September 6, 2026
Mumbai News Kannada
ಪ್ರಕಟಣೆ

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ





   ✒️ ಸುದ್ದಿ ವಿವರ :    ಪಿ.ಆರ್.ರವಿಶಂಕರ್ 8483980035

ಬೊಯಿಸರ್ ಪಶ್ಚಿಮದಲ್ಲಿನ ಸಿಡ್ಕೋ ವಲಯದಲ್ಲಿನ (ರೈಲ್ವೇ ಸ್ಟೇಷನ್ ಚಿತ್ರಾಲಯ ರಸ್ತೆ) ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಇದೇ ಬರುವ  ತಾ.18 ನೆಯ ಬುಧವಾರ 2024 ರಂದು ಸಂಜೆ  ಶ್ರೀ ಗಣೇಶ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಪೂಜೆಯು ವಿದ್ಯುಕ್ತವಾಗಿ ಜರಗಲಿದೆ.

    ಸಂಜೆ 6 ಗಂಟೆಯಿಂದ 8 ರ  ತನಕ ಶ್ರೀ ಜಯಶೀಲ ಗುರುಸ್ವಾಮಿಯವರ  ಉಪಸ್ಥಿತಿಯಲ್ಲಿ ಮೀರಾ ರೋಡ್ ನ ಸುಪ್ರಸಿದ್ಧ ಲಕ್ಶ್ಮೀನಾರಾಯಣ ಭಜನಾ ಮಂಡಲಿಯವರಿಂದ ಭಕ್ತಿ ಭಜನಾ ಕಾರ್ಯಕ್ರಮವಿದೆ.   8 ರಿಂದ 8.30 ರ ತನಕ ಮಹಾ ಮಂಗಳಾರತಿ ಹಾಗೂ ತೀರ್ಥಪ್ರಸಾದ ,  8.30 ರಿಂದ 8.45 ರ ತನಕ ಹರಿವರಾಸನಮ್

ಜರಗಲಿದ್ದು ಬಳಿಕ ಪ್ರಸಾದ ರೂಪದಲ್ಲಿ ಅನ್ನದಾನ ಜರಗಲಿದೆ.

   ಸರ್ವ ಭಕ್ತಾದಿಗಳ ಜೀವನದಲ್ಲಿ ಉತ್ತಮ ಆರೋಗ್ಯ , ಸಂತಸ ಹಾಗೂ ಸುಭಿಕ್ಷತೆಯ ಪ್ರಾರ್ಥನೆಗಳೊಂದಿಗೆ ಶ್ರೀ ಗಣೇಶ ಅಯ್ಯಪ್ಪ ಮಂದಿರದ ದಿವ್ಯ ಸನ್ನಿಧಿಯಲ್ಲಿ ಜರಗುವ ಈ ಪವಿತ್ರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ವ ಭಕ್ತಾಭಿಮಾನಿಗಳು ಕುಟುಂಬ ಸಮೇತ ಭಾಗವಹಿಸಿ ಕೃಪಾನುಗ್ರಹಿತರಾಗಬೇಕಾಗಿ ಆಯೋಜಕರಾದ ದಯಾನಂದ  ಶೆಟ್ಟಿ ಹಾಗೂ ಸಂತೋಷ ಸ್ವಾಮಿ ( ತುಂಗಾ ಹಾಸ್ಪಿಟಲ್ಸ್) ಇವರು ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.

ಸುದ್ದಿ ವಿವರ : ಪಿ.ಆರ್.ರವಿಶಂಕರ್



Related posts

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾರೋಡ್, ನ.27 ರಂದು ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಉಳ್ಳಾಲದಲ್ಲಿ ಅದ್ದೂರಿ ಗಾಣಿಗ ಭವನ ಲೋಕಾರ್ಪಣೆ: ಮೇ 10ರಂದು ಸಮುದಾಯದ ಐತಿಹಾಸಿಕ ಕ್ಷಣ

Mumbai News Desk

ಥಾಣೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ  ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ, ಸತ್ಸಂಗ.

Mumbai News Desk

ಶ್ರೀ ಚಕ್ರಪೀಠ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ

Mumbai News Desk

ಸೆ. 22 ರಿಂದ ಅ. 2 ರ ವರೆಗೆ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ 2025

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಇದರ 48 ನೇ  ವಾರ್ಷಿಕ ಸತ್ಯನಾರಾಯಣ ಮಹಾಪೂಜೆ ಹಾಗೂ ಸಾಮೂಹಿಕ ಶನಿ ಪೂಜೆ.

Mumbai News Desk