
ಶ್ರೀ ಮಹಾವಿಷ್ಣು ಮಂದಿರ , ಸಂಚಾಲಕರು ಶ್ರೀ ಮುಂಬ್ರಾ ಮಿತ್ರ ಭಜನಾ ಮಂಡಳಿ ಇದರ 50ನೇ ವರ್ಷದ ವಾರ್ಷಿಕೋತ್ಸವದ – ಸುವರ್ಣ ಸಂಭ್ರಮ ಉದ್ಘಾಟನೆ ಹಾಗು ಸರಣಿ ಕಾರ್ಯಕ್ರಮಕ್ಕೆ ಚಾಲನೆ ಮಂದಿರದಲ್ಲಿ ಜುಲೈ 11 ರ ಶನಿವಾರ ಅಪರಾಹ್ನ ಗಂಟೆ 2 ರಿಂದ 5 ರ ತನಕ ಭಜನಾ ಕಾರ್ಯಕ್ರಮ ಹಾಗು 5.30 ಕ್ಕೆ ಸರಿಯಾಗಿ ಧಾರ್ಮಿಕ ಕಾರ್ಯಕ್ರಮವ ಅಂಗವಾಗಿ ಸುವರ್ಣ ಸಂಭ್ರಮದ ಉದ್ಘಾಟನೆ ಜರಗಲಿರುವುದು.. ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಡಾ.ಇಂದ್ರಾಳಿ ದಿವಾಕರ್ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ಸುಕುಮಾರ್ ಶೆಟ್ಟಿ, ಆನಂದ್ ಶೆಟ್ಟಿ, ಪ್ರಭಾಕರ್ ಶೆಟ್ಟಿ, ರವೀಂದ್ರ ಶೆಟ್ಟಿ , ರವಿ ಸನಿಲ್, ರಾಜೀವ್ ಭಂಡಾರಿ, ಹರೀಶ್ ಶೆಟ್ಟಿ, ಯದುವೀರ್ ಪುತ್ರನ್ , ಚಂದ್ರಹಾಸ್ ಪಾಲನ್, ರವಿ ಪೂಜಾರಿ, ಲಕ್ಷ್ಮಣ್ ಪೂಜಾರಿ , ವಸಂತ್ ಸುವರ್ಣ, ತಾರಾನಾಥ್ ಅಮೀನ್, ದೇವದಾಸ್ ಕುಲಾಲ್ , ರತನ್ ಪೂಜಾರಿ ಉಪಸ್ಥಿತಿಯೊಂದಿಗೆ, ಮಂದಿರದ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಸುವರ್ಣ , ಗೌರವಾಧ್ಯಕ್ಷರಾದ ಶ್ರೀ ನಿತಿನ್ ಪ್ರಕಾಶ್ ಪುತ್ರನ್ , ಉಪಾಧ್ಯಕ್ಷರಾದ ಅರವಿಂದ್ ಪದ್ಮಶಾಲಿ , ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಕಾರ್ಯದರ್ಶಿ ಸಚಿನ್ ಪೂಜಾರಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಸವಿತಾ ಸಾಲಿಯಾನ್, ಮಂದಿರದ ಪ್ರದಾನ ಅರ್ಚಕರಾದ ಹರೀಶ್ ಪದ್ಮಶಾಲಿ ನೆರವೇರಿಸಲಿರುವರು.
ಸುವರ್ಣ ಸಂಭ್ರಮದ ಉದ್ಘಾಟನಾ ಹಾಗು ಸರಣಿ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು , ಸದಸ್ಯರುಗಳು ದಾನಿಗಳು ಬಂದು ಯಶಸ್ವಿ ಮಾಡಿ ಕೊಡಬೇಕಾಗಿ ಮಂದಿರದ ಕಾರ್ಯಕಾರಿ ಸಮಿತಿಯ ಸದಸ್ಯರು, ಭೂವಾಜಿಗಳು, ಮಹಿಳಾ ವಿಭಾಗ, ಪೂಜಾ ಸಮಿತಿ, ಅರ್ಚಕ ವೃಂದ ಹಾಗೂ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




