ಚಿತ್ರಾಪುವಿನ ಶ್ರೀ ವಿಠೋಬ ಬಾಲಲೀಲಾ ಭಜನಾ ಮಂದಿರದ ಶರನ್ನವರಾತ್ರಿ ಮಹೋತ್ಸವಕ್ಕೆ ಹಳೆಯಂಗಡಿ ಪ್ರಿಯದರ್ಶಿನಿ ಕೋ – ಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಸಂತ್ ಬರ್ನಾಡ್ ಉದ್ಘಾಟಿಸಿ, ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು “ದೇವರಲ್ಲಿ ವಿಶ್ವಾಸ, ಸಾಮರಸ್ಯದಲ್ಲಿ ನಂಬಿಕೆಯಿರಿಸಿ ಪರಸ್ಪರ ಸಹಕಾರಿಯಾಗಿ ನಡೆದರೆ ಪ್ರಾದೇಶಿಕ ಅಭಿವೃದ್ದಿಯಾಗುತ್ತದೆ ನವರಾತ್ರಿಯ ಪರ್ವಕಾಲದಲ್ಲಿ ದೇವರ ಆಶೀರ್ವಾದ ಎಲ್ಲರಿಗೂ ಲಭಿಸಲಿ ಎಂದು ಹೇಳಿದರು.
ಊರಿನ ಹಿರಿಯರಾದ ಬಾಲಚಂದ್ರ ಸನಿಲ್ ಪ್ರಾರ್ಥನೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನೀತಾ ಸತೀಶ್ ಶೆಟ್ಟಿ ಪೇಟೆಮನೆ, ಸುವರ್ಣಲತಾ ವಿಶ್ವನಾಥ್ ಶೇರಿಗಾರ್, ಪ್ರೀತಿ ಅಜಿತ್ ಶೆಟ್ಟಿ ಕಾರ್ನಾಡು, ಹಾಗೂ ಭಜನಾ ಮಂದಿರದ ಅಧ್ಯಕ್ಷರು,ಪದಾಧಿಕಾರಿಗಳು,ಮಹಿಳಾ ಮಂಡಳದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
next post




