28.8 C
Mumbai
July 15, 2026
Mumbai News Kannada
ಪ್ರಕಟಣೆ

ಡೊಂಬಿವಲಿಯಲ್ಲಿ ಇಂದು( ಜುಲೈ 15) ಅದ್ದೂರಿ ಬಡಗು ಯಕ್ಷ ಸಂಭ್ರಮ: ‘ಶ್ರೀ ಕಾಜಳ್ಳಿ ಕ್ಷೇತ್ರ ಮಹಾತ್ಮೆ’ ಪ್ರದರ್ಶನ, ಸಾಧಕರಿಗೆ ಸನ್ಮಾನ








​ಡೊಂಬಿವಲಿ: ಇಲ್ಲಿನ ಪ್ರತಿಷ್ಠಿತ ಹೋಟೆಲ್ ಉದ್ಯಮಿ, ಯಕ್ಷಕಲಾ ಸಂಘಟಕ ಹಾಗೂ ಕಲಾಪ್ರೇಮಿ, ಡೊಂಬಿವಲಿಯ ಹೋಟೆಲ್ ಮಾತೋಶ್ರೀಯ ಮಾಲಕರಾದ ಶ್ರೀ ರತ್ನಾಕರ ಹೆಗ್ಡೆ ಯವರ ವ್ಯವಸ್ಥಾಪಕತ್ವ ಹಾಗೂ ಸಂಯೋಜನೆಯಲ್ಲಿ ನಾಳೆ ತಾ. 15-07-2026 ನೇ ಬುಧವಾರ ಸಂಜೆ 4 ಕ್ಕೆ ಡೊಂಬಿವಲಿ (ಪೂರ್ವ)ದ ಮಾತೋಶ್ರೀ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅದ್ದೂರಿ ಬಡಗು ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.


​ನಡೂರು ಮಂದಾರ್ತಿ ಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರಿಂದ ‘ಶ್ರೀ ಕಾಜಳ್ಳಿ ಕ್ಷೇತ್ರ ಮಹಾತ್ಮೆ’ ಎಂಬ ಪುಣ್ಯಕಥಾ ಪ್ರಸಂಗವು ಪ್ರದರ್ಶನಗೊಳ್ಳಲಿದೆ. ಇದೇ ಸುಸಂದರ್ಭದಲ್ಲಿ ಮಹಿಷಾಸುರ ಖ್ಯಾತಿಯ ಜನಪ್ರಿಯ ಯಕ್ಷಗಾನ ಕಲಾವಿದರಾದ ಶ್ರೀ ನಂದೀಶ್ ಕುಮಾರ್ ಜನ್ಸಾಲೆ ಇವರನ್ನು ಅತಿಥಿ ಗಣ್ಯರ ಹಸ್ತದಿಂದ ಸನ್ಮಾನಿಸಿ ಗೌರವಿಸಲಾಗುವುದು.


​ಸನ್ಮಾನ ಸಭಾ ಕಾರ್ಯಕ್ರಮದ ಅತಿಥಿ ಗಣ್ಯರು:

