30.5 C
Mumbai
June 8, 2026
Mumbai News Kannada
ಸುದ್ದಿ

ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ಆಕಾಶ್ : ಲಿಯೋ ಕ್ಲಬ್ ಮಂಗಳಾದೇವಿ ವತಿಯಿಂದ ಸನ್ಮಾನ





ಮಂಗಳೂರು: ಎಳೆಯ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ಗಾಯಕ, ಸಂಗೀತ ಸಂಯೋಜಕ ಮತ್ತು ವಿಡಿಯೋ ನಿರ್ದೇಶಕ ಮಂಗಳೂರಿನ ಅಜಿತ್ ಕುಮಾರ್ ಮತ್ತು ಅಂಜು ದಂಪತಿಯ ಪುತ್ರ ಆಕಾಶ್ ಅಜಿತ್ ಕುಮಾರ್ ಇವರನ್ನು ಲಿಯೋ ಕ್ಲಬ್ ಮಂಗಳಾದೇವಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಅವರ ಬಹುಮುಖ ಪ್ರತಿಭೆ, ಶ್ರಮ ಮತ್ತು ಕಲೆಗೆ ನೀಡಿರುವ ಅಮೂಲ್ಯ ಕೊಡುಗೆಗಾಗಿ ಈ ಗೌರವವನ್ನು ಅರ್ಪಿಸಲಾಯಿತು.

ಸಂಗೀತ ಕ್ಷೇತ್ರದಲ್ಲಿ ಅಪರೂಪದ ಪ್ರತಿಭೆ:
ಆಕಾಶ್ ತಮ್ಮ ಗಾಯನ ಶೈಲಿಯಿಂದ ಮಾತ್ರವಲ್ಲ, ಸಂಗೀತ ಸಂಯೋಜನೆ ಮತ್ತು ನಿರ್ದೇಶನದ ಮೂಲಕವೂ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರ ಸಂಗೀತ ಮತ್ತು ದೃಶ್ಯಕಲೆಯ ಸಂಯೋಜನೆ ವಿಶಿಷ್ಟವಾಗಿ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಅವರ ಸೃಜನಾತ್ಮಕ ದೃಷ್ಟಿಕೋನ, ಹೊಸತನ್ನು ಅನ್ವೇಷಿಸುವ ಮನೋಭಾವ, ಮತ್ತು ಶ್ರೇಷ್ಠತೆಗಾಗಿ ನಡೆಸಿದ ಪ್ರಯತ್ನ ಅವರನ್ನು ಬೇರೆಬೇರೆ ಮಟ್ಟದಲ್ಲಿ ಉನ್ನತಿಗೆ ಕೊಂಡೊಯ್ದಿದೆ. ಇತ್ತೀಚಿಗಷ್ಟೇ Tu Hi Hai ಎನ್ನುವಂತಹ ಹಿಂದಿ ಆಲ್ಬಮ್. ಸಾಂಗ್ ರಚಿಸಿ, ನಿರ್ದೇಶಿಸಿ ಇದೀಗ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಂಗೀತ ಅಪ್ಲಿಕೇಶನ್ ಗಳಲ್ಲಿ ಪದ್ಯ ಜನಮನ್ನಣೆ ಪಡೆದಿದೆ.

ಸನ್ಮಾನ ಸಮಾರಂಭ:
ಈ ವಿಶೇಷ ಸನ್ಮಾನ ಕಾರ್ಯಕ್ರಮದಲ್ಲಿ ಲಿಯೋ ಕ್ಲಬ್ ಅಧ್ಯಕ್ಷರಾದ ಅಭಿಲಾಶ ಆನಂದ್ , ಕಾರ್ಯದರ್ಶಿ ಶ್ರೀನಿಧಿ ಶೆಟ್ಟಿ, ಕೋಶಾಧಿಕಾರಿ ಸಮೀಕ್ಷಾ ಹರೀಶ್ , ಲಯನ್ಸ್ ಅಧ್ಯಕ್ಷರಾದ ಭಾರತೀ ಶೆಟ್ಟಿ, ಕಾರ್ಯದರ್ಶಿ ಮಾಲಿನಿ ವಸಂತ್, ಕೋಶಾಧಿಕಾರಿ ಸರೋಜ ರಾವ್ ಹಾಗೂ ಪ್ರಮುಖ ಅತಿಥಿಗಳು, ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದು, ಆಕಾಶ್ ಅವರ ಸಾಧನೆಯನ್ನು ಪ್ರಶಂಸಿಸಿದರು.

ಆಕಾಶ್ ಅವರ ಮುಂದಿನ ಯಾನ:
ಸಂಗೀತ ಮತ್ತು ದೃಶ್ಯಕಲೆಯ ಜಗತ್ತಿನಲ್ಲಿ ಹೊಸ ತಂತ್ರಜ್ಞಾನ, ವೈವಿಧ್ಯಮಯ ಶೈಲಿ ಹಾಗೂ ಶ್ರದ್ಧೆಯಿಂದ ದುಡಿಯುವ ಆಕಾಶ್, ಮುಂದಿನ ದಿನಗಳಲ್ಲಿ ಇನ್ನಷ್ಟು ಸೃಜನಾತ್ಮಕ ಸಂಗೀತ ಮತ್ತು ದೃಶ್ಯಕೃತಿಗಳನ್ನು ಉಡುಗೊರೆಯಾಗಿಸುವ ನಿರೀಕ್ಷೆಯಿದೆ.

ಈ ಗೌರವ ಸಮಾರಂಭವು ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿ, ಕಲಾ ಕ್ಷೇತ್ರದಲ್ಲಿ ಹೊಸ ಸಾಧನೆಗಳತ್ತ ಹೆಜ್ಜೆ ಹಾಕಲು ಉತ್ತೇಜನ ನೀಡುವ ಪಥವನ್ನು ನಿರ್ಮಿಸಿದೆ.

-ಲಿಯೋ ಕ್ಲಬ್ ಮಂಗಳಾದೇವಿ, ಮಂಗಳೂರು



Related posts

ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪೋಷಕ   ಸದಸ್ಯರಾಗಿ ಗಣೇಶ್ ಶೆಟ್ಟಿ ತನಿಷ್ಕ, ಮತ್ತು ಹರೀಶ್ ಶೆಟ್ಟಿ ಪಡುಕುದ್ರು ಇವರು ಸೇರ್ಪಡೆ

Mumbai News Desk

ಲಾಲ್ ಕೃಷ್ಣ ಅಡ್ವಾಣಿಗೆ ಭಾರತ ರತ್ನ, ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅಭಿನಂದನೆ

Mumbai News Desk

ಬೆಂಗಳೂರು : ರಾಜ್ಯಪಾಲರಿಂದ ಗೀತಾಲಕ್ಷ್ಮಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ: ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಮನ್ನಣೆ

Mumbai News Desk

ಕೊಂಕಣ ರೈಲು ಮಾರ್ಗ ದ್ವಿಗುಣಗೊಳಿಸುವಂತೆ ಕೇಂದ್ರಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

Mumbai News Desk

ಕೃಷ್ಣನೂರು ಉಡುಪಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಲಕ್ಷಾಂತರ ಜನರಿಂದ ಹೂಮಳೆ ಸುರಿಸಿ ಸ್ವಾಗತ

Mumbai News Desk

ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ : 12 ಕೋಟಿ ರೂ.ಮೌಲ್ಯದ ಚಿನ್ನ, ನಗದು ಲೂಟಿ

Mumbai News Desk