July 23, 2026
Mumbai News Kannada
ಮುಂಬಯಿ

ಬಿಲ್ಲವರ ಅಸೋಸಿಯಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಶನಿ ಪೂಜೆ







ಬಿಲ್ಲವರ ಅಸೋಸಿಯಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಛೇರಿಯಲ್ಲಿ ದಿನಾಂಕ 22.02.2025 ರಂದು ಶನಿವಾರ ಆಯೋಜಿಸಿದ್ದ ಸಾಮೂಹಿಕ ಶನಿ ಪೂಜೆಯು ಬಹಳ ವಿಜೃಂಭನೆಯಿಂದ ಸಂಪನ್ನ ಗೊಂಡಿತು.
ಅಂದು ಬೆಳಿಗ್ಗೆ ಅರ್ಚಕರಾದ ಈಶ್ವರ್ ಕೋಟ್ಯಾನ್ ಇವರಿಂದ ಗುರು ಪೂಜೆಯು ಜರಗಿತು .

ತದ ನಂತರ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಪ್ರದಾನ ಅರ್ಚಕರಾದ ಸತೀಶ್ ಏನ್ ಕೋಟ್ಯಾನ್ ರವರ ದಿವ್ಯ ಹಸ್ತದಿಂದ ಶ್ರೀ ಶನಿ ದೇವರ ಕಳಶ ಪ್ರತಿಷ್ಠೆ ಜರಗಿತು.

ಪೂಜಾ ಸಂಕಲ್ಪಕ್ಕೆ ಕೃಷ್ಣ ಎಲ್ ಪೂಜಾರಿ ದಂಪತಿಗಳು, ಮಂಟಪ ಶೃಂಗಾರ ನಾರಾಯಣ್ ಪೂಜಾರಿ ಮತ್ತು ಪುರುಷೋತ್ತಮ ಪೂಜಾರಿ ಸಹಕರಿಸಿದರು. ನಂತರ ಮಹಿಳಾ ವಿಭಾಗದವರಿಂದ ಭಜನಾ ಕಾರ್ಯಕ್ರಮ ಜರಗಿತು.
ಮದ್ಯಾಹ್ನ 2 ರಿಂದ ಶ್ರೀ ಶನೀಶ್ವರ ಮಹಾತ್ಮೆ ಎಂಬ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ತಾಳ ಮದ್ದಳೆ ರೂಪದಲ್ಲಿ ಮುಂಬಯಿಯ ನುರಿತ ಕಲಾವಿದರು ಸಾದರ ಪಡಿಸಿದರು.


ಗಿರಿಜಾ ಎಸ್ ಪಾಲನ್, ನವೀನ್ ಮಮತ ಅಂಚನ್ , ರವಿ ಪೂಜಾರಿ,
ರಾಮಚಂದ್ರ ಜೇ ಬಂಗೇರ, ಶ್ರೀಮತಿ ಗುಲಾಬಿ ಬಾಬು ಪೂಜಾರಿ, ಅನಿತ ಸುಮಿತ್ ಸುವರ್ಣ, ಪ್ರವೀಣ ಕೆ ಗುಜರನ್, ರಾಜು ಪೂಜಾರಿ ಮತ್ತು ಸೌಜನ್ಯ ಸತೀಶ್ ಕೋಟ್ಯಾನ್, ಹಾಗೂ ಗಿರಿಜಾ ಕೆ ಅಂಚನ್, ಮತ್ತು ಇತರ ಧಾನಿಗಳಿಂದ ಅನ್ನಧಾನ ಸೇವೆ ಜರಗಿತು.

ಮಾತ್ರವಲ್ಲದೆ ಸ್ಥಳೀಯ ಕಛೇರಿಗೆ ಸುಮಾರು 30 ಸಾವಿರ ಬೆಲೆ ಬಾಳುವ ಪೂಜಾ ಸಾಮಗ್ರಿಗಳನ್ನು ಧಾನ ರೂಪವಾಗಿ ನೀಡಿದ ಮಾಜಿ ಕಾರ್ಯಾಧ್ಯಕ್ಷರಾದ ದೇವರಾಜ್ ಪೂಜಾರಿ ಮತ್ತು ದಂಪತಿಯವರನ್ನು ಪೂಜಾ ಸಂದರ್ಭದಲ್ಲಿ ಗೌರವಿಸಲಾಯಿತು.


ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಹರೀಶ್ ಜಿ ಅಮೀನ್, ಉಪಾಧ್ಯಕ್ಷರಾದ ಪುರುಷೋತ್ತಮ್ ಎಸ್ ಕೋಟ್ಯಾನ್, ಸುರೇಶ್ ಕುಮಾರ್, ಗೌ. ಕೋಶಾಧಿಕಾರಿ ರವಿ ಎಸ್ ಸನಿಲ್, ಮತ್ತು ಎಲ್ಲಾ ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಉಪಸ್ತಿತರಿದ್ದರು.


ಪ್ರಾರಂಭದಲ್ಲಿ ಗೌ. ಪ್ರದಾನ ಕೋಶಾಧಿಕಾರಿ ರವಿ ಎಸ್ ಸನಿಲ್, ಉಪ ಕಾರ್ಯಾಧ್ಯಕ್ಷರಾದ ಚಂದ್ರಹಾಸ್ ಎಸ್ ಪಾಲನ್, ಸಚಿನ್ ಎಸ್ ಪೂಜಾರಿ ಮತ್ತು ಕೋಶಾಧಿಕಾರಿ ಆನಂದ್ ಪೂಜಾರಿ, ಗೌ. ಕಾರ್ಯಾಧ್ಯಕ್ಷರಾದ ಮಂಜಪ್ಪ ಪೂಜಾರಿ, ಮತ್ತು ಪೂಜಾ ಕಮಿಟಿಯ
ಕಾರ್ಯಧ್ಯಕ್ಷರಾದ ಅನ್ನು ಪೂಜಾರಿ ಮತ್ತು ಪದಾಧಿಕಾರಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .

ಡೊಂಬಿವಲಿ ಪರಿಸರದ ಹೆಚ್ಚಿನ ಭಕ್ತರು ಪೂಜೆಗೆ ಆಗಮಿಸಿ ಶನಿ ದೇವರ ಕೃಪೆಗೆ ಪಾತ್ರರಾದರು. ಗೌ. ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು.



Related posts

ಮುಂಬೈ: ಕುರ್ಲಾ ಬೆಸ್ಟ್ ಬಸ್ ಅಪಘಾತ ಪ್ರಕರಣ, ಚಾಲಕರನ್ನು ನೇಮಿಸಿಕೊಳ್ಳುವಲ್ಲಿ ಮತ್ತು ತರಬೇತಿ ನೀಡುವಲ್ಲಿ ನಿರ್ಲಕ್ಷ – ಪೊಲೀಸರ ಆರೋಪ

Mumbai News Desk

ಆನಂದ ಮೋನಪ್ಪ ಪೂಜಾರಿ ಅವರ ಮೃತದೇಹನ್ನು ಕುಟುಂಬದವರಿಗೆ ಒಪ್ಪಿಸುವಲ್ಲಿ ಸಹಕರಿಸಿದ ಜಯ ಸುವರ್ಣ ಅಭಿಮಾನಿಗಳು

Mumbai News Desk

ಸಾಯಿನಾಥ ಮಿತ್ರ ಮಂಡಳಿಯಿಂದ ಹೊರೆ ಕಾಣಿಕೆ ಮೆರವಣಿಗೆ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅರುಷಿ ಕರುಣಾಕರ ಸುವರ್ಣ ಗೆ ಶೇ.91.60 ಅಂಕ.

Mumbai News Desk

ಬಂಟರ ಸಂಘ ದ ವಸಯಿ ಡಹಣು ಪ್ರಾದೇಶಿಕ ಸಮಿತಿ – ಮಹಿಳಾ ವಿಭಾಗ ಆಟಿಡೊಂಜಿ ದಿನ – