31.4 C
Mumbai
June 10, 2026
Mumbai News Kannada
ಸುದ್ದಿ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ :ಸ್ವಾಗತ ಗೋಪುರ(ಮಹಾದ್ವಾರ)ದ  ಮತ್ತೆ ತಮ್ಮದೇ ಹೆಸರಲ್ಲಿ‌ ನಿರ್ಮಿಸುವಂತೆ ಐಕಳ ಹರೀಶ್ ಶೆಟ್ಟಿಯವರಿಂದ ದೇವಸ್ಥಾನದ ಆಡಳಿತ ಮಂಡಳಿಗೆ  ಮನವಿ.





  ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ‌ ಅಭಿವೃದ್ಧಿ ಕಾರ್ಯಗಳು‌ ನಡೆಯಲಿದ್ದು ಹೆದ್ದಾರಿ ಅಗಲೀಕರಣ ಸಂದರ್ಭ ಐಕಳ‌ ಹರೀಶ್ ಶೆಟ್ಟಿಯವರು ತಮ್ಮ ಹೆತ್ತವರು ಹಾಗೂ ಕುಟುಂಬಿಕರ ನೆನಪಿಗೆ 1999 ರಲ್ಲಿ‌ ನಿರ್ಮಿಸಿದ್ದ ಸ್ವಾಗತ ಗೋಪುರ(ಮಹಾದ್ವಾರ)ದ ಅಸ್ತಿತ್ವ ಅತಂತ್ರದಲ್ಲಿದ್ದು‌ ಅದನ್ನು ಮತ್ತೆ ತಮ್ಮದೇ ಹೆಸರಲ್ಲಿ‌ ನಿರ್ಮಿಸುವಂತೆ ಐಕಳ ಹರೀಶ್ ಶೆಟ್ಟಿಯವರು ದೇವಳದ ಅನುವಂಶಿಕ ಮೊಕ್ತೇಸರರಾದ ಮುಲ್ಕಿ ಸೀಮೆಯ ಅರಸರೂ‌ ಆದ ದುಗ್ಗಣ್ಣ ಸಾವಂತರಿಗೆ ಮತ್ತು ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿಯವರಿಗೆ
ಮನವಿ ಸಲ್ಲಿಸಿದರು.

    ಈ ಹಿಂದೆ 1999 ರಲ್ಲಿ ಈ ಸ್ವಾಗತ ಗೋಪುರವನ್ನು ತನ್ನ ಹೆತ್ತವರು,ಸಹೋದರರು ಹಾಗೂ ಮನೆಯವರ ಹೆಸರಲ್ಲಿ ನಿರ್ಮಿಸಲಾಗಿದ್ದು ಇದೀಗ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಹೆದ್ದಾರಿ ಅಗಲೀಕರಣದ ಕಾರಣದಿಂದ ತೆಗೆಯಲಾಗುತ್ತಿದ್ದು ಭಾವನಾತ್ಮಕ ಸ್ಪರ್ಶ ಇರುವ ಈ ಗೋಪುರವನ್ನು ಮತ್ತೆ ಅದೇ ಹೆಸರಲ್ಲಿ‌ ನಿರ್ಮಿಸುವರೇ ದೇವಳ ಸಹಕರಿಸಬೇಕೆಂದು ಐಕಳ‌ ಹರೀಶ್ ಶೆಟ್ಟಿ ಆಡಳಿತ ವರ್ಗವನ್ನು ವಿನಂತಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ವೇತ ಪಳ್ಳಿ ಮತ್ತು ದುಗ್ಗಣ್ಣ ಸಾವಂತರು “25 ವರ್ಷದ ಹಿಂದೆ ಸ್ವಾಗತ ಗೋಪುರ ನಿರ್ಮಿಸಿದ್ದು ಅಭಿನಂದನೀಯ, ದೇವಳದ ಸಮಗ್ರ ಅಭಿವೃದ್ದಿಗೆ ರೂಪುರೇಷೆ ನಡೆಯುತ್ತಿದ್ದು, ಸ್ವಾಗತ ಗೋಪುರ ನಿರಗಮಾಣದ ಬಗ್ಗೆ  ಅಭಿವೃದ್ದಿ ಸಮಿತಿ ಜೊತೆ ಚರ್ಚಿಸಿ ತಿಳಿಸಲಾಗುವುದು” ಎಂದರು. 
  ಈ ಸಂದರ್ಭ ಹರೀಶ್ ಶೆಟ್ಟಿಯವರ ಸಹೋದರ ಗುಣಪಾಲ ಶೆಟ್ಟಿ ಐಕಳ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಸಂಚಾಲಕರಾದ ಕೊಲ್ಲಾಡಿ‌ ಬಾಲಕೃಷ್ಣ ರೈ,ಮುಲ್ಕಿ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ,
 ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸಾಯಿನಾಥ ಶೆಟ್ಟಿ, ಜತೆ ಕಾರ್ಯದರ್ಶಿ ಶರತ್ ಶೆಟ್ಟಿ, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ, ಮಾಜಿ ಅಧ್ಯಕ್ಷ ಪುರುಶೋತ್ತಮ‌ ಶೆಟ್ಟಿ,  ಕಾರ್ಯಕಾರಿ‌ ಸಮಿತಿಯ ಸದಸ್ಯ ಸತೀಶ್ಚಂದ್ರ ಹೆಗ್ಡೆ,ನಿಶಾಂತ್ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ರೋಹಿಣಿ‌ ಶೆಟ್ಟಿ,ಶಮೀನ ಜಿ.ಆಳ್ವ, ಭಾರತಿ‌ ರೈ,ಯುವ ವಿಭಾಗದ ದಾಮೋದರ ಶೆಟ್ಟಿ ,ಪುಷ್ಪರಾಜ ಚೌಟ, ಮತ್ತು ಐಕಳ ಹರೀಶ್ ಶೆಟ್ಟಿಯವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.



Related posts

ಮುಂಬೈ: ದಿಶಾ ಸಾಲ್ಯಾನ್ ಸಾವು ಪ್ರಕರಣ- ಆದಿತ್ಯ ಠಾಕ್ರೆ, ಬಾಲಿವುಡ್ ನಟರು, ಮಾಜಿ ಪೊಲೀಸ್ ಅಧಿಕಾರಿ ವಿರುದ್ಧ ಹೊಸ ದೂರು

Mumbai News Desk

ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ) ತೋಕೂರು ವತಿಯಿಂದ ಗಣರಾಜ್ಯೋತ್ಸವ ಆಚರಣೆ

Mumbai News Desk

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಜವಾಬ್ದಾರಿ: ಮಹಾತ್ಮ ಜ್ಯೋತಿರಾವ್ ಫುಲೆ 200ನೇ ಜನ್ಮ ದಿನಾಚರಣೆಯ ಉನ್ನತ ಮಟ್ಟದ ಸಮಿತಿಗೆ ನಾಮನಿರ್ದೇಶನ

Mumbai News Desk

ಭಾರತದ 15ನೇ ಉಪರಾಷ್ಟ್ರಪತಿಯಾಗಿ ರಾಧಾಕೃಷ್ಣನ್ ಆಯ್ಕೆ

Mumbai News Desk

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದ) ಅಧ್ಯಕ್ಷ ವೈ. ಸುಕುಮಾರ್, ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

Mumbai News Desk

ಕುಕ್ಕಳ ಶ್ರೇಯಸ್ ಪೂಜಾರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

Mumbai News Desk