32 C
Mumbai
April 24, 2026
Mumbai News Kannada
ಪ್ರಕಟಣೆ

ಅಕ್ಟೊಬರ್  29 ರಂದು ಭಾನುವಾರ   ಆಲ್ ಅಮೇರಿಕಾ ತುಳುಕೂಟ ದ  ”ತುಳು  ಉಚ್ಚಯ 2023”  ಉತ್ಸವ ಕಾರ್ಯಕ್ರಮ 





————————–

   ಅಮೇರಿಕಾ  : ಅಂತರರಾಷ್ಟ್ರೀಯ ಮಟ್ಟದ ತುಳು  ಸಂಸ್ಥೆ   ”ಆಲ್ ಅಮೇರಿಕಾ ತುಳು ಅಸೋಸಿಯೇಷನ್  AATA”   ತನ್ನ ಮೂರನೇ  ತುಳು ಉಚ್ಚಯ -2023 ನ್ನು ಬರುವ ಭಾನುವಾರ  ತಾರೀಖು 29-10-2023  ಬೆಳಿಗ್ಯೆ ಅಮೇರಿಕಾ ಸಮಯ 11-30ಕ್ಕೆ   ಸರಿಯಾಗಿ   ತುಳುನಾಡಿನ ವಿವಿಧ ಪ್ರತಿಭಾ  ಪ್ರದರ್ಶನದೊಂದಿಗೆ ಯೂ ಟ್ಯೂಬ್ ವರ್ಚುವಲ್ ವೇದಿಕೆಯಲ್ಲಿ ಆಚರಿಸಿಕೊಳ್ಳಲಿದೆ . ಭಾರತದ ಕಾಲಮಾನ  ರಾತ್ರಿ 9:00 ಗಂಟೆಗೆ  ಸರಿಯಾಗಿ ಬಿತ್ತರಗೊಳ್ಳುವ  ಈ ಕಾರ್ಯಕ್ರಮವನ್ನು  ಜಗತ್ತಿನಾದ್ಯಂತ ತುಳುವರು ವೀಕ್ಷಿಸಲಿದ್ದಾರೆ . 

 ಪ್ರತಿ ವರ್ಷ  ಅಕ್ಟೊಬರ್ ತಿಂಗಳಿನಲ್ಲಿ  ನಡೆಯುವ  ಈ ಉತ್ಸವ  ತುಳುನಾಡಿನ  ವಿಶೇಷ ಪ್ರತಿಭೆಗಳನ್ನು ಗುರುತಿಸಿ  ತುಳು ಸಾಹಿತ್ಯ,  ನೃತ್ಯ ಸಂಸ್ಕೃತಿ ಮತ್ತು ಸಂಗೀತದ  ಸೊಬಗನ್ನು ಪ್ರಪಂಚಕ್ಕೆ ಪರಿಚಯಿಸುವ  ಮಹೋನ್ನತ ಕೆಲಸ ಮಾಡುತ್ತಿದೆ . 

ಪ್ರತಿ ವರ್ಷದಂತೆ ಈ ಸಾರಿ ಈ ಉತ್ಸವದಲ್ಲಿ   ವಿಶೇಷ ವ್ಯಕ್ತಿಗಳಾಗಿ   ತುಳು ವಿದ್ವಾಂಸ ಬನ್ನಂಜೆ ಬಾಬು ಅಮೀನ್ , ಮಂಗಳೂರು ವಿಶ್ವವಿದ್ಯಾಲಯ ತುಳು ಅಧ್ಯಯನ ಪೀಠದ   ಡಾ. ಮಾಧವ ಅಮೀನ್ ಎಂ.ಕೆ , ಮಾಜಿ  ವಿಧಾನ ಪರಿಷತ್ ಸದಸ್ಯ  ಐವಾನ್ ಡಿಸೋಜಾ , ಮತ್ತು ತುಳುನಾಡಿನ  ಅಭಿಜಾತ ಕಲಾವಿದೆ   ವಿನಯಾ  ಪ್ರಸಾದ್ ಇವರುಗಳು ತಮ್ಮ ಅನುಭವಾಮೃತದ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ AATA  ಸಂಸ್ಥೆಯ  ಶ್ರೀಮತಿ.ಶ್ರೀವಲ್ಲಿ ರೈ  ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ . 

 ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಸ್ಯಾಕ್ಸೋಫೋನ್ ಕಲಾವಿದ  ಪ್ರಕಾಶ್ ಕಾರ್ಕಳ , ಕುಡ್ಲ ಕುಸಲ್ ತಂಡದ  ಹಾಸ್ಯ ಕಾರ್ಯಕ್ರಮ, ನಾಟ್ಯ ಮಯೂರಿ ಡಾ.  ರಾಧಿಕಾ ಕಲ್ಲೂರಾಯರಿಂದ ನೃತ್ಯ  , ಪ್ರಸಿದ್ಧ ಎಮ್ಮೆಕೆರೆ ತಂಡದಿಂದ  ಹುಲಿವೇಷ  , ಡಾ. ಗುರುದಾಸ ಇವರಿಂದ   ಹರಿಕತೆ , ಮತ್ತು ಬೈಲೂರು ದಂಪತಿಗಳಿಂದ  ವಿಶೇಷ ಪಾರ್ದನ  ಕಾರ್ಯಕ್ರಮಗಳು ನಡೆಯಲಿದೆ. 

  ಯೂ ಟ್ಯೂಬ್ ಚೆನಲ್ www.aatana.org/tulu_uchchaya_2023 ಯಲ್ಲಿ  ಬಿತ್ತರಗೊಳ್ಳುವ ಈ  ವಿಶೇಷ ಕಾರ್ಯಕ್ರಮದಲ್ಲಿ  ತುಳು ಕನ್ನಡ ಬಂಧುಗಳು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ   ತುಳು ಮಣ್ಣಿನ ಸಂಸ್ಕೃತಿ  ಮತ್ತು ಸೊಗಡನ್ನು  ಉಳಿಸುವ ಪ್ರಯತ್ನಕ್ಕೆ  ಪ್ರೋತ್ಸಾಹಕರಾಗಬೇಕೆಂದು  AATA  ಸಂಸ್ಥೆಯ ಪದಾಧಿಕಾರಿಗಳಾದ   ಭಾಸ್ಕರ್ ಶೇರಿಗಾರ್  ಸಿರೀಶ್ ಶೆಟ್ಟಿ , ಸುದರ್ಶನ್ ಶೆಟ್ಟಿ , ಪೂಜಾಶೆಟ್ಟಿ , ಸಂತೋಷ್ ಶೆಟ್ಟಿ , ಡಾ. ಮೋಹ ನ್ ಚಂದ್ರ ಕೆ ಪಿ , ರಂಜನಿ ಅಸೈಗೋಳಿ , ಸುದೀಪ್ ಹೆಬ್ಬಾರ್ , ವಿವಾಸ್ಮಾನ್  ಶೆಟ್ಟಿ , ಆರ್ಯಮಾನ್ ಶೆಟ್ಟಿ   ಮತ್ತು ಸಲಹಾ ಸಮಿತಿಯಾ ಎಲ್ಲ ಸದಸ್ಯರು  ಆತ್ಮೀಯವಾಗಿ ಭಿನ್ನವಿಸಿಕೊಂಡಿದ್ದಾರೆ.  ಐಲೇಸಾ  ಡಿ ವಾಯ್ಸ್ ಆಫ್ ಓಷನ್ ರಿ  ಸಂಸ್ಥೆ  ಕಾರ್ಯಕ್ರಮದ  ಯಶಸ್ಸಿಗೆ ಶುಭ ಹಾರೈಸಿದೆ.



Related posts

ಜ.6ಕ್ಕೆ ಮುಂಬಯಿ ಬಿಲ್ಲವರ ಹಿತಚಿಂತಕರು ಮತ್ತು ಜಯ ಸಿ ಸುವರ್ಣ ಅಭಿಮಾನಿಗಳ ವತಿಯಿಂದ ಪತ್ರಕರ್ತ, ವಾಗ್ಮಿ, ದಿನೇಶ್ ಮಟ್ಟು ಅವರಿಗೆ ಗೌರವ.

Mumbai News Desk

ಎ. 6 ರಂದು ನಗರದ ಹೆಸರಾಂತ ಕನ್ನಡ ಮಾಸಿಕ ಛಾಯಾಕಿರಣ ಪತ್ರಿಕೆಯ ದಶಮಾನೋತ್ಸವ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ಮಾ. 9ರಂದು ಮೊಗವೀರ ಮಾಸಿಕದ 85ರ ಸಂಭ್ರಮ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ (ಸಾವರ್ಕರ್ ನಗರ್ -ಥಾಣೆ)ಅ. 23ರಂದು ದೇವರ ನೂತನ ಪೀಠ ಮಂಟಪ ಹಾಗೂ ದ್ವಾರ ಪ್ರತಿಷ್ಠಾಪನೆ.

Mumbai News Desk

ಹವ್ಯಕ ವೆಲ್ಫೇರ್ ಟ್ರಸ್ಟ್ ನ ಸಂಯೋಜನೆಯಲ್ಲಿ ಜು. 28ಕ್ಕೆ ಯಕ್ಷಗಾನ ಪ್ರದರ್ಶನ

Mumbai News Desk

ಮಾ. 9, ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ: ಮಹಿಳಾ ಸಂಪದ ಸಂಯೋಜನೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ

Mumbai News Desk