
ವಿದ್ಯಾ ಪ್ರಸಾರ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜುಲೈ 9ರಂದು ರೋಬೋಟಿಕ್ ಮತ್ತು ಇನ್ನೋವೇಶನ್ ಲ್ಯಾಬ್ ನಾ ಅದ್ದೂರಿ ಉದ್ಘಾಟನಾ ಸಮಾರಂಭ ವನ್ನು ಮುಖ್ಯ ಅತಿಥಿಯಾದ ಡಾಕ್ಟರ್ ಶಾರದಾ ಯು ಶೆಣೈ (ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ( NMAMIT) ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (AI&ML) ವಿಭಾಗದ ಮುಖ್ಯಸ್ಥ ರು) ಉದ್ಘಾಟಿಸಿ ತಮ್ಮ ಭಾಷಣದಲ್ಲಿ ಈ ನೂತನ ಪ್ರಯೋಗಾಲಯವು ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಮೂಡಿಸಲು ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಲು ಮತ್ತು ನಾವಿನ್ಯತೆಯ ಮೂಲಕ ಭವಿಷ್ಯದ ಸಂಶೋಧಕರನ್ನಾಗಿ ರೂಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.




ವಿದ್ಯಾ ಪ್ರಸಾರ ವಿದ್ಯಾ ಮಂದಿರದ ಶಾಲಾ ಅಧ್ಯಕ್ಷರಾದ ಶ್ರೀ ರವೀಂದ್ರ ಪುತ್ರನ್ ಅವರು ಮಾತನಾಡಿ ಈ ಲ್ಯಾಬ್ ಮೂಲಕ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳ ಅನ್ವೇಷಣೆ ಪ್ರಾಯೋಗಿಕ ಕಲಿಕೆ ಸೃಜನಾತ್ಮಕ ವಿನ್ಯಾಸ ಮತ್ತು ಹೊಸ ಅವಿಷ್ಕಾರಗಳನ್ನು ಸೃಷ್ಟಿಸುವ ಅವಕಾಶ ಪಡೆಯಲಿದ್ದಾರೆ ಎಂದು ಹೇಳಿದರು ಶಾಲಾ ಮುಖ್ಯೋಪಾಧ್ಯಾಯರಾದಂತಹ ಎಸ್ ರಾಜೇಶ್ವರಿ ಕರ್ಕೇರ ಅವರು ಬಂದಂತ ಅತಿಥಿಗಳನ್ನು ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಎಚ್ ಕೆ ವಿ ಪಿ ಫೌಂಡೇಶನ್ನ ಗೌರವ ಅಧ್ಯಕ್ಷರಾದಂತಹ ವಿನೋದ್ ಕೋಟ್ಯಾನ್ ಮತ್ತು ಅಧ್ಯಕ್ಷರಾದಂತಹ ದಯಾನಂದ ಹೆಜಮಾಡಿ ಶಿಕ್ಷಕ ವೃಂದ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು ನಮೃತಾ ರವರು ಕಾರ್ಯಕ್ರಮ ನಿರೂಪಿಸಿದರು ಶ್ರುತಿ ವಂದನಾರ್ಪಣೆ ನೆರವೇರಿಸಿದರು




