32 C
Mumbai
April 24, 2026
Mumbai News Kannada
ಪ್ರಕಟಣೆ

ಬಿಲ್ಲವರ ಅಸೋಸಿಯೇಶನ್ ಮುಂಬಯಿ : ಅಂಧೇರಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಜ. 31ಕ್ಕೆ ಶ್ರೀ ಶನೀಶ್ವರ ಗ್ರಂಥ ಪಾರಾಯಣ





ಮುಂಬೈ ತುಳು ಕನ್ನಡಿಗರ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ, ಅಂಧೇರಿ ಸ್ಥಳೀಯ ಕಚೇರಿಯ ವತಿಯಿಂದ ಶ್ರೀ ಶನೈಶ್ಚರ ಗ್ರಂಥ ಪಾರಾಯಣ ಕಾರ್ಯಕ್ರಮವು 31.01.2026ನೇ ಶನಿವಾರದಂದು ಅಂಧೇರಿ ಪೂರ್ವದ ಮರೋಲ್‌ನಲ್ಲಿರುವ ನೆಸ್ಟರ್ ಹೋಟೆಲ್‌ನ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮ :
ಅಂದು ಮಧ್ಯಾಹ್ನ 1.00 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ಶನಿಗ್ರಂಥ ಪಾರಾಯಣ ನಡೆಯಲಿದ್ದು, ನಂತರ ಮಂಗಳಾರತಿ, ಮಹಾಪ್ರಸಾದ ಮತ್ತು ಅನ್ನಸಂತರ್ಪಣೆ.
ಕಾರ್ಯಕ್ರಮದ ಕಳಶ ಪ್ರತಿಷ್ಠೆಯನ್ನು ಹರೀಶ್ ಶಾಂತಿ ಹೆಜಮಾಡಿ ನೆರವೇರಿಸಲಿದ್ದು, ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ ಹರೀಶ್ ಜಿ. ಅಮೀನ್ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಅಂದಿನ ಅನ್ನದಾನದ ಸೇವೆಯು ಶ್ರೀ ಹರೀಶ್ ಜಿ. ಅಮೀನ್ ಅವರ ವತಿಯಿಂದ ನಡೆಯಲಿದೆ.
ಭಕ್ತಾದಿಗಳು ಸಕುಟುಂಬ ಸಮೇತರಾಗಿ ಬಂದು ಪ್ರಸಾದ ಸ್ವೀಕರಿಸಬೇಕೆಂದು ಬಿಲ್ಲವರ ಎಸೋಸಿಯೇಷನ್ ಪರವಾಗಿ ಗೌರವ ಅಧ್ಯಕ್ಷ ಎಲ್ ವಿ ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ ಸಾಲಿಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರವಿ ಸನಿಲ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೇ ಶಕುಂತಲಾ ಕೋಟ್ಯಾನ್, ಧಾರ್ಮಿಕ ಮತ್ತು ಸಾಮಾಜಿಕ ಉಪ ಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ ಜಿ ಅಂಚನ್, ಗೌರವ ಕಾರ್ಯದರ್ಶಿ ಸದಾಶಿವ ಕೋಟ್ಯಾನ್, ಅಂದೇರಿ ಸ್ಥಳೀಯ ಕಚೇರಿಯ ಗೌರವ ಕಾರ್ಯಧ್ಯಕ್ಷ ಸುಧಾಕರ್ ಎಂ ಜತ್ತನ್, ಕಾರ್ಯಧ್ಯಕ್ಷ ಹರೀಶ್ ಶಾಂತಿ ಹೆಜಮಾಡಿ, ಉಪಕಾರ್ಯಧ್ಯಕ್ಷರುಗಳಾದ ದಿನೇಶ್ ಪೂಜಾರಿ,ರಾಮ ಸಿ ಪೂಜಾರಿ, ಗೌರವ ಕಾರ್ಯದರ್ಶಿ ಚಂದ್ರಶೇಖರ್ ಸುವರ್ಣ, ಗೌರವ ಕೋಶಾಧಿಕಾರಿ ನಿಲೇಶ್ ಪೂಜಾರಿ, ಕೇಂದ್ರ ಕಚೇರಿಯ ಪ್ರಭಾರಿ ಜಯಂತಿ ವಿ ಉಳ್ಳಾಲ್, ಕೇಂದ್ರ ಕಚೇರಿ ಪ್ರತಿನಿಧಿ ಹರೀಶ್ ಜಿ ಸಾಲಿಯನ್ ಮತ್ತು ಸರ್ವ ಸದಸ್ಯರು ಹಾಗೂ ಯುವ ವಿಭಾಗ ಮತ್ತು ಮಹಿಳಾ ಸದಸ್ಯರು ವಿನಂತಿಸಿದ್ದಾರೆ.

ವಿ. ಸೂ : ಭಕ್ತಾದಿಗಳು ವಿಶೇಷ ಮಹಾಪೂಜೆಗೆ 1,000 ರೂಪಾಯಿ ಹಾಗೂ ಸಾಮಾನ್ಯ ಪೂಜೆಗೆ 300 ರೂಪಾಯಿ ನೀಡಿ ಪಾಲ್ಗೊಳ್ಳಬಹುದು.
ದೇಣಿಗೆ ನೀಡಲು ಇಚ್ಛಿಸುವವರು ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‌ನ ಖಾತೆ ಸಂಖ್ಯೆ 001210100103694 (IFSC: BCBM0000013) ಗೆ ಮೊತ್ತವನ್ನು ಪಾವತಿಸಬಹುದು. ಹೆಚ್ಚಿನ ಮಾಹಿತಿಗಾಗಿ : 9619093804, 9322725742 ಅಥವಾ 9819943380 ಸಂಖ್ಯೆಗಳನ್ನು ಸಂಪರ್ಕಿಸಿ.



Related posts

ಇಂದು ಡೊಂಬಿವಲಿಯಲ್ಲಿ ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ಫೆ. 6ರಂದು ವಾರ್ಷಿಕ ಉತ್ಸವ.

Mumbai News Desk

ಅಗಸ್ಟ್ 10 : ಯಕ್ಷಾಭ್ಯುದಯ ಬಳಗ ಕೋರ್ಟ್ ನಾಕ, ಥಾಣೆ ಪಶ್ಚಿಮ : ‘ಭಕ್ತ ಚಂದ್ರಹಾಸ’ ಯಕ್ಷಗಾನ ಪ್ರದರ್ಶನ

Mumbai News Desk

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ: ಅ. 11 ಮತ್ತು 12ರಂದು 48ನೇ ವಾರ್ಷಿಕ ಏಕಾಹ ಭಜನಾ ಮಂಗಲೋತ್ಸವ

Mumbai News Desk

ಡಿ.1ರಂದು ಕರ್ನಾಟಕ ಸಂಘ ಡೊಂಬಿವಲಿ : ಲಲಿತ ಕಲಾ ಹಾಗೂ ಮಹಿಳಾ ವಿಭಾಗದ ವತಿಯಿಂದ ನಾಡಹಬ್ಬ.

Mumbai News Desk

ನೆಲ್ಲಿಕಾರು ಶಾಲೆಗೆ ಶತಮಾನೋತ್ಸವದ ಸಂಭ್ರಮ, ಹಳೆ ವಿದ್ಯಾರ್ಥಿಗಳಿಂದ ಬರಹ, ಭಾವಚಿತ್ರ ಆಹ್ವಾನ.

Mumbai News Desk