August 20, 2026
Mumbai News Kannada
ಪ್ರಕಟಣೆ

ಕನ್ನಡ ಹಾಗೂ ಶಾಸ್ತ್ರೀಯ ಗಾಯನಕ್ಕೆ ವೇದಿಕೆ; ಮೈಸೂರು ಅಸೋಸಿಯೇಷನ್‌ನಿಂದ ಸಂಗೀತ ಸ್ಪರ್ಧೆ





ಮುಂಬಯಿ:
ಮುಂಬೈನ ಅತಿ ಹಳೆಯ ಹಾಗೂ ಪ್ರತಿಷ್ಠಿತ ಕನ್ನಡ ಸಂಸ್ಥೆಗಳಲ್ಲಿ ಒಂದಾದ “ಮೈಸೂರು ಅಸೋಸಿಯೇಷನ್’ ವತಿಯಿಂದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎರಡು ಪ್ರತ್ಯೇಕ ಸಂಗೀತ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

  1. ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆ – 2026

ಶಾಸ್ತ್ರೀಯ ಗಾಯನದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.ಆ, 23 ಬೆಳಿಗ್ಗೆ 10:00 ಗಂಟೆಯಿಂದ ಮೈಸೂರು ಅಸೋಸಿಯೇಷನ್ ಸಭಾಂಗಣ,393, ಭಾವುದಾಜಿ ರಸ್ತೆ, ಮಾಟುಂಗಾ (ಸೆಂಟ್ರಲ್), ಮುಂಬೈ –

೨. ಕನ್ನಡ ಗಾಯನ ಸ್ಪರ್ಧೆ – 2026

(ಜನಪದ ಗೀತೆಗಳು, ಭಾವಗೀತೆಗಳು ಹಾಗೂ ದೇವರನಾಮ)

ಕನ್ನಡದ ಹಾಡುಗಳನ್ನು ಮುಂಬಯಿಯ ವಿದ್ಯಾರ್ಥಿವೃಂದದಲ್ಲಿ ಜನಪ್ರಿಯಗೊಳಿಸುವ ಉದ್ದೇಶದಿಂದ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಕನ್ನಡಿಗರಷ್ಟೇ ಅಲ್ಲದೆ

ಯಾವುದೇ ವಿದ್ಯಾರ್ಥಿಯೂ ಭಾಗವಹಿಸಬಹುದು (ಆದರೆ ಹಾಡು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು).

ವಿಭಾಗಗಳು: ಜನಪದ ಗೀತೆಗಳು, ಭಾವಗೀತೆಗಳು, ದೇವರನಾಮ

ದಿನಾಂಕ: ಶನಿವಾರ, 29ನೇ ಆಗಸ್ಟ್ 2026

ಸಮಯ: ಸಾಯಂಕಾಲ 4:00 ಗಂಟೆಯಿಂದ

ಸ್ಥಳ: ಮೈಸೂರು ಅಸೋಸಿಯೇಷನ್ ಸಭಾಂಗಣ, ಮಾಟುಂಗಾ (ಸೆಂಟ್ರಲ್), ಮುಂಬೈ – 400019

ಆಕರ್ಷಕ ನಗದು ಬಹುಮಾನಗಳು!

ಎರಡೂ ಸ್ಪರ್ಧೆಗಳ ವಿವಿಧ ವಯಸ್ಸಿನ ವಿಭಾಗಗಳಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಆಕರ್ಷಕ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.

ವಿಶೇಷ ವಿನಂತಿ:

ಈ ಮಾಹಿತಿಯನ್ನು ಪ್ರಕಟಿಸುವ ಮೂಲಕ ಹೆಚ್ಚಿನ ಜನರಿಗೆ ತಲುಪಿಸಲು ಮತ್ತು ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೋತ್ಸಾಹಿಸಲು ಕೋರಲಾಗಿದೆ.

ಹೆಚ್ಚಿನ ವಿವರಗಳು, ನಿಯಮಗಳು ಹಾಗೂ ನೋಂದಣಿಗಾಗಿ ಕಚೇರಿಯನ್ನು ಸಂಪರ್ಕಿಸಿ:

📞 ದೂರವಾಣಿ: (022) 2403 7065

📱 ವಾಟ್ಸಾಪ್: +91 83697 88157

✉️ ಇಮೇಲ್: mysoreassociation.mumbai@gmail.com

⏰ ಕಚೇರಿ ವೇಳೆ: ಬೆಳಿಗ್ಗೆ 11:00 ರಿಂದ ಸಾಯಂಕಾಲ 7:00 ರವರೆಗೆ


Visit us at : www.mysoreassociation.in

Our Mailing Address is :
The Mysore Association, Bombay
393, Bhaudaji Road, Matunga
Mumbai – 400 019.
Tel. : 022 2403 7065 / 99209 66497
E-mail : mysoreassociation.mumbai@gmail.com



Related posts

ಪೌರಾಣಿಕ ವಾಚಕ ಸಮಿತಿ ಮುಂಬಯಿ : ಫೆ. 28ಕ್ಕೆ 50ನೇ ವಾರ್ಷಿಕ ಶನಿ ಮಹಾಪೂಜೆ, ಮಾ.1ರಂದು ಸುವರ್ಣ ಮಹೋತ್ಸವ ಆಚರಣೆ

Mumbai News Desk

ಡಿ. 8 ಗೋರೆಗಾಂವ್ ಪೂರ್ವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ವಜ್ರ ಮಹೋತ್ಸವ ಉದ್ಘಾಟನಾ ಸಮಾರಂಭದ, ಆಮಂತ್ರಣ ಪತ್ರಿಕೆ ಬಿಡುಗಡೆ, ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನೆಲ್ಲಿಕಾರು, ಮೂಡಬಿದೆರೆ ಶತಮಾನೋತ್ಸವದ ಸಂಭ್ರಮದಲ್ಲಿ ನಮ್ಮ ಶಾಲೆ :

Mumbai News Desk

ಎ. 14ರಂದು. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ ಥಾಣೆ ಇಲ್ಲಿ ಶ್ರೀ ಶನಿ ಗ್ರಂಥ ಪಾರಾಯಣ, ಶ್ರೀ ಸತ್ಯನಾರಾಯಣ ಮಹಾಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು.

Mumbai News Desk

ಡೋಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ ಆ ಆಗಸ್ಟ್ 17ರಂದು ‘ನಾಗರ ಪಂಚಮಿ ಮಹೋತ್ಸವ’

Mumbai News Desk

ಮಾ 8. ಮಲಾಡ್ ಕನ್ನಡ ಸಂಘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk