
ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಶಿವಸೇನೆ (ಯು. ಬಿ. ಟಿ) ಪಕ್ಷದಿಂದ ಭಾಂದ್ರಾ ವಾರ್ಡ್ 95 ರಲ್ಲಿ ಸ್ಪರ್ಧಿಸಿ ಅತ್ಯಧಿಕ ಮತಗಳ ಅಂತರದಿಂದ ವಿಜಯಿಯಾದ ಹೆಜಮಾಡಿಯ ಪ್ರತಿಷ್ಠಿತ ಗುಂಡಿ ಮನೆಯ ಹರಿ ಶಾಸ್ತ್ರೀ (ಹರಿ ಸಾಲಿಯಾನ್) ಅವರನ್ನು ಇತ್ತೀಚೆಗೆ ಹೆಜಮಾಡಿಯ ಗುಂಡಿ ಮನೆ ನಾಗಬನದಲ್ಲಿ ಸನ್ಮಾನಿಸಲಾಯಿತು.

ನಾಗಬನದ ಪ್ರಧಾನ ಅರ್ಚಕರಾದ ವೇದಮೂರ್ತಿ ಹರಿದಾಸ್ ಭಟ್ ಅವರು ಹರಿ ಸಾಲಿಯಾನ್ ಅವರಿಗೆ ಸನ್ಮಾನ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗುಂಡಿ ಮನೆಯ ದಾಮೋದರ ಬಂಗೇರ, ಜಿನರಾಜ್ ಬಂಗೇರ, ಹರಿ ಸಾಲಿಯಾನ್ ಅವರ ತಾಯಿ ದೇಜಮ್ಮ ಜಗನಾಥ್, ಸದಾನಂದ ಬಂಗೇರ, ರೋಹಿತ್ ಬಂಗೇರ, ವಿನೋದ್ ಬಂಗೇರ, ಸುನಿಲ್ ಬಂಗೇರ, ಭಾಸ್ಕರ್ ಬಂಗೇರ, ಶೀನ ಪೂಜಾರಿ ಪಡುಬಿದ್ರಿ ಹಾಗೂ ಹೇಮಾನಂದ್ ಪುತ್ರನ್ ಮೊದಲಾದವರು ಉಪಸ್ಥಿತರಿದ್ದು ಅಭಿನಂದನೆ ಸಲ್ಲಿಸಿದರು.





