30.5 C
Mumbai
June 8, 2026
Mumbai News Kannada
ಪ್ರಕಟಣೆ

ಅಕ್ಟೊಬರ್  29 ರಂದು ಭಾನುವಾರ   ಆಲ್ ಅಮೇರಿಕಾ ತುಳುಕೂಟ ದ  ”ತುಳು  ಉಚ್ಚಯ 2023”  ಉತ್ಸವ ಕಾರ್ಯಕ್ರಮ 





————————–

   ಅಮೇರಿಕಾ  : ಅಂತರರಾಷ್ಟ್ರೀಯ ಮಟ್ಟದ ತುಳು  ಸಂಸ್ಥೆ   ”ಆಲ್ ಅಮೇರಿಕಾ ತುಳು ಅಸೋಸಿಯೇಷನ್  AATA”   ತನ್ನ ಮೂರನೇ  ತುಳು ಉಚ್ಚಯ -2023 ನ್ನು ಬರುವ ಭಾನುವಾರ  ತಾರೀಖು 29-10-2023  ಬೆಳಿಗ್ಯೆ ಅಮೇರಿಕಾ ಸಮಯ 11-30ಕ್ಕೆ   ಸರಿಯಾಗಿ   ತುಳುನಾಡಿನ ವಿವಿಧ ಪ್ರತಿಭಾ  ಪ್ರದರ್ಶನದೊಂದಿಗೆ ಯೂ ಟ್ಯೂಬ್ ವರ್ಚುವಲ್ ವೇದಿಕೆಯಲ್ಲಿ ಆಚರಿಸಿಕೊಳ್ಳಲಿದೆ . ಭಾರತದ ಕಾಲಮಾನ  ರಾತ್ರಿ 9:00 ಗಂಟೆಗೆ  ಸರಿಯಾಗಿ ಬಿತ್ತರಗೊಳ್ಳುವ  ಈ ಕಾರ್ಯಕ್ರಮವನ್ನು  ಜಗತ್ತಿನಾದ್ಯಂತ ತುಳುವರು ವೀಕ್ಷಿಸಲಿದ್ದಾರೆ . 

 ಪ್ರತಿ ವರ್ಷ  ಅಕ್ಟೊಬರ್ ತಿಂಗಳಿನಲ್ಲಿ  ನಡೆಯುವ  ಈ ಉತ್ಸವ  ತುಳುನಾಡಿನ  ವಿಶೇಷ ಪ್ರತಿಭೆಗಳನ್ನು ಗುರುತಿಸಿ  ತುಳು ಸಾಹಿತ್ಯ,  ನೃತ್ಯ ಸಂಸ್ಕೃತಿ ಮತ್ತು ಸಂಗೀತದ  ಸೊಬಗನ್ನು ಪ್ರಪಂಚಕ್ಕೆ ಪರಿಚಯಿಸುವ  ಮಹೋನ್ನತ ಕೆಲಸ ಮಾಡುತ್ತಿದೆ . 

ಪ್ರತಿ ವರ್ಷದಂತೆ ಈ ಸಾರಿ ಈ ಉತ್ಸವದಲ್ಲಿ   ವಿಶೇಷ ವ್ಯಕ್ತಿಗಳಾಗಿ   ತುಳು ವಿದ್ವಾಂಸ ಬನ್ನಂಜೆ ಬಾಬು ಅಮೀನ್ , ಮಂಗಳೂರು ವಿಶ್ವವಿದ್ಯಾಲಯ ತುಳು ಅಧ್ಯಯನ ಪೀಠದ   ಡಾ. ಮಾಧವ ಅಮೀನ್ ಎಂ.ಕೆ , ಮಾಜಿ  ವಿಧಾನ ಪರಿಷತ್ ಸದಸ್ಯ  ಐವಾನ್ ಡಿಸೋಜಾ , ಮತ್ತು ತುಳುನಾಡಿನ  ಅಭಿಜಾತ ಕಲಾವಿದೆ   ವಿನಯಾ  ಪ್ರಸಾದ್ ಇವರುಗಳು ತಮ್ಮ ಅನುಭವಾಮೃತದ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ AATA  ಸಂಸ್ಥೆಯ  ಶ್ರೀಮತಿ.ಶ್ರೀವಲ್ಲಿ ರೈ  ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ . 

 ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಸ್ಯಾಕ್ಸೋಫೋನ್ ಕಲಾವಿದ  ಪ್ರಕಾಶ್ ಕಾರ್ಕಳ , ಕುಡ್ಲ ಕುಸಲ್ ತಂಡದ  ಹಾಸ್ಯ ಕಾರ್ಯಕ್ರಮ, ನಾಟ್ಯ ಮಯೂರಿ ಡಾ.  ರಾಧಿಕಾ ಕಲ್ಲೂರಾಯರಿಂದ ನೃತ್ಯ  , ಪ್ರಸಿದ್ಧ ಎಮ್ಮೆಕೆರೆ ತಂಡದಿಂದ  ಹುಲಿವೇಷ  , ಡಾ. ಗುರುದಾಸ ಇವರಿಂದ   ಹರಿಕತೆ , ಮತ್ತು ಬೈಲೂರು ದಂಪತಿಗಳಿಂದ  ವಿಶೇಷ ಪಾರ್ದನ  ಕಾರ್ಯಕ್ರಮಗಳು ನಡೆಯಲಿದೆ. 

  ಯೂ ಟ್ಯೂಬ್ ಚೆನಲ್ www.aatana.org/tulu_uchchaya_2023 ಯಲ್ಲಿ  ಬಿತ್ತರಗೊಳ್ಳುವ ಈ  ವಿಶೇಷ ಕಾರ್ಯಕ್ರಮದಲ್ಲಿ  ತುಳು ಕನ್ನಡ ಬಂಧುಗಳು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ   ತುಳು ಮಣ್ಣಿನ ಸಂಸ್ಕೃತಿ  ಮತ್ತು ಸೊಗಡನ್ನು  ಉಳಿಸುವ ಪ್ರಯತ್ನಕ್ಕೆ  ಪ್ರೋತ್ಸಾಹಕರಾಗಬೇಕೆಂದು  AATA  ಸಂಸ್ಥೆಯ ಪದಾಧಿಕಾರಿಗಳಾದ   ಭಾಸ್ಕರ್ ಶೇರಿಗಾರ್  ಸಿರೀಶ್ ಶೆಟ್ಟಿ , ಸುದರ್ಶನ್ ಶೆಟ್ಟಿ , ಪೂಜಾಶೆಟ್ಟಿ , ಸಂತೋಷ್ ಶೆಟ್ಟಿ , ಡಾ. ಮೋಹ ನ್ ಚಂದ್ರ ಕೆ ಪಿ , ರಂಜನಿ ಅಸೈಗೋಳಿ , ಸುದೀಪ್ ಹೆಬ್ಬಾರ್ , ವಿವಾಸ್ಮಾನ್  ಶೆಟ್ಟಿ , ಆರ್ಯಮಾನ್ ಶೆಟ್ಟಿ   ಮತ್ತು ಸಲಹಾ ಸಮಿತಿಯಾ ಎಲ್ಲ ಸದಸ್ಯರು  ಆತ್ಮೀಯವಾಗಿ ಭಿನ್ನವಿಸಿಕೊಂಡಿದ್ದಾರೆ.  ಐಲೇಸಾ  ಡಿ ವಾಯ್ಸ್ ಆಫ್ ಓಷನ್ ರಿ  ಸಂಸ್ಥೆ  ಕಾರ್ಯಕ್ರಮದ  ಯಶಸ್ಸಿಗೆ ಶುಭ ಹಾರೈಸಿದೆ.



Related posts

ಬಿಲ್ಲವರ ಅಸೋಸಿಯೇಷನ್ ಭಾಯಂದರ್ ‌ ಸ್ಥಳೀಯ ಕಚೇರಿ:ಸೆ.13 ರಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಆಚರಣೆ

Mumbai News Desk

ವಿಶ್ವಬಂಟರ ಸಮ್ಮೇಳನದಲ್ಲಿ  ಸ್ವಾಮೀಜಿಗಳ ಸಮಾಗಮ.

Chandrahas

ಶ್ರೀ ಮಹಾವಿಷ್ಣು ಮಂದಿರ: ಜುಲೈ -27 ರಂದು 48 ನೇ ವಾರ್ಷಿಕ ಮಹಾಸಭೆ.

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಆ. 10 ರಂದು ಕಾಂದಿವಲಿಯಲ್ಲಿ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಜಂಟಿ ಕಾರ್ಯಕ್ರಮ.

Mumbai News Desk

ಪೌರಾಣಿಕ ವಾಚಕ ಸಮಿತಿ ಮುಂಬಯಿ : ಫೆ. 28ಕ್ಕೆ 50ನೇ ವಾರ್ಷಿಕ ಶನಿ ಮಹಾಪೂಜೆ, ಮಾ.1ರಂದು ಸುವರ್ಣ ಮಹೋತ್ಸವ ಆಚರಣೆ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೆಜಮಾಡಿ – 10.2.26ರಿಂದ 23.02.26ರ ವರೆಗೆ “ವರ್ಷಾವಧಿ ಉತ್ಸವ”

Mumbai News Desk