August 25, 2026
Mumbai News Kannada
ಪ್ರಕಟಣೆ

ಮುಂಬಯಿಯಲ್ಲಿ ಆಗಸ್ಟ್ 26ರಂದು ‘ಕಲಾ ಸೌರಭ’ ಸಂಸ್ಥೆಯಿಂದ ‘ಸ್ವರ ಸಂಗೀತ ಗಾನಾಮೃತ – ನುಡಿ ನಮನ’ ಕಾರ್ಯಕ್ರಮ





ಹೊರನಾಡ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಹಾಗೂ ಮುಂಬೈ ನಗರಿಯ ಪ್ರತಿಷ್ಠಿತ ಕಲಾ ಸಂಸ್ಥೆಯಾದ ‘ಕಲಾ ಸೌರಭ’ ತನ್ನ 34ನೇ ವರ್ಷದ ಸರಣಿ ಕಾರ್ಯಕ್ರಮ “ಸಂಸ್ಕಾರ 2026” ರ 5ನೇ ವಿಶಿಷ್ಟ ಆವೃತ್ತಿಯನ್ನು ಆಯೋಜಿಸಿದೆ. ಈಗಾಗಲೇ ಮುಂಬೈ ಹಾಗೂ ಮಂಗಳೂರಿನಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಜನಮನ್ನಣೆ ಗಳಿಸಿರುವ ಎನ್ ಸಂಸ್ಥೆಯು, ಶಿರ್ಡಿಯ ಶ್ರೀ ಸಾಯಿಬಾಬಾ ಸಂಸ್ಥಾನಮ್ ಆಶ್ರಯದಲ್ಲಿ ರಾಮನವಮಿಯ ಶುಭ ದಿನದಂದು ಚಾಲನೆಗೊಂಡ ಈ ಸರಣಿಯ ಮುಂದಿನ ಭಾಗವಾಗಿ “ಸ್ವರ ಸಂಗೀತ ಗಾನಾಮೃತ – ನುಡಿ ನಮನ” ಸಾಂಸ್ಕೃತಿಕ ಪಯಣವನ್ನು ಹಮ್ಮಿಕೊಂಡಿದೆ.

ಈ ಅರ್ಥಪೂರ್ಣ ಕಾರ್ಯಕ್ರಮವು ಭಗವಂತನ ಪಾದಕಮಲಗಳಲ್ಲಿ ಐಕ್ಯರಾದ ಗಾನಲೋಕದ ಧ್ರುವತಾರೆಗಳಾದ ದಿ| ಎಸ್. ಜಾನಕಿ, ದಿ| ಎಸ್. ಪಿ. ಬಾಲಸುಬ್ರಹ್ಮಣ್ಯಮ್ ಹಾಗೂ ದಿ| ವಾಣಿ ಜಯರಾಮ್ ಅವರ ಸ್ಮರಣಾರ್ಥವಾಗಿ ನಡೆಯಲಿದೆ. ಕಲಾ ಸೌರಭ ತಂಡದ ರೂವಾರಿ, ಸಂಘಟಕ ಹಾಗೂ ಸಂಗೀತ ನಿರ್ದೇಶಕರಾದ ಪದ್ಮನಾಭ ಸಸಿಹಿತ್ಲು ಅವರ ವಿಶಿಷ್ಟ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮವು ಬರುವ ಬುಧವಾರ, 26/08/2026 ರಂದು ಅಪರಾಹ್ನ 3:00 ಗಂಟೆಗೆ ಮುಂಬೈನ ಸಾಂತಾಕ್ರೂಸ್ (ಪೂರ್ವ) ನ ಬಿಲ್ಲವ ಭವನದ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಜರುಗಲಿದೆ.

ಮುಂಬೈ, ಬೆಂಗಳೂರು ಮತ್ತು ಮಂಗಳೂರು ನಗರಗಳ ಸರಿಸುಮಾರು 50 ರಿಂದ 70 ರಷ್ಟು ಸುಪ್ರಸಿದ್ಧ ಗಾಯನ ಹಾಗೂ ನರ್ತನ ಕಲಾವಿದರು ಈ ಸಮಾರಂಭದಲ್ಲಿ ಭಾಗವಹಿಸಿ, ವೈವಿಧ್ಯಮಯ ಸಂಗೀತ-ನೃತ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಜೊತೆಗೆ ವಿವಿಧ ಕನ್ನಡ ಮತ್ತು ತುಳು ಸಂಘ ಸಂಸ್ಥೆಗಳ ವೃಂದ ಗಾಯನದ ಮೂಲಕ ಈ ಅಮರ ಗಾಯಕರಿಗೆ ಭಾವಪೂರ್ಣ ನುಡಿನಮನ ಹಾಗೂ ಪುಷ್ಪಾರ್ಪಣೆ ಸಲ್ಲಿಕೆಯಾಗಲಿದೆ.

ಸಂಪೂರ್ಣ ಶಿಸ್ತುಬದ್ಧ ಹಾಗೂ ಸಂಗೀತಮಯವಾಗಿ ಜರುಗಲಿರುವ ಈ ಸಮಾರಂಭದಲ್ಲಿ ಪ್ರಾರ್ಥನೆ, ಉದ್ಘಾಟನೆ, ದೀಪಾರ್ಪಣೆ, ಪುಷ್ಪಾರ್ಪಣೆ, ನುಡಿ ನಮನ, ಸಂಸ್ಮರಣಾ ಗಾನಾರ್ಪಣೆ ಹಾಗೂ ಗೌರವ ವಂದನಾರ್ಪಣೆಗಳಂತಹ ಸಾಂಸ್ಕೃತಿಕ ಚಟುವಟಿಕೆಗಳು ನೆರವೇರಲಿವೆ. ಕಲಾ ಪೋಷಕರು ಹಾಗೂ ಸಾಧಕರು ಈ ಐತಿಹಾಸಿಕ ವೇದಿಕೆಯಲ್ಲಿ ಮುಖ್ಯ ಗೌರವಾನ್ವಿತರಾಗಿ ಉಪಸ್ಥಿತರಿದ್ದು, ತನು-ಮನ-ಧನದ ಸಹಕಾರ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.



Related posts

ಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದ ರಿ. 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ಮಹಾ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ

Mumbai News Desk

ಮಾ.3, ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ, ಡೊಂಬಿವಲಿ ಸ್ಥಳೀಯ ಸಮಿತಿ ಕುಂದರಂಜನಿ – 2024

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಡಿ.24ರಂದು 9ನೇ ಮೂಲತ್ವ ವಿಶ್ವ ಪ್ರಶಸ್ತಿ-2023.

Mumbai News Desk

ಜ.5 ರಂದು ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ ಇದರ 11ನೇ ವರ್ಷದ ಅಯ್ಯಪ್ಪ ಸ್ವಾಮಿಯ ಪಡಿ ಪೂಜೆ ಮತ್ತು ಮಹಾಪೂಜೆ.

Mumbai News Desk

ಮೇ 4 ಮತ್ತು 5ರಂದು ನಿಟ್ಟೂರು ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ನೇಮೋತ್ಸವ.

Mumbai News Desk

ಜಗಜ್ಯೋತಿ ಕಲಾವೃಂದ ಮುಂಬಯಿ : ಫೆ. 9ರಂದು 38ನೇ ವಾರ್ಷಿಕೋತ್ಸವ, ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ

Mumbai News Desk