ಮುಂಬಯಿ: ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಹಾಗೂ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಜಂಟಿ ಆಯೋಜನೆಯಲ್ಲಿ ನಡೆಯಬೇಕಿದ್ದ ಸರಣಿ ತಾಳಮದ್ದಲೆ “ಶ್ರೀ ರಾಮ ಕಥಾ ಹೃದಯಂ” ಹಾಗೂ ಸನ್ಮಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಜುಲೈ 5ರ ಭಾನುವಾರದಂದು ನಿಗದಿಯಾಗಿದ್ದ ಈ ಕಾರ್ಯಕ್ರಮವನ್ನು, ಮಹಾನಗರದಲ್ಲಿ ಮಳೆಯ ತೀವ್ರತೆ ಹೆಚ್ಚಾಗಿರುವ ಕಾರಣ ಮತ್ತು ಮುಂಬೈ ಪೊಲೀಸರು ‘ರೆಡ್ ಅಲರ್ಟ್’ ಘೋಷಿಸಿರುವುದರಿಂದ ಶ್ರೋತೃವರ್ಗದ ಸುರಕ್ಷತೆಯ ದೃಷ್ಟಿಯಿಂದ ಮುಂದೂಡಲು ನಿರ್ಧರಿಸಲಾಗಿದೆ.
ಈ ಪರಿಷ್ಕೃತ ಕಾರ್ಯಕ್ರಮವು ಜುಲೈ 11ರಂದು ಮಧ್ಯಾಹ್ನ 2:15 ಕ್ಕೆ ಸರಿಯಾಗಿ ವಿದ್ಯಾವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ. ಆದ್ದರಿಂದ ಗೌರವಾನ್ವಿತ ಕಲಾಭಿಮಾನಿ ಪ್ರೇಕ್ಷಕರು ದಿನಾಂಕ ಮತ್ತು ಸಮಯದ ಈ ಬದಲಾವಣೆಯನ್ನು ಗಮನಿಸಬೇಕಾಗಿ ಸಂಘಟಕರಾದ ವಾಸುದೇವ ಮಾರ್ನಾಡ್ ಹಾಗೂ ಸುರೇಶ್ ನಂದ್ರೊಳ್ಳಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




