September 6, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಶನಿ ಪೂಜೆ





ಬಿಲ್ಲವರ ಅಸೋಸಿಯಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಛೇರಿಯಲ್ಲಿ ದಿನಾಂಕ 22.02.2025 ರಂದು ಶನಿವಾರ ಆಯೋಜಿಸಿದ್ದ ಸಾಮೂಹಿಕ ಶನಿ ಪೂಜೆಯು ಬಹಳ ವಿಜೃಂಭನೆಯಿಂದ ಸಂಪನ್ನ ಗೊಂಡಿತು.
ಅಂದು ಬೆಳಿಗ್ಗೆ ಅರ್ಚಕರಾದ ಈಶ್ವರ್ ಕೋಟ್ಯಾನ್ ಇವರಿಂದ ಗುರು ಪೂಜೆಯು ಜರಗಿತು .

ತದ ನಂತರ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಪ್ರದಾನ ಅರ್ಚಕರಾದ ಸತೀಶ್ ಏನ್ ಕೋಟ್ಯಾನ್ ರವರ ದಿವ್ಯ ಹಸ್ತದಿಂದ ಶ್ರೀ ಶನಿ ದೇವರ ಕಳಶ ಪ್ರತಿಷ್ಠೆ ಜರಗಿತು.

ಪೂಜಾ ಸಂಕಲ್ಪಕ್ಕೆ ಕೃಷ್ಣ ಎಲ್ ಪೂಜಾರಿ ದಂಪತಿಗಳು, ಮಂಟಪ ಶೃಂಗಾರ ನಾರಾಯಣ್ ಪೂಜಾರಿ ಮತ್ತು ಪುರುಷೋತ್ತಮ ಪೂಜಾರಿ ಸಹಕರಿಸಿದರು. ನಂತರ ಮಹಿಳಾ ವಿಭಾಗದವರಿಂದ ಭಜನಾ ಕಾರ್ಯಕ್ರಮ ಜರಗಿತು.
ಮದ್ಯಾಹ್ನ 2 ರಿಂದ ಶ್ರೀ ಶನೀಶ್ವರ ಮಹಾತ್ಮೆ ಎಂಬ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ತಾಳ ಮದ್ದಳೆ ರೂಪದಲ್ಲಿ ಮುಂಬಯಿಯ ನುರಿತ ಕಲಾವಿದರು ಸಾದರ ಪಡಿಸಿದರು.


ಗಿರಿಜಾ ಎಸ್ ಪಾಲನ್, ನವೀನ್ ಮಮತ ಅಂಚನ್ , ರವಿ ಪೂಜಾರಿ,
ರಾಮಚಂದ್ರ ಜೇ ಬಂಗೇರ, ಶ್ರೀಮತಿ ಗುಲಾಬಿ ಬಾಬು ಪೂಜಾರಿ, ಅನಿತ ಸುಮಿತ್ ಸುವರ್ಣ, ಪ್ರವೀಣ ಕೆ ಗುಜರನ್, ರಾಜು ಪೂಜಾರಿ ಮತ್ತು ಸೌಜನ್ಯ ಸತೀಶ್ ಕೋಟ್ಯಾನ್, ಹಾಗೂ ಗಿರಿಜಾ ಕೆ ಅಂಚನ್, ಮತ್ತು ಇತರ ಧಾನಿಗಳಿಂದ ಅನ್ನಧಾನ ಸೇವೆ ಜರಗಿತು.

ಮಾತ್ರವಲ್ಲದೆ ಸ್ಥಳೀಯ ಕಛೇರಿಗೆ ಸುಮಾರು 30 ಸಾವಿರ ಬೆಲೆ ಬಾಳುವ ಪೂಜಾ ಸಾಮಗ್ರಿಗಳನ್ನು ಧಾನ ರೂಪವಾಗಿ ನೀಡಿದ ಮಾಜಿ ಕಾರ್ಯಾಧ್ಯಕ್ಷರಾದ ದೇವರಾಜ್ ಪೂಜಾರಿ ಮತ್ತು ದಂಪತಿಯವರನ್ನು ಪೂಜಾ ಸಂದರ್ಭದಲ್ಲಿ ಗೌರವಿಸಲಾಯಿತು.


ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಹರೀಶ್ ಜಿ ಅಮೀನ್, ಉಪಾಧ್ಯಕ್ಷರಾದ ಪುರುಷೋತ್ತಮ್ ಎಸ್ ಕೋಟ್ಯಾನ್, ಸುರೇಶ್ ಕುಮಾರ್, ಗೌ. ಕೋಶಾಧಿಕಾರಿ ರವಿ ಎಸ್ ಸನಿಲ್, ಮತ್ತು ಎಲ್ಲಾ ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಉಪಸ್ತಿತರಿದ್ದರು.


ಪ್ರಾರಂಭದಲ್ಲಿ ಗೌ. ಪ್ರದಾನ ಕೋಶಾಧಿಕಾರಿ ರವಿ ಎಸ್ ಸನಿಲ್, ಉಪ ಕಾರ್ಯಾಧ್ಯಕ್ಷರಾದ ಚಂದ್ರಹಾಸ್ ಎಸ್ ಪಾಲನ್, ಸಚಿನ್ ಎಸ್ ಪೂಜಾರಿ ಮತ್ತು ಕೋಶಾಧಿಕಾರಿ ಆನಂದ್ ಪೂಜಾರಿ, ಗೌ. ಕಾರ್ಯಾಧ್ಯಕ್ಷರಾದ ಮಂಜಪ್ಪ ಪೂಜಾರಿ, ಮತ್ತು ಪೂಜಾ ಕಮಿಟಿಯ
ಕಾರ್ಯಧ್ಯಕ್ಷರಾದ ಅನ್ನು ಪೂಜಾರಿ ಮತ್ತು ಪದಾಧಿಕಾರಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

ಡೊಂಬಿವಲಿ ಪರಿಸರದ ಹೆಚ್ಚಿನ ಭಕ್ತರು ಪೂಜೆಗೆ ಆಗಮಿಸಿ ಶನಿ ದೇವರ ಕೃಪೆಗೆ ಪಾತ್ರರಾದರು. ಗೌ. ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು.



Related posts

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಪದ್ಮವಿಭೂಷಣ ಜಾರ್ಜ್ ಫರ್ನಾಂಡಿಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ-2025 ಪ್ರದಾನ ಸಮಾರಂಭ,

Mumbai News Desk

ಆಟಿಡೊಂಜಿ ಅಟೀಲ್ ಹಾಗೂ ಶೈಕ್ಷಣಿಕ ಸಹಾಯ ಧನ ವಿತರಣೆ: ಧಾರ್ಮಿಕ ಕಾರ್ಯದೊಂದಿಗೆ ನಾಡಿನ ಸಂಸ್ಕೃತಿಯನ್ನು ಉಳಿಸುತ್ತಿರುವುದು ಅಭಿನಂದನೀಯ – ಉದಯ ಶೆಟ್ಟಿ ಮಲ್ಲಾರ್ ಬೀಡು

Mumbai News Desk

ವಿದ್ಯಾದಾಯಿನಿ ಸಭಾ ಫೋರ್ಟ್ ವತಿಯಿಂದ ‘ಆಟಿಡೊಂಜಿ ದಿನ’ ಆಚರಣೆ.

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ: ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಶಾರದಾ ಪೂಜೆ

Mumbai News Desk

ಶ್ರೀ ಜಗದಂಬ ಮಂದಿರ ಡೊಂಬಿವಲಿಯಲ್ಲಿ ಒಂಬತ್ತನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಸಂಪನ್ನ.

Mumbai News Desk

ಮುಂಬೈನಲ್ಲಿ ಈದ್ -ಎ -ಮಿಲಾದ್ ರಜೆಯನ್ನು ಸೆಪ್ಟಂಬರ್ 8ಕ್ಕೆ ಬದಲಾಯಿಸಿದ ಮಹಾರಾಷ್ಟ್ರ ಸರಕಾರ

Mumbai News Desk