July 23, 2026
Mumbai News Kannada
ಸುದ್ದಿ

ಭಾರತ್ ಬ್ಯಾಂಕ್ ಕುರಿತು ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಪ್ರಕಟಣೆಯ ಬಗ್ಗೆ, ಬ್ಯಾಂಕ್ ನ ಎಂ ಡಿ ಮತ್ತು ಸಿ ಇ ಓ ವಿದ್ಯಾನಂದ ಕರ್ಕೇರರಿಂದ ಸ್ಪಷ್ಟನೆ







ಭಾರತ್ ಬ್ಯಾಂಕ್ ನ ಪ್ರಿಯ ಗ್ರಾಹಕರು ಮತ್ತು ಶೇರುದಾರರ ಅವಗಾಹನೆಗೆ

*ಮುಂಬಯಿ ಯ ಒಂದು ಇಂಗ್ಲಿಷ್ ಪತ್ರಿಕೆಯಲ್ಲಿ, “ಕೆಲವು ಬ್ಯಾಂಕುಗಳು ಸಮಸ್ಯೆಯಲ್ಲಿವೆ” ಎಂದು ಪ್ರಕಟವಾಗಿರುವ ಬ್ಯಾಂಕ್ ಗಳ ಪಟ್ಟಿಯಲ್ಲಿ *ಭಾರತ್ ಕೋ ಆಪರೇಟಿವ್ ಬ್ಯಾಂಕ್ (ಮುಂಬಯಿ ಲಿಮಿಟೆಡ್) ನ ಹೆಸರನ್ನು ಸೇರಿಸುವುದರ ಮೂಲಕ ಸುಳ್ಳು ಮಾಹಿತಿಯನ್ನು ಪ್ರಕಟಿಸಿದ್ದಾರೆ.*

ನಾವು ಇಲ್ಲಿ ತಿಳಿಯಪಡಿಸುವುದೇನೆಂದರೆ ಭಾರತ್ ಬ್ಯಾಂಕ್ ಯಾವುದೇ ರೀತಿಯ ಸಂಕಷ್ಟದಲ್ಲಿ ಇಲ್ಲ. ಬ್ಯಾಂಕಿನ ವ್ಯವಹಾರದಲ್ಲಿಯೂ ಸಂಪೂರ್ಣ ಸಮತೋಲನ ಕಾಪಾಡಿಕೊಂಡು ಬರುತ್ತಿದೆ. ಗ್ರಾಹಕರು ಮತ್ತು ಷೇರುದಾರರರು ಯಾವುದೇ ತರಹದ ಭಯ ಪಡುವ ಅಗತ್ಯ ಇಲ್ಲ ಎಂದು ಈ ಮೂಲಕ ಸ್ಪಷ್ಟನೆ ನೀಡುತ್ತಿದ್ದೇವೆ.

ಯಾವುದೇ ಸಾಕ್ಷಾಧಾರಗಳಿಲ್ಲದೆ ಈ ತಪ್ಪು ಮಾಹಿತಿ ಮತ್ತು ವರದಿಯನ್ನು ಪ್ರಕಟಿಸಿದ ಪತ್ರಿಕೆಯ ಮೇಲೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಹಾಗೂ ಈ ವರದಿ ಮತ್ತು ಸಂದೇಶವನ್ನು ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ, ವಾಟ್ಸಾಪ್ಗಳಲ್ಲಿ ರವಾನಿಸುವ ವ್ಯಕ್ತಿಗಳ ಮತ್ತು watsapp ಗ್ರೂಪ್ admin ಗಳ ಮೇಲೆ ಭಾರತ್ ಬ್ಯಾಂಕ್ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.

ಷೇರುದಾರರೇ, ಗ್ರಾಹಕರೇ ಹಾಗೂ ಹಿತೈಷಿಗಳೇ ನಿಮ್ಮ ಭಾರತ್ ಬ್ಯಾಂಕ್ ಯಾವುದೇ ತೊಂದರೆಯಲ್ಲಿ ಇಲ್ಲ. ಎಲ್ಲಾ ಕ್ಷೇತ್ರದಲ್ಲಿಯೂ ಸಮತೋಲನವನ್ನು ಕಾಪಾಡಿಕೊಂಡು ಯಶಸ್ಸಿನ ಪಥದಲ್ಲಿ ಸಾಗುತ್ತಿದೆ. ಭಾರತ್ ಬ್ಯಾಂಕ್ 18000 ಸಾವಿರ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸುತ್ತಿದೆ, ಠೇವಣಿ ಹಾಗೂ ಮುಂಗಡ ವ್ಯವಸ್ಥಿವಾಗಿದೆ, CRAR ratio 13.70 %ಇದೆ, ಅದರಲ್ಲೂ ಸ್ವಂತ ಕೇಂದ್ರ ಕಚೇರಿ ಹಾಗೂ ಬ್ಯಾಂಕ್ ನ 103 ಶಾಖೆಗಳಲ್ಲಿ ಶೇಕಡಾ 60 ಪ್ರತಿಶತ ಸ್ವಂತ ಕಟ್ಟಡಗಳನ್ನು ಹೊಂದಿ ಬ್ಯಾಂಕ್ ಸದೃಢವಾಗಿದೆ. ಹಾಗಾಗಿ ತಪ್ಪು ಸಂದೇಶಗಳ ಕುರಿತು ಆತಂಕಪಡದೆ ನಿಶ್ಚಿಂತರಾಗಿರಿ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.

ಭಾರತ್ ಬ್ಯಾಂಕ್ ಪರವಾಗಿ

ಶ್ರೀ ವಿದ್ಯಾನಂದ್ ಎಸ್ ಕರ್ಕೇರ.
MD & CEO



Related posts

ಡಹಾಣೂ ಬಂಟ್ಸ್ ಸಂಘದಿಂದ “ಕಾಂತಾರ” ಚಿತ್ರ ಪ್ರದರ್ಶನ.

Mumbai News Desk

ನೊಂದವರ ಬಾಳಿಗೆ ಬೆಳಕಾಗುವ ‘ನೆರವು’: 4 ಸಾವಿರ ಕುಟುಂಬಗಳಿಗೆ ₹9.5 ಕೋಟಿ ಆರ್ಥಿಕ ಸಹಾಯ ಹಸ್ತ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ, ಮುಂಬಯಿ ಇದರ ನವಿ ಮುಂಬಯಿ ಶಾಖೆಯ ಸದಸ್ಯರಿಂದ ಪನ್ವೇಲ್‌ನ ಗಿರಿಜಾ ವೆಲ್ಫೇರ್‌ ಆಶ್ರಮಕ್ಕೆ ಭೇಟಿ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ಪ್ರಶಸ್ತಿ ಸ್ವೀಕರಿಸಿದ ಫೂಲ್‌ಬಸನ್ ಬಾಯಿ ಯಾದವ್ ಆಶಯ : ಅಹಂ, ಆಸೆಯಿಂದ ಕೇಡು; ಕರ್ಮ ಒಳಿತಿನ ಬೀಡು

Mumbai News Desk

ಕರ್ನಾಟಕ : ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ.

Mumbai News Desk

ತತ್ಕಾಲ್ ರೈಲ್ವೆ ಟಿಕೆಟ್ ಬುಕಿಂಗ್ಗೆ ಹೊಸ ರೂಲ್ಸ್: ಜುಲೈ 1ರಿಂದ ಆಧಾರ್ ಲಿಂಕ್ ಕಡ್ಡಾಯ

Mumbai News Desk