30.6 C
Mumbai
April 23, 2026
Mumbai News Kannada
ಪ್ರಕಟಣೆ

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಅ.17ಕ್ಕೆ 66ನೇ ಮಂಗಲೋತ್ಸವ.





ಶ್ರೀ ಸೀತಾರಾಮ ಭಜನಾ ಮಂದಿರ ಪಲಿಮಾರು ಹೊಸಗೈ, ಹೆಜಮಾಡಿ, ಇಲ್ಲಿ ಕಳೆದ 65 ವರ್ಷಗಳಿಂದ ಧರ್ಮಗ್ರಂಥದ ವಾಚನ ನಡೆಯುತ್ತಿದ್ದು, ಈ ವರ್ಷ ಜುಲೈ 16ಕ್ಕೆ ಕುಮಾರವ್ಯಾಸ ವಿರಚಿತ “ಮಹಾಭಾರತ ” ಎಂಬ ಪುಣ್ಯ ಕಥಾ ವಾಚನವು ಆರಂಭವಾಗಿತ್ತು.ಜಯ ದೇವಾಡಿಗ ಸುರತ್ಕಲ್ ಮತ್ತು ಪ್ರವಚನಕಾರರಾಗಿ ಭಾಸ್ಕರ್ ಕೆ ಪಡುಬಿದ್ರಿ, ಮನೋಹರ್ ಕುಂದರ್ ಎರ್ಮಾಳು ಇವರಿಂದ ವಾಚನ ಆರಂಭವಾಗಿತ್ತು.
ಇದೀಗ ಕಥಾ ವಾಚನದ ಮಂಗಲೋತ್ಸವವು ಆಗಸ್ಟ್ 17ರಂದು,ಶನಿವಾರ ಸಾಯಂಕಾಲ 8 ಗಂಟೆಗೆ ನೆರವೇರಲಿದೆ.
ಅ ಪ್ರಯುಕ್ತ ಭಕ್ತಾದಿಗಳು ಸಕಾಲದಲ್ಲಿ ಆಗಮಿಸಿ, ಶ್ರೀ ಸೀತಾರಾಮ ದೇವರ ಕೃಪೆಗೆ ಪಾತ್ರರಾಗಬೇಕೆಂದು ಫಲಿಮಾರು ಮೊಗವೀರ ಸಭಾ, ಫಲಿಮಾರು, ಫಲಿಮಾರು ಮೊಗವೀರ ಸಭಾ ಮುಂಬಯಿ, ಫಲಿಮಾರು ಮೊಗವೀರ ಮಹಿಳಾ ಮಂಡಳಿ ಫಲಿಮಾರು, ಶ್ರೀ ಸೀತಾರಾಮ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ವಿನಂತಿಸಿದ್ದಾರೆ.
ತಾ. 18.8.24ರಂದು ಸಂಜೆ 4.30ಗಂಟೆಗೆ ಶ್ರೀ ವಿನಾಯಕ ಯಕ್ಷಕಲಾ ತಂಡ ಕೆರೆಕಾಡು, ಮೂಲ್ಕಿ, ಇವರಿಂದ “ತುಳಸಿ ಜಲಂಧರ ” ಯಕ್ಷಗಾನ ಕಾರ್ಯಕ್ರಮ ಫಲಿಮಾರು ಮೊಗವೀರ ಮಹಿಳಾ ಮಂಡಳಿಯ ವತಿಯಿಂದ ಜರಗಲಿದೆ.
ವಿ ಸೂ : ಭಕ್ತಾದಿಗಳು ನೀಡುವ ಉದಾರ ಧನ ಸಹಾಯವನ್ನು ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಲಾಗುವುದು.



Related posts

ಮಾ. 22: ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Mumbai News Desk

ಡೊಂಬಿವಲಿ: ಶ್ರೀ ಜಗದಂಬಾ ಮಂದಿರದಲ್ಲಿ ಫೆ. 15ರಂದು ಮಹಾಶಿವರಾತ್ರಿ ಮಹೋತ್ಸವ; ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನೋತ್ಸವ

Mumbai News Desk

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಮಾರ್ಚ್ 8ರಂದು ಇತಿಹಾಸ ಪ್ರಸಿದ್ಧ ಗಂಗಾರತಿ ವೈಭವ

Mumbai News Desk

ವಜ್ರ ಮಹೋತ್ಸವದ ಸಂಭ್ರಮದಲ್ಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ,

Mumbai News Desk

ನಾಳೆ (ಮಾ.1) ಪನ್ವೇಲ್‌ನಲ್ಲಿ ‘ಕುಲಾಲ ಕ್ರೀಡೋತ್ಸವ – 2026’

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಮಲಾಡ್ ಸ್ಥಳೀಯ ಕಚೇರಿ ,ಜು 21 ರಂದು ಗುರುಪೂರ್ಣಿಮೆ, ಆಟಿಡೊಂಜಿ ದಿನ, ಕಾರ್ಯಕ್ರಮ.

Mumbai News Desk