ್ಷಿಕ ಏಕಾಹ ಭಜನಾ ಕಾರ್ಯಕ್ರಮ

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ  ಮಹಮ್ಮಾಯಿ ದೇವಸ್ಥಾನ,  ಎ13 ; ವಾರ್ಷಿಕ ಮಹೋತ್ಸವ ಮತ್ತು ಪಾಲ್ಕಿ ಉತ್ಸವ,

Mumbai News Desk