35 C
Mumbai
April 25, 2026
Mumbai News Kannada
ಸುದ್ದಿ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ :ಸ್ವಾಗತ ಗೋಪುರ(ಮಹಾದ್ವಾರ)ದ  ಮತ್ತೆ ತಮ್ಮದೇ ಹೆಸರಲ್ಲಿ‌ ನಿರ್ಮಿಸುವಂತೆ ಐಕಳ ಹರೀಶ್ ಶೆಟ್ಟಿಯವರಿಂದ ದೇವಸ್ಥಾನದ ಆಡಳಿತ ಮಂಡಳಿಗೆ  ಮನವಿ.





  ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ‌ ಅಭಿವೃದ್ಧಿ ಕಾರ್ಯಗಳು‌ ನಡೆಯಲಿದ್ದು ಹೆದ್ದಾರಿ ಅಗಲೀಕರಣ ಸಂದರ್ಭ ಐಕಳ‌ ಹರೀಶ್ ಶೆಟ್ಟಿಯವರು ತಮ್ಮ ಹೆತ್ತವರು ಹಾಗೂ ಕುಟುಂಬಿಕರ ನೆನಪಿಗೆ 1999 ರಲ್ಲಿ‌ ನಿರ್ಮಿಸಿದ್ದ ಸ್ವಾಗತ ಗೋಪುರ(ಮಹಾದ್ವಾರ)ದ ಅಸ್ತಿತ್ವ ಅತಂತ್ರದಲ್ಲಿದ್ದು‌ ಅದನ್ನು ಮತ್ತೆ ತಮ್ಮದೇ ಹೆಸರಲ್ಲಿ‌ ನಿರ್ಮಿಸುವಂತೆ ಐಕಳ ಹರೀಶ್ ಶೆಟ್ಟಿಯವರು ದೇವಳದ ಅನುವಂಶಿಕ ಮೊಕ್ತೇಸರರಾದ ಮುಲ್ಕಿ ಸೀಮೆಯ ಅರಸರೂ‌ ಆದ ದುಗ್ಗಣ್ಣ ಸಾವಂತರಿಗೆ ಮತ್ತು ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿಯವರಿಗೆ
ಮನವಿ ಸಲ್ಲಿಸಿದರು.

