ಗೋರೆಗಾಂವ್ ಕರ್ನಾಟಕ ಸಂಘದ 68ನೇಯ ವಾರ್ಷಿಕ ಮಹಾಸಭೆಯು ದಿನಾಂಕ 19/7/ 2026 ರವಿವಾರ ಸಂಜೆ 4:30 ಗಂಟೆಗೆ ಸರಿಯಾಗಿ ಕೇಶವ ಗೋರೆ ಸ್ಮಾರಕ ಟ್ರಸ್ಟಿನ ಸಭಾಗೃಹ, ಅಂಬಾಮಾತ ದೇವಸ್ಥಾನದ ಹತ್ತಿರ ,ಆರೇರೋಡ್ ಗೋರೆಗಾಂವ್ ಪಶ್ಚಿಮ .ಇಲ್ಲಿ ಸಂಘದ ಅಧ್ಯಕ್ಷರಾದ ವಿಶ್ವನಾಥ ಕೆ. ಶೆಟ್ಟಿಯವರ
ಅಧ್ಯಕ್ಷತೆಯಲ್ಲಿ ಜರಗಲಿರುವುದು.
ಸಂಘದ ಸದಸ್ಯರು ಸಮಯಕ್ಕೆ ಸರಿಯಾಗಿ ಆಗಮಿಸಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ತಮ್ಮ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ವಾರ್ಷಿಕ ಮಹಾಸಭೆಯು ಯಶಸ್ವಿಯಾಗುವಂತೆ ಸಹಕರಿಸಬೇಕೆಂದು ಸಂಘದ ಅಧ್ಯಕ್ಷರಾದ ವಿಶ್ವನಾಥ್ ಕೆ. ಶೆಟ್ಟಿ , ಗೌರವ ಪ್ರಧಾನ ಕಾರ್ಯದರ್ಶಿ ಶಾಂತಾ. ಎನ್ .ಶೆಟ್ಟಿ,
ಕೋಶಾಧಿಕಾರಿ ಕರುಣಾಕರ ಕೆ. ಶೆಟ್ಟಿ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ವಿಶೇಷ ಸೂಚನೆ ..ಪ್ರಸ್ತುತ ವರ್ಷ 2025 _26ರಲ್ಲಿ 10ನೇ ತರಗತಿ ಮತ್ತು 12ನೇ ತರಗತಿಯಲ್ಲಿ 90 ಶೇಕಡ ಅಂಕದಿಂದ ಮೇಲ್ಪಟ್ಟು ಉತ್ತೀರ್ಣರಾದ ಸದಸ್ಯರ ಮಕ್ಕಳನ್ನು ಆಗಸ್ಟ್ 15 ಸ್ವಾತಂತ್ರ ದಿನಾಚರಣೆಯಂದು ಗೌರವಿಸಲಾಗುವುದು. ಆದುದರಿಂದ ಮಕ್ಕಳ ಮಾರ್ಕ್ ಶೀಟ್ ಗಳೊಂದಿಗೆ ಪಾಲಕ ಸದಸ್ಯರು ಸಂಘದ ಕಛೇರಿಯಲ್ಲಿ ಸಂಘದ ಗೌ.ಪ್ರ. ಕಾರ್ಯದರ್ಶಿಯವರನ್ನು ಸಂಪರ್ಕಿಸ ತಕ್ಕದ್ದು.





