32 C
Mumbai
March 7, 2026
Mumbai News Kannada
ಮುಂಬಯಿ

ಕಾಪು ಮೊಗವೀರ ಮಹಿಳಾ ಮಂಡಳಿ : ಹಳದಿ ಕುಂಕುಮ ಕಾರ್ಯಕ್ರಮ






ಮುಖ್ಯವಾಗಿ ಮುಂಬಯಿಯಲ್ಲಿ ನೆಲೆಸಿರುವ ಕಾಪು ಗ್ರಾಮದ ಮೊಗವೀರ ಮಹಿಳೆಯರನ್ನು ಸಂಘಟಿಸಿ ಅವರಿಂದ ಸಮಾಜಮುಖಿ ಸೇವೆಗಳನ್ನು ಮಾಡಿಸುವ ಸದುದ್ದೇಶದಿಂದ ಎರಡು ವರ್ಷಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿರುವ ಕಾಪು ಮೊಗವೀರ ಮಹಿಳಾ ಮಂಡಳಿ ಮುಂಬಯಿ ಇದರ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮವನ್ನು 19.1.2025 ರಂದು ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಜರಗಿಸಲಾಯ್ತು. ಯಶೋಧಾ ಕಾಂಚನ್‌ ಮತ್ತು ಶೋಭಾ ಕರ್ಕೇರರು ದೀಪ ಪ್ರಜ್ವಲಿಸಿ ಅಂದಿನ ಕಾರ್ಯಕ್ರಮದ ಶುಭಾರಂಭ ಮಾಡಿದರು. ವೀರಾವತಿ ಆನಂದ ಸುವರ್ಣರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಯಶೋಧಾ ಕಾಂಚನ್‌, ಶಾರದಾ ಶ್ರೀಯಾನ್‌, ಶೋಭಾ ಮೆಂಡನ್‌, ಹೇಮಾ ಸಾಲ್ಯಾನ್‌ ಮತ್ತು ಅಂಕಿತಾ ಬಂಗೇರರಿಂದ ಪ್ರಾರ್ಥನೆಯಾದ ಬಳಿಕ . ಮಂಡಳಿಯ ಕಾರ್ಯದರ್ಶಿ ಹೇಮಾ ಕೋಟ್ಯಾನ್‌ ಮುಖ್ಯ ಅತಿಥಿ ಹಾಗೂ ನೆರೆದ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಶಶಿ ಸಾಲ್ಯಾನ್‌ ಮುಖ್ಯ ಅತಿಥಿಯವರಿಗೆ ಫಲಪುಷ್ಟ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಚಂದ್ರಿಕಾ ಸಾಲ್ಯಾನ್‌ರು ಮಾತನಾಡುತ್ತಾ ಹಳದಿ ಕುಂಕುಮದ ಮಹತ್ವವನ್ನು ತಿಳಿ ಹೇಳಿದರು. ಆ ಬಳಿಕ ಮಾತನಾಡಿದ ಮಂಡಳಿಯ ಅಧ್ಯಕ್ಷೆ ತುಳಸಿ ಸದಾನಂದರು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜೊತೆಗೆ ಅದನ್ನು ನಮ್ಮ ಮುಂದಿನ ಜನಾಂಗಕ್ಕೂ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎನ್ನುತ್ತಾ ಮಹಿಳಾ ಮಂಡಳಿಯು ನಡೆಸುತ್ತಿರುವ ಎಲ್ಲಾ ಕಾರ್ಯಕ್ರಮಗಳಿಗೆ ಕಾಪು ಮೊಗವೀರ ಮಹಾ ಸಭಾ ಮುಂಬಯಿ ಇವರು ನೀಡುತ್ತಿರುವ ಸಹಕಾರವನ್ನು ಸ್ಮರಿಸಿದರು. ಅವರು ಮುಂದುವರಿದು ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದರೆ ನಮಗೆ ಯಾವ ಕೆಲಸವೂ ಅಸಾಧ್ಯವಲ್ಲ ಎಂದು ಮಂಡಳಿಗೆ ಹೆಚ್ಚು ಹೆಚ್ಚು ಮಂದಿಯನ್ನು ಸದಸ್ಯರನ್ನಾಗಿಸುವ ಮೂಲಕ ಮಂಡಳಿಯನ್ನು ಆರ್ಥಿಕವಾಗಿ ಬಲಪಡಿಸಬೇಕೆಂದು ಸದಸ್ಯೆಯರನ್ನು ಕೇಳಿಕೊಂಡರು. ಮಂಡಳಿಯ ಸದಸ್ಯೆಯರ ಪೈಕಿ ಕೆಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾ ಮಂಡಳಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದರು. ತದ ನಂತರ ಮುಖ್ಯ ಅತಿಥಿ ವೀರಾವತಿ ಆನಂದ ಸುವರ್ಣರು ಮಾತನಾಡುತ್ತಾ ಸದಸ್ಯೆಯರ ಉತ್ಸಾಹವನ್ನು ಕಂಡು ನನಗೆ ಅತೀವ ಆನಂದವಾಗುತ್ತಿದೆ. ಇದನ್ನು ನೋಡುವಾಗ ಕಾಪು ಮೊಗವೀರ ಮಹಿಳಾ ಮಂಡಳಿಗೆ ಉಜ್ವಲ ಭವಿಷ್ಯವಿದೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ . ಈ ಉತ್ಸಾಹ, ಹುಮ್ಮಸ್ಸು ಹೀಗೆಯೇ ಮುಂದುವರಿದು ಈ ಮಂಡಳಿಯು ಶುಕ್ಲ ಪಕ್ಷದ ಚಂದ್ರನಂತೆ ಬೆಳೆಯಲಿ ಎಂದು ಹಾರೈ.ಸಿದರು. ರೋಹಿಣಿ ಕರುಣಾಕರ್‌ ವಂದನಾರ್ಪಣೆಗೈದರು. ತುಳಸಿ ಸದಾನಂದ, ರೋಹಿಣಿ ಕರುಣಾಕರ್‌, ಹೇಮಾ ಕೋಟ್ಯಾನ್‌, ಪ್ರತಿಮಾ ಭಾಸ್ಕರ್, ತಾರಾ ಮೆಂಡನ್‌ ಮತ್ತು ಭಾಮಿನಿ ಮೆಂಡನ್‌ ವೇದಿಕೆಯಲ್ಲಿದ್ದರು. ಮಯೂರಿ ತೇಜಸ್‌ ಸಾಲ್ಯಾನ್‌, ಪ್ರಜ್ಞಾ ಶಮಿತ್‌ ಸಾಲ್ಯಾನ್‌ ಮತ್ತು ಬೃಂದಾ ಸಿದ್ಥಾರ್ಥ್‌ರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಉಷಾ ಕರ್ಕೇರ ಹಾಗೂ ರೋಹಿಣಿ ಕರುಣಾಕರ್‌ ಬಿಡಿಸಿದ್ದ ರಂಗೋಲಿ ಎಲ್ಲರ ಮನಸೂರೆಗೊಂಡಿತ್ತು.
ಆರಂಭದಲ್ಲಿ ಸದಸ್ಯೆಯರು ಹಳದಿ ಕುಂಕುಮವನ್ನು ಹಚ್ಚಿಕೊಳ್ಳುವ ಮೂಲಕ ಪರಸ್ಪರರನ್ನು ಅಭಿನಂದಿಸಿ ಸಂಭ್ರಮಿಸಿದರು. .ಈ ನಿಮಿತ್ತ ಎಲ್ಲರಿಗೂ ಆಕರ್ಷಕ ಉಡುಗೊರೆಗಳನ್ನು ನೀಡಲಾಯ್ತು.
ಆ ಬಳಿಕ ನಡೆದ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಮಂಡಳಿಯ ಎಲ್ಲಾ ಸದಸ್ಯೆಯರೂ ಭಾಗವಹಿಸಿದ್ದು, ಇದರಲ್ಲಿ ಪ್ರಫುಲ್ಲಾ ಸದಾನಂದ ಮತ್ತು ಭಾಮಿನಿ ಮೆಂಡನ್‌ ಬಹುಮಾನ ಗಳಿಸಿದರು. ಕೊನೆಯಲ್ಲಿ ಪ್ರಜ್ಞಾ ಸಾಲ್ಯಾನ್‌ರ ಪ್ರಾಯೋಜಕತ್ವದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ವರದಿ: ಸೋಮನಾಥ ಎಸ್‌.ಕರ್ಕೇರ, ಫೋನ್‌: 9819321186



