ಜೋಗೇಶ್ವರಿ ಪೂರ್ವದ ಪ್ರೇಮ್ ನಗರ ಕ್ವಾರ್ಟರ್ಸ್ ಕಾಲನಿಯಲ್ಲಿ, ತುಳುಕನ್ನಡಿಗರಿಂದ ಸ್ಥಾಪಿಸಲ್ಪಟ್ಟು, ಆರಾಧಿಸಲ್ಪಡುತ್ತಿರುವ ಶ್ರೀ ಮಹಾಕಾಳಿ ಮಂದಿರದ ಪುನ: ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವದ 10ನೇ ವಾರ್ಷಿಕೋತ್ಸವದ ನಿಮಿತ್ತ ಆದರ್ಶ ಪೂಜೆಯು ಇದೇ ಬುಧವಾರ ಜು. 8 ರಂದು ವಿವಿಧ ಧಾರ್ಮಿಕ ಸೇವೆಗಳು ಹಾಗೂ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು.
ಅಂದು ಬೆಳಿಗ್ಗೆ 8-00 ರಿಂದ 9-00ರ ತನಕ ಪಂಚಾಮೃತ ಅಭಿಷೇಕ, ಸಂಜೆ 5-00 ರಿಂದ 9-30ರ ತನಕ ಭಜನೆ, ಶೃಂಗಾರ (ಹೂವಿನ) ಸೇವೆ, ಮಹಾ ಮಂಗಳಾರತಿ, ಆವೇಶ ಸೇವೆ, ತದನಂತರ ಮಹಾ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಲಿರುವುದು.
ಸರ್ವ ಭಗವತ್ಭಕ್ತರು ಅಂದಿನ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸಿ ಸಹಭಾಗಿಗಳಾಗಿದ್ದು, ಸಹಕರಿಸಿ, ಶ್ರೀ ಮಹಾಕಾಳಿ ಅಮ್ಮನ ತೀರ್ಥಪ್ರಸಾದ ಸ್ವೀಕರಿಸಿ, ಪುನೀತರಾಗಬೇಕಾಗಿ ಮಂದಿರದ ಆಡಳಿತ ಮತ್ತು ಕಾರ್ಯಕಾರಿ ಸಮಿತಿಯವರು ಹಾಗೂ ಸರ್ವ ಸದಸ್ಯರು ವಿನಂತಿಸಿಕೊಳ್ಳುತ್ತಿರುವರು.




