
ವಿಶ್ವ ದೇವಾಡಿಗ ಮಹಾಮಂಡಳದ ಆಶ್ರಯದಲ್ಲಿ ದಿನಾಂಕ :20-12-2026 ರಂದು ಉಡುಪಿಯ ಚಿತ್ಪಾಡಿ ಬಯಲು ರಂಗವೇದಿಕೆಯಲ್ಲಿ ನಡೆಯಲಿರುವ ವಿಶ್ವ ದೇವಾಡಿಗ ಮಹಾ ಅಧಿವೇಶನದ ಪೂರ್ವಬಾವಿ ಸಭೆ ಭಟ್ಕಳ ಸಂಘದ ವ್ಯಾಪಿಯ ಪೂರ್ವಭಾವಿ ಸಭೆಯು ಭಟ್ಕಳದ ಖಾಸಗಿಸಭಾಂಗಣದಲ್ಲಿ ಭಟ್ಕಳ ದೇವಾಡಿಗ ಸಂಘದ ಅಧ್ಯಕ್ಷ ಲಕ್ಷ್ಮಣ ದೇವಾಡಿಗರ ಅಧ್ಯಕ್ಷತೆ ಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾದ ವಿಶ್ವ ಮಹಾಮಂಡಳದ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್ ರವರು ಭಟ್ಕಳ ಊರಿನ ಹಾಗೂ ತಮ್ಮ ನಿಕಟ ಸಂಪರ್ಕದ ಬಗ್ಗೆ ವಿವರಿಸುತ್ತಾ ಅಧಿವೇಶನದ ಉದ್ದೇಶ, ಅವಶ್ಯಕತೆಯನ್ನು ವಿವರಿಸಿದರು.

ಅಧ್ಯಕ್ಷರಾದ ಧರ್ಮಪಾಲ್ ಯು ದೇವಾಡಿಗ ಮಾತನಾಡುತ್ತಾ,ನಮ್ಮ ಬೇಡಿಕೆಗಳು ಸರಕಾರದ ಮಟ್ಟಕ್ಕೆ ಮುಟ್ಟಲು ಈ ಮಹಾ ಅಧಿವೇಶನ ಅಗತ್ಯವೆಂದು
ವಿವರಿಸಿದರು ತನ್ನನ್ನು ಅಭಿನಂದಿಸಿದ ಬಗ್ಗೆ ಕೃತಜ್ಞತೆ ಸಲ್ಲಿಸಿದರು .ಮುಂಬೈ ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗ, ಮಹಾ ಮಂಡಳದ ಉಪಾಧ್ಯಕ್ಷ ನಾಗರಾಜ್ ಪಡುಕೋಣೆ, ಪ್ರದಾನ ಕಾರ್ಯದರ್ಶಿ ಗಣೇಶ್ ಅಂಬಲಪಾಡಿ, ಕಾರ್ಯದರ್ಶಿ
ಯಾದವ ದೇವಾಡಿಗ, ಉಡುಪಿ ಸಂಘದ ಅಧ್ಯಕ್ಷ ರತ್ನಾಕರ್ ಜಿ. ಎಸ್. ಸಮಯೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಘಟನಾ ಕಾರ್ಯದರ್ಶಿ ಜನಾರ್ದನ ಪಡುಪಾಂಬುರು, ಜನಾರ್ದನ ಉಪ್ಪುಂದ, ಚೆನ್ನಪ್ಪ ಮೊಯಿಲಿ, ಜೊತೆ ಕಾರ್ಯದರ್ಶಿ ರಾಜು ದೇವಾಡಿಗ ಕುಂದಾಪುರ, ಉಪಸ್ಥಿತರಿದ್ದರು.





