ಮುಂಬಯಿ ಮ2. ಮೊಗವೀರ ಸಮಾಜ ಹಿರಿಯರು ಸ್ಥಾಪಿಸಿರುವ ಮೊಗವೀರ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವಾ ಸೌಲಭ್ಯವನ್ನು ನೀಡುತ್ತಾ ಜನಪ್ರಿಯವಾಗಿದೆ, ಬ್ಯಾಂಕಿನ ಕಾರ್ಯಾಧ್ಯಕ್ಷರುಭಾಸ್ಕರ್ ಎಲ್ ಸಾಲಿಯಾನ್
ಯವರು ಉತ್ತರ ಮುಂಬೈ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಶೆಟ್ಟಿ ಅವರನ್ನು ಭೇಟಿ ಮಾಡಿ ಬ್ಯಾಂಕಿನ ಮುಂದಿನ ಯೋಜನೆಗಳನ್ನು ತಿಳಿಸಿದರು.
ಮೊಗವೀರ ಬ್ಯಾಂಕಿನ ಸೇವಾ ಕಾರ್ಯಗಳನ್ನು ಪ್ರಸಂಪಿಸಿದ ಸಂಸದ ಗೋಪಾಲ್ ಶೆಟ್ಟಿ ಅವರು ಭಾಸ್ಕರ್ ಸಾಲಿಯನ್ ಅವರನ್ನು ಸಾಲು ಹೂಗುಚ್ಛ ನೀಡಿ ಅಭಿನಂದಿಸಿದರು,
ಈ ಸಂದರ್ಭದಲ್ಲಿ ಮೊಗವೀರ ಬ್ಯಾಂಕಿನ ಹರೀಶ್ ಶ್ರೀಯಾನ್, ರಮೇಶ್ ಸಾಲಿಯಾನ್, ಹರಿಶ್ಚಂದ್ರ ಕಾಂಚನ್, ಪ್ರದೀಪ್ ಮುಲ್ಕಿ ಮತ್ತು ಎಜಿಎಂ ರಿಕವರಿ & ಬಿಸಿನೆಸ್ ಡೆವಲಪ್ಮೆಂಟ್ ಯ ಯದುವೀರ್ ಪುತ್ರನ್ ಮತ್ತು ಮೊಗವೀರ ಮುಖಂಡರು ಉಪಸ್ಥರಿದ್ದರು ,




