30 C
Mumbai
April 24, 2026
Mumbai News Kannada
ಸುದ್ದಿ

ನ್ಯೂ ಪನ್ವೇಲ್  ಶ್ರೀ ವೃಂದಾವನ ಬಾಬಾ ಅಯ್ಯಪ್ಪ ಭಕ್ತ ವೃಂದ19ನೇ ಶ್ರೀ ಅಯ್ಯಪ್ಪ ಮಹಾಪೂಜೆ





ಪನ್ವೇಲ್ ಜ 5,   ಪನ್ವೆಲ್ ಪೂರ್ವ ದ ಯ ಸೆಕ್ಟರ್ 5/A, ಗುರುದ್ವಾರದ ಹಿಂದೆ   ಸ೦ತ ಶ್ರೀ ವೃಂದಾವನ ಬಾಬಾ ಸಮಾಧಿ ಮುಂದಿರದಲ್ಲಿ ತುಳು ಕನ್ನಡಿಗರು ಸ್ಥಾಪಿಸಿರುವ ವೃಂದಾವನ ಬಾಬಾ ಭಜನೆ ಮಂಡಳಿಯ ಸದಸ್ಯರು. ಅಯ್ಯಪ್ಪ ಭಕ್ತರು. ಹಾಗೂ  ನ್ಯೂ ಪನ್ವೇಲ್ ನಗರ ಸೇವಕ ಸಂತೋಷ ಜಿ ಶೆಟ್ಟಿ ಇವರೆಲ್ಲರ ಒಗ್ಗಟ್ಟಿನಲ್ಲಿ ಪ್ರಾರಂಭಿಸಿಕೊಂಡಿರುವ

ಶ್ರೀ ವೃಂದಾವನ ಬಾಬಾ ಅಯ್ಯಪ್ಪ ಭಕ್ತ ವೃಂದಾ  19 ನೇ ಶ್ರೀ ಅಯ್ಯಪ್ಪ ಮಹಾಪೂಜೆಯ ಜ 1 ಸೋಮವಾರ ಭಕ್ತಿ ಸಂಭ್ರಮದೊಂದಿಗೆ ಆಚರಿಸಲಾಯಿತು

ಬೆಳಗ್ಗೆ  ಮಹಾ ಗಣಪತಿ ಹೋಮ ಬಳಿಕ ಶ್ರೀ ವೃಂದಾವನ ಬಾಬಾ ಭಜನಾ ಮಂಡಳಿ ಭಜನೆ ಅನಂತರ ಜಯ  ಗುರುಸ್ವಾಮಿ ಮಹಾಮಂಗಳಾರತಿಯನ್ನು ನಡೆಸಿದರು.ಮಧ್ಯಾಹ್ನ ಮಹಾಪ್ರಸಾದ ಅನ್ನಸಂತರ್ಪಣೆ ಯಲ್ಲಿ ಸಾವಿರಾರು ಸಂಖ್ಯೆ ಅಯ್ಯಪ್ಪ ಸ್ವಾಮಿಯ ಭಕ್ತರು ಪಾಲ್ಗೊಂಡಿದ್ದರು.

ಮಧ್ಯಾಹ್ನ ನಂತರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಪುಣೆ ಹಾಗೂ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಕೋರ್ದಬ್ಬು ಭಾರಗ” ಎಂಬ ತುಳು ಐತಿಹಾಸಿಕ ಯಕ್ಷಗಾನ ಪ್ರಸಂಗವನ್ನು ನಡೆಯಿತು

 ಪೂಜಾ ಕಾರ್ಯಕ್ಕೆ ಆಗಮಿಸಿದ   ಪನ್ವೆಲ್ ನ  ಶಾಸಕ ಪ್ರಶಾಂತ್ ಠಾಕೂರ್ . ಮತ್ತು  ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಪುಣೆ ಯ ಅಧ್ಯಕ್ಷ ಪ್ರವೀಣ್ ಶೆಟ್ಟಿ  ಪುತ್ತೂರು ಇವರನ್ನು ನಗರ ಸೇವಕ ಸಂತೋಷ ಜಿ ಶೆಟ್ಟಿ ಪನ್ವಲ್ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ ( ಪದ್ಮ). ಬಿ ಕೆ ಗುರುಸ್ವಾಮಿ ಮತ್ತಿದ್ದರು ತುಳು ಕನ್ನಡಿಗರು ಗೌರವಿಸಿದರು.

ಪೂಜಾ ಕಾರ್ಯಗಳು ವಿಜ್ರಮ್ಮನೆಯಿಂದ ನಡೆಯಲು ವೃಂದಾವನ ಬಾಬಾ ಭಜನೆ ಮಂಡಳಿಯ ಸದಸ್ಯರು. ಅಯ್ಯಪ್ಪ ಭಕ್ತರು. ಪನ್ವಲ್ ಕರ್ನಾಟಕ ಸಂಘದ ಪದಾಧಿಕಾರಿಗಳು ಸದಸ್ಯರು  ಸಹಕರಿಸಿದರು 



Related posts

ಜನವಿಕಾಸ ಸಮಿತಿ ಪುನರೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ

Mumbai News Desk

ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ: ಚಿಕ್ಕಬಳ್ಳಾಪುರದ ಎಂಟು ಭಕ್ತರ ದುರ್ಮರಣ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ-ನಿರ್ದೇಶಕರಾಗಿ  ಬೆಳ್ಳಾಡಿ ಅಶೋಕ್ ಶೆಟ್ಟಿ ಸೇರ್ಪಡೆ

Mumbai News Desk

ಕಾಂತಾವರ : ಶೋಧನ್ ಜೈನ್ ಕೊಡಗುತ್ತು ನಿರ್ಮಿಸಿದ ಕಾಂತೇಶ್ವರ ದೇವರ ಭಕ್ತಿ ಗೀತೆಯ ಆಲ್ಬಂ ಸಾಂಗ್ ಲೋಕಾರ್ಪಣೆ

Mumbai News Desk

ಇಂದು ಭಾರತ್ ಬಂದ್ : ದೇಶಾದ್ಯಂತ ವ್ಯಾಪಕ ಪ್ರತಿಭಟನೆ! ಏನೇನಿರುತ್ತೆ, ಏನಿರಲ್ಲ?: ಇಲ್ಲಿದೆ ಸಂಪೂರ್ಣ ಮಾಹಿತಿ

Mumbai News Desk

ನೇತ್ರಾವತಿ ನದಿ ನೀರು ಕಲುಷಿತ – ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ತೋನ್ಸೆ ಜಯಕ್ರಷ್ಣ ಶೆಟ್ಟಿ ಆಗ್ರಹ

Mumbai News Desk