


ಭಾರತ್ ಬ್ಯಾಂಕ್ ಇದರ ಭಾಯಂದರ್ ಶಾಖಾ ಪ್ರಭಂದಕರಾದ ಪ್ರವೀಣ್ ಎಂ. ಬಂಗೇರ ರವರು 36 ವರ್ಷ 8 ತಿಂಗಳ ಸೇವೆಯಿಂದ ನ. 30ರಂದು ನಿವೃತ್ತರಾದರು.ಅವರನ್ನು ಗೌರವಿಸುವ ವಿದಾಯ ಕೂಟವು ಅದೇ ದಿನ ಹಿರಿಯ ಅಧಿಕಾರಿಗಳು ಉಪಸ್ಥಿತಿಯಲ್ಲಿ ಕೇಂದ್ರ ಕಚೇರಿಯಲ್ಲಿ ನಡೆಯಿತು. ಹಾಗೂ ಡಿ. 1ರಂದು ಭಾರತ್ ಬ್ಯಾಕಿನ ಭಾಯಂದರ್ ಶಾಖೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಖಾ ಮುಖ್ಯಸ್ಥೆ ನಮಿತಾ ಮಿಸ್ತ್ರಿ, ಉಪ ಶಾಖಾ ಮುಖ್ಯಸ್ಥರಾದ ಪ್ರಕಾಶ್ ಪೂಜಾರಿ, ಅಧಿಕಾರಿ ದೀಪಾ ಸಾಲ್ಯಾನ್, ಲೀಲಾಧರ್, ಯುಕ್ತಾ, ಶ್ವೇತಾ, ಸೂರ್ಯ, ಪ್ರಾಪ್ತಿ, ಸೂರಜ್, ವಿಜಯ, ಉಷಾ ಹಾಗೂ ಭಾರತ್ ಬ್ಯಾಂಕಿನ ನಿರ್ದೇಶಕ ನರೇಶ್ ಪೂಜಾರಿ, ಬಿಲ್ಲವರ ಅಸೋಸಿಯೇಷನ್ ಭಾಯಂದರ್ ಸ್ಥಳೀಯ ಕಚೇರಿಯ ಉಪಾಧ್ಯಕ್ಷ ಉದಯ ಎಮ್. ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.