    ಈ ಹಿಂದೆ 1999 ರಲ್ಲಿ ಈ ಸ್ವಾಗತ ಗೋಪುರವನ್ನು ತನ್ನ ಹೆತ್ತವರು,ಸಹೋದರರು ಹಾಗೂ ಮನೆಯವರ ಹೆಸರಲ್ಲಿ ನಿರ್ಮಿಸಲಾಗಿದ್ದು ಇದೀಗ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಹೆದ್ದಾರಿ ಅಗಲೀಕರಣದ ಕಾರಣದಿಂದ ತೆಗೆಯಲಾಗುತ್ತಿದ್ದು ಭಾವನಾತ್ಮಕ ಸ್ಪರ್ಶ ಇರುವ ಈ ಗೋಪುರವನ್ನು ಮತ್ತೆ ಅದೇ ಹೆಸರಲ್ಲಿ‌ ನಿರ್ಮಿಸುವರೇ ದೇವಳ ಸಹಕರಿಸಬೇಕೆಂದು ಐಕಳ‌ ಹರೀಶ್ ಶೆಟ್ಟಿ ಆಡಳಿತ ವರ್ಗವನ್ನು ವಿನಂತಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ವೇತ ಪಳ್ಳಿ ಮತ್ತು ದುಗ್ಗಣ್ಣ ಸಾವಂತರು “25 ವರ್ಷದ ಹಿಂದೆ ಸ್ವಾಗತ ಗೋಪುರ ನಿರ್ಮಿಸಿದ್ದು ಅಭಿನಂದನೀಯ, ದೇವಳದ ಸಮಗ್ರ ಅಭಿವೃದ್ದಿಗೆ ರೂಪುರೇಷೆ ನಡೆಯುತ್ತಿದ್ದು, ಸ್ವಾಗತ ಗೋಪುರ ನಿರಗಮಾಣದ ಬಗ್ಗೆ  ಅಭಿವೃದ್ದಿ ಸಮಿತಿ ಜೊತೆ ಚರ್ಚಿಸಿ ತಿಳಿಸಲಾಗುವುದು” ಎಂದರು. 
  ಈ ಸಂದರ್ಭ ಹರೀಶ್ ಶೆಟ್ಟಿಯವರ ಸಹೋದರ ಗುಣಪಾಲ ಶೆಟ್ಟಿ ಐಕಳ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಸಂಚಾಲಕರಾದ ಕೊಲ್ಲಾಡಿ‌ ಬಾಲಕೃಷ್ಣ ರೈ,ಮುಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ,
 ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸಾಯಿನಾಥ ಶೆಟ್ಟಿ, ಜತೆ ಕಾರ್ಯದರ್ಶಿ ಶರತ್ ಶೆಟ್ಟಿ, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ, ಮಾಜಿ ಅಧ್ಯಕ್ಷ ಪುರುಶೋತ್ತಮ‌ ಶೆಟ್ಟಿ,  ಕಾರ್ಯಕಾರಿ‌ ಸಮಿತಿಯ ಸದಸ್ಯ ಸತೀಶ್ಚಂದ್ರ ಹೆಗ್ಡೆ,ನಿಶಾಂತ್ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ರೋಹಿಣಿ‌ ಶೆಟ್ಟಿ,ಶಮೀನ ಜಿ.ಆಳ್ವ, ಭಾರತಿ‌ ರೈ,ಯುವ ವಿಭಾಗದ ದಾಮೋದರ ಶೆಟ್ಟಿ ,ಪುಷ್ಪರಾಜ ಚೌಟ, ಮತ್ತು ಐಕಳ ಹರೀಶ್ ಶೆಟ್ಟಿಯವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.



Related posts

2018 ರ ರೆಮೋ ಡಿಸೋಜಾ ಸುಲಿಗೆ ಪ್ರಕರಣದ ಗ್ಯಾಂಗ್ ಸ್ಟರ್ ರವಿ ಪೂಜಾರಿ ಬಂಧನ

Mumbai News Desk

ಭಿವಂಡಿ:ಹಿರಿಯ ಹೋಟೆಲ್ ಉದ್ಯಮಿ ಸಮಾಜ ಸೇವಕ ದೇವು ಎಸ್ ಪೂಜಾರಿ ನಿಧನ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮತ್ತು ಇತರ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಪಚ್ಚನಾಡಿ ಹಿಂದೂ ರುದ್ರ ಭೂಮಿಯಲ್ಲಿ ಸ್ವಚ್ಛತಾ ಅಭಿಯಾನ.

Mumbai News Desk

ಮಂಗಳೂರಿನಲ್ಲಿ ಉದ್ಯಮಿ, ಶ್ರೀಮಂತರಿಗೆ 200 ಕೋಟಿಗೂ ಅಧಿಕ ವಂಚಿಸಿದ ಜಪ್ಪಿನಮೊಗರು ನಿವಾಸಿ ರೋಹನ್ ಸಲ್ಡಾನ ಅರೆಸ್ಟ್

Mumbai News Desk

ಉಡುಪಿ : ಕನಕನ ಕಿಂಡಿ ಸ್ವರ್ಣ ಕವಚ ಉದ್ಘಾಟನೆ ವಿವಾದ : ಕಡೆಗಣನೆ ಆರೋಪಗಳನ್ನು ತಳ್ಳಿ ಹಾಕಿದ ಪ್ರಮೋದ್ ಮಧ್ವರಾಜ್

Mumbai News Desk

ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ ಚಂಡಮಾರುತ; ಭಾರಿ ಮಳೆ, ಹಲವೆಡೆ ಭೂಕುಸಿತ,

Mumbai News Desk