​ಶ್ರೀ ರತ್ನಾಕರ ಹೆಗ್ಡೆ (ಹೋಟೆಲ್ ಮಾತೋಶ್ರೀ, ಡೊಂಬಿವಲಿ)
​ಶ್ರೀ ಸುಕುಮಾರ್ ಶೆಟ್ಟಿ (ಅಧ್ಯಕ್ಷರು, ಕರ್ನಾಟಕ ಸಂಘ, ಡೊಂಬಿವಲಿ)
​ಶ್ರೀ ಅಜಿತ್ ಶೆಟ್ಟಿ (ಅಧ್ಯಕ್ಷರು, ಹೋಟೆಲ್ ಅಸೋಸಿಯೇಷನ್, ಡೊಂಬಿವಲಿ)
​ಶ್ರೀ ಸುಬ್ಬಯ್ಯ ಶೆಟ್ಟಿ (ಹೋಟೆಲ್ ಉದ್ಯಮಿ, ಕಲ್ಯಾಣ್)
​ಶ್ರೀ ಭಾಸ್ಕರ್ ಶೆಟ್ಟಿ (ಗುರುದೇವ್ ಹೋಟೆಲ್, ಕಲ್ಯಾಣ್)
​ಶ್ರೀ ಆರ್ಡಿ ಉದಯ ಶೆಟ್ಟಿ (ಹೋಟೆಲ್ ಉದ್ಯಮಿ, ಉಲ್ಲಾಸನಗರ)
​ಶ್ರೀ ದಿವಾಕರ ಶೆಟ್ಟಿ ಇಂದ್ರಾಳಿ (ಹೋಟೆಲ್ ಐಶ್ವರ್ಯ, ಡೊಂಬಿವಲಿ)
​ಶ್ರೀ ಕಿಶೋರ್ ಶೆಟ್ಟಿ (ಹೋಟೆಲ್ ಪ್ರೆಸ್ಟೀಜ್, ಡೊಂಬಿವಲಿ)
​ಶ್ರೀ ವಿಜಿತ್ ಶೆಟ್ಟಿ (ಹೋಟೆಲ್ ದ್ವಾರಕಾ, ಡೊಂಬಿವಲಿ)
​ಶ್ರೀ ಕರುಣಾಕರ್ ಶೆಟ್ಟಿ (ಹೋಟೆಲ್ ಸುಯೋಗ್, ಡೊಂಬಿವಲಿ)
​ಶ್ರೀ ಆನಂದ ಶೆಟ್ಟಿ (ಅಧ್ಯಕ್ಷರು, ಬಂಟರ ಸಂಘ, ಡೊಂಬಿವಲಿ)
​ಶ್ರೀ ಸತೀಶ್ ಶೆಟ್ಟಿ (ಕೆ. ಎನ್. ಪಾರ್ಕ್, ಉದ್ಯಮಿ, ಕಲ್ಯಾಣ್)
​ಶ್ರೀ ಪ್ರಭಾಕರ್ ಶೆಟ್ಟಿ (ಹೋಟೆಲ್ ಅಂಬಿಕಾ, ಡೊಂಬಿವಲಿ)
​ಶ್ರೀ ತುಕಾರಾಂ ರೈ (ಹೋಟೆಲ್ ರೀಜೆನ್ಸಿ, ಡೊಂಬಿವಲಿ)
​ಶ್ರೀ ಸದಾನಂದ ಶೆಟ್ಟಿ (ಅಧ್ಯಕ್ಷರು, ಅಯ್ಯಪ್ಪ ಮಂದಿರ, ಡೊಂಬಿವಲಿ)
​ಶ್ರೀ ಸುಧೀರ್ ಶೆಟ್ಟಿ (ಹೋಟೆಲ್ ಉದ್ಯಮಿ, ಉಲ್ಲಾಸನಗರ)
​ಶ್ರೀ ಸದಾನಂದ ಶೆಟ್ಟಿ (ಡಾಲ್ಫಿನ್ ಹೋಟೆಲ್, ಉಲ್ಲಾಸನಗರ)
​ಶ್ರೀ ಮೋಹನ್ ಶೆಟ್ಟಿ (ಸಾಯಿದೀಪ್ ಲಾಡ್ಜಿಂಗ್, ಡೊಂಬಿವಲಿ)
​ಶ್ರೀ ಸತೀಶ್ ಶೆಟ್ಟಿ (ಹೋಟೆಲ್ ಇಡೋ, ಡೊಂಬಿವಲಿ)
​ಶ್ರೀ ರಾಜೀವ ಭಂಡಾರಿ (ಹೋಟೆಲ್ ಅನ್ನಪೂರ್ಣ, ಡೊಂಬಿವಲಿ)
​ಶ್ರೀ ವೇಣುಗೋಪಾಲ್ ರೈ (ಹೋಟೆಲ್ ಉದ್ಯಮಿ, ಡೊಂಬಿವಲಿ)
​ಶ್ರೀ ಅರುಣ್ ಶೆಟ್ಟಿ (ಹೋಟೆಲ್ ಕುಶಾಲ, ಡೊಂಬಿವಲಿ)

ಕಾರ್ಯಕ್ರಮದಲ್ಲಿ ನಾಡಿನ ಹಾಗೂ ಸ್ಥಳೀಯ ಉದ್ಯಮ ರಂಗದ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.


​ವಿಶೇಷ ಸೂಚನೆ:
ಈ ಯಕ್ಷಗಾನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಹೋಟೆಲ್ ಮಾತೋಶ್ರೀ ಇದರ ಆಡಳಿತ ವರ್ಗ ಹಾಗೂ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದ ವ್ಯವಸ್ಥಾಪಕರಾಗಿದ್ದು, ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ. ಯಕ್ಷಗಾನ ಪ್ರದರ್ಶನದ ಕೊನೆಯಲ್ಲಿ ಸರ್ವರಿಗೂ ಪ್ರೀತಿಯ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮಾಹಿತಿ: ಸೀತಾರಾಮ್ ಶೆಟ್ಟಿ ಆರೂರು.



Related posts

ಶ್ರೀ ದತ್ತಾತ್ರೇಯ ದುರ್ಗಾಂಬಿಕ ದೇವಸ್ಥಾನ ಅಸಲ್ಫಾನ.25 ರಂದು ಸಾಮೂಹಿಕ ಶ್ರೀ ಶನಿ ಮಹಾಪೂಜೆ.

Mumbai News Desk

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಜುಪಾಡ, ಕುರ್ಲಾ (ಪ ) : ಅ.25ರಂದು ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ್ -ಥಾಣೆ: ಡಿಸೇಂಬರ್ 15ರಂದು ಮಾಸಿಕ ಸಂಕ್ರಮಣ ಪೂಜೆ

Mumbai News Desk

ಡೊಂಬಿವಲಿ: ಮಾರ್ಚ್ 17 (ನಾಳೆ) ಅನುಜಾ ಮಹಿಳಾ ಸಂಸ್ಥೆಯ 45ನೇ ವಾರ್ಷಿಕೋತ್ಸವ

Mumbai News Desk

ಕನ್ನಡ ಸಂಘ ಸಯನ್ ವತಿಯಿಂದ ಅಗಸ್ಟ್ 3 ರಂದು ಯಕ್ಷಗಾನ ತಾಳಮದ್ದಳೆ

Mumbai News Desk

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು : ಮೇ. 8ರಂದು “ಕಚ್ಚೂರು ಶ್ರೀ ನಾಗೇಶ್ವರ ಉತ್ಸವ”

Mumbai News Desk