Related posts

ಜ್ಞಾನ ವಿಕಾಸ ಮಂಡಳದ ಮೆಹ್ತಾ ಕಾಲೇಜಿನಲ್ಲಿ ಗೀತಾ ಜಯಂತಿ ಕಾರ್ಯಕ್ರಮ

Mumbai News Desk

ಮೀರಾ – ಭಾಯಂದರ್ ನಲ್ಲಿ ಶ್ರೀ ನಾರಾಯಣ ಗುರು ಭಜನಾ ಮಂಡಳಿ ಉದ್ಘಾಟನೆ. ಕಾರ್ಯಾಧ್ಯಕ್ಷರಾಗಿ ಉದಯ ಡಿ ಸುವರ್ಣ ಆಯ್ಕೆ

Mumbai News Desk

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ. ರಜತ ಮಹೋತ್ಸವದ ಕಾರ್ಯ ಧ್ಯಕ್ಷರಾಗಿ  ಕಡಂದಲೆ ಪರಾರಿ ನ್ಯಾ, ಪ್ರಕಾಶ್ ಎಲ್ ಶೆಟ್ಟಿ ಆಯ್ಕೆ,

Mumbai News Desk

ಗೋರೆಗಾಂವ್ ಕರ್ನಾಟಕ ಸ಼ಂಘ, “ರಂಗಸ್ಥಳ” ದಿಂದ ಆಟಿಡೊ಼ಂಜಿ ಬಯ್ಯದ ಪೋರ್ತು 2025

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಮಲಾಡ್ ಪೂರ್ವದ ತುಳು  ಕನ್ನಡಿಗರ ಮನೆ ಮನೆಯಲ್ಲಿ ರಾಮ ನಾಮಸ್ಮರಣೆ

Mumbai News Desk

ಥಾಣೆ ಘೋಡ್ ಬಂದರ್ ರೋಡ್ ಕನ್ನಡ ಅಸೋಸಿಯೇಷನ್ ದಶಮಾನೋತ್ಸವ, ಸಾಂಸ್ಕೃತಿಕ ವೈಭವ

Mumbai News Desk