July 20, 2026
Mumbai News Kannada
ಪ್ರಕಟಣೆ

ತೋನ್ಸೆ – ಹೂಡೆಯಲ್ಲಿ 10 ದಿನಗಳ ಉಚಿತ ‘ಫೂಟ್ ಪಲ್ಸ್ ಥೆರಪಿ’ ಆರೋಗ್ಯ ಶಿಬಿರ: ಜುಲೈ 22 ರಿಂದ ಚಾಲನೆ







ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ (ರಿ.) ತೋನ್ಸೆ – ಹೂಡೆ, ಶ್ರೀ ದೇವಿ ಬಿಲ್ಲವ ಮಹಿಳಾ ಘಟಕ ತೋನ್ಸೆ – ಹೂಡೆ ಹಾಗೂ ಸಂಸ್ಥೆಯ ಸಹಯೋಗದೊಂದಿಗೆ ಸಾರ್ವಜನಿಕರ ಉತ್ತಮ ಆರೋಗ್ಯಕ್ಕಾಗಿ 10 ದಿನಗಳ ‘ಫೂಟ್ ಪಲ್ಸ್ ಥೆರಪಿ’ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಜುಲೈ 22, 2026ನೇ ಬುಧವಾರದಿಂದ ಆರಂಭಗೊಂಡು ಸುಮಾರು 10 ದಿನಗಳ ಕಾಲ ಹೂಡೆಯ ಶ್ರೀ ನಾರಾಯಣಗುರು ಸಭಾಭವನದಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 5:00 ಗಂಟೆಯವರೆಗೆ ನಡೆಯಲಿದೆ.


ಯಾವುದೇ ಔಷಧವಿಲ್ಲದೇ ರಕ್ತ ಸಂಚಾರ ಹಾಗೂ ನರ ಸಂಬಂಧಿತ ಕಾಯಿಲೆಗಳಿಗೆ ಉಚಿತವಾಗಿ ನೀಡುವ ಈ ಥೆರಪಿಯನ್ನು 10 ವರ್ಷ ಮೇಲ್ಪಟ್ಟವರು ಮತ್ತು ಯಾವುದೇ ಆರೋಗ್ಯ ಸಮಸ್ಯೆ ಇಲ್ಲದವರೂ ಸಹ ತಮ್ಮ ಉತ್ತಮ ಆರೋಗ್ಯ ಹಾಗೂ ಸೌಂದರ್ಯ ಕಾಯ್ದುಕೊಳ್ಳಲು ಉಪಯೋಗಿಸಬಹುದಾಗಿದೆ. ಪ್ರತಿದಿನ ಕೇವಲ 30 ನಿಮಿಷಗಳ ಕಾಲ ಈ ಥೆರಪಿ ಬಳಸುವುದರಿಂದ ಪಾದದಲ್ಲಿರುವ ಅಕ್ಯುಪ್ರೆಷರ್ ಪಾಯಿಂಟ್‌ಗಳು ಸಕ್ರಿಯಗೊಂಡು, ಮಾಂಸಖಂಡ ಹಾಗೂ ನರಗಳನ್ನು ಉತ್ತೇಜಿಸಿ ದೇಹದ ಎಲ್ಲಾ ಅಂಗಾಂಗಗಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ಸಂಚಾರವಾಗಲು ನೆರವಾಗುತ್ತದೆ.
ಬೆನ್ನು ನೋವು, ಕಾಲುಸೆಳೆತ, ಪಾದ ನೋವು, ಕುತ್ತಿಗೆ ನೋವು, ಭುಜ ನೋವು, ನಿದ್ರಾಹೀನತೆ, ಹಿಂಬಡಿ ನೋವು, ಥೈರಾಯ್ಡ್, ವೆರಿಕೇಸ್ ವೇನ್ಸ್, ಬೊಜ್ಜು ನಿವಾರಣೆ, ಊತ, ಸಂಧಿವಾತ, ಪಾರ್ಶ್ವವಾಯು, ಪಾರ್ಕಿನ್ಸನ್, ಸೋರಿಯಾಸಿಸ್, ಅಧಿಕ ರಕ್ತದೊತ್ತಡ, ಸರ್ವಿಕಲ್, ಸಕ್ಕರೆ ಕಾಯಿಲೆ ಮತ್ತು ಅದರಿಂದ ಬರುವ ಪಾದದ ಉರಿ ಹಾಗೂ ಮಾಂಸಖಂಡಗಳ ಸೆಳೆತ ಸೇರಿದಂತೆ ರಕ್ತಸಂಚಾರ ಸಂಬಂಧಿತ 120ಕ್ಕೂ ಹೆಚ್ಚು ಕಾಯಿಲೆಗಳಿಗೆ ಈ ಥೆರಪಿ ಉಪಯುಕ್ತವಾಗಿದೆ. ಸಾರ್ವಜನಿಕರು ಪ್ರತಿದಿನ ಅರ್ಧ ಗಂಟೆ ಭೇಟಿ ನೀಡಿ ಈ ಉಚಿತ ಆರೋಗ್ಯ ಸೇವೆಯ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ.
ನೊಂದಾವಣಿ ಶುಲ್ಕ… ರೂ 200/ಒಮ್ಮೆ ಮಾತ್ರ.
ಹೆಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8073761734 ಅನ್ನು ಸಂಪರ್ಕಿಸಬಹುದು.



Related posts

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ), ಮುಂಬೈ: ಜೂನ್ 21ರಂದು ಯೋಗ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ನಾಯ್ಗಾಂವ್ – ವಿರಾರ್ ಶಾಖೆಜು. 28ಕ್ಕೆ “ಪ್ರಸ್ತುತ ಶಿಕ್ಷಣ ವ್ಯವಸ್ಥೆ” ಬಗ್ಗೆ ವಿಚಾರ ಸಂಕಿರಣ

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಅಗಸ್ಟ್ 15 ರಂದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ

Mumbai News Desk

ಡಿ. 19ರಂದು ದಹಿಸರ್‌ನಲ್ಲಿ 19ನೇ ವಾರ್ಷಿಕ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk

ಡಿ. 29. ಕನಕದಾಸ ಜಯಂತಿ, ಕುವೆಂಪು ಜಯಂತಿ ಗೌರವಾರ್ಥ,ಕರ್ನಾಟಕ ರಾಜ್ಯೋತ್ಸವ ಸಂಭ್ರಮ – ಕರುನಾಡ ಡಿಂಡಿಮ – 2024.

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸಮಿತಿಯ ವತಿಯಿಂದ ಪೆ. 2 ರಂದು ಅರಿಶಿಣ ಕುಂಕುಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk