August 22, 2026
Mumbai News Kannada
ಸುದ್ದಿ

ಜುಲೈ 9 : ಗಣೇಶಪುರಿಯಲ್ಲಿ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿಗಳ ಮೂರ್ತಿ ಪುನರ್ ಪ್ರತಿಷ್ಠಾಪನೋತ್ಸವ: ಭಕ್ತರಿಗೆ ಅಪೂರ್ವ ದರ್ಶನದ ಸೌಭಾಗ್ಯ





ಪಶ್ಚಿಮ ಮಹಾರಾಷ್ಟ್ರದ ಇತಿಹಾಸ ಪ್ರಸಿದ್ಧ ಸಮಾಧಿ ಕ್ಷೇತ್ರವಾದ ಗಣೇಶಪುರಿಯ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ನವೀಕರಣಗೊಂಡ ಮೂರ್ತಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವವು ಇದೇ ಗುರುವಾರ (ಜುಲೈ 9) ಅತ್ಯಂತ ವೈಭವದಿಂದ ಜರಗಲಿದೆ.
ಮಂದಿರದ ಶ್ರೀ ಭೀಮೇಶ್ವರ ಸದ್ಗುರು ನಿತ್ಯಾನಂದ ಟ್ರಸ್ಟ್ ವತಿಯಿಂದ ಕಳೆದ ಏಪ್ರಿಲ್ 27 ರಂದು ಮೂರ್ತಿಯ ನವೀಕರಣ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಇದೀಗ ಈ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮೂರ್ತಿಯ ಶುದ್ಧೀಕರಣ ಹಾಗೂ ಸ್ಥಾಪನಾ ವಿಧಿಯ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳು ಜುಲೈ 5 ರಿಂದಲೇ ಆರಂಭಗೊಂಡಿವೆ.
ಇದರ ಮುಕ್ತಾಯದ ಅಂಗವಾಗಿ ಜುಲೈ 9 ರ ಗುರುವಾರದಂದು ನವೀಕರಣಗೊಂಡ ಮೂರ್ತಿಯ ಪುನರ್ ಪ್ರತಿಷ್ಠಾ ವಿಧಿ ವಿಧಾನಗಳು ದಿವ್ಯ ಸನ್ನಿಧಾನದಲ್ಲಿ ನೆರವೇರಲಿವೆ. ಈ ಅಪೂರ್ವ ಹಾಗೂ ಪಾವನ ಕ್ಷಣಕ್ಕೆ ಸಾಕ್ಷಿಯಾಗಲು ಶ್ರೀ ಗುರು ಭಕ್ತರು, ವಿಶೇಷವಾಗಿ ತುಳು-ಕನ್ನಡಿಗ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ‘ಶ್ರೀ ಸ್ವಾಮಿ ನಿತ್ಯಾನಂದ ಭಕ್ತ ಮಂಡಳಿ’ ವಿನಂತಿಸಿದೆ.
ವಿಶೇಷ ಸೂಚನೆ:
ಗುರುವಾರ ಮಧ್ಯಾಹ್ನದ ಮಂಗಳಾರತಿಯ ನಂತರ ಆಗಮಿಸುವ ಎಲ್ಲಾ ಸರ್ವ ಭಕ್ತಾದಿಗಳಿಗೆ ಮಂದಿರದ ಪವಿತ್ರ ಗರ್ಭಗುಡಿಯೊಳಗೆ ಪ್ರವೇಶಿಸಿ, ನೇರವಾಗಿ ದರ್ಶನ ಪಡೆಯಲು ವಿಶೇಷ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದು ಮಂದಿರದ ಪ್ರಕಟಣೆ ತಿಳಿಸಿದೆ.



Related posts

ಉಡುಪಿ: ಬಜೆ ಮೊಗವೀರ ಸುವರ್ಣ ಮೂಲಸ್ಥಾನದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ

Mumbai News Desk

ಕರ್ನಾಟಕ ಸಂಘ ಪನ್ವೆಲ್ ರಾಜ್ಯೋತ್ಸವ ದಿನಾಚರಣೆ .

Mumbai News Desk

ಸಮಾಜ ಸೇವೆಗೆ ಕನ್ಯಾನ ಸದಾಶಿವ ಶೆಟ್ಟಿ ಭಾವುಕ ವಿದಾಯ

Mumbai News Desk

ದೇಗುಲಗಳು ಸರಕಾರದ ವಶದಿಂದ ಮುಕ್ತಗೊಳ್ಳಲಿ : ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

Mumbai News Desk

ಧನರಾಜ್ ಗಾಣಿಗ IBBFF ActiveFit IFBB MR UNIVERSE 2024 ಇಂಡಿಯಾ ಚಾಂಪಿಯನ್ ಆಫ್ ಚಾಂಪಿಯನ್ಸ್

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (10/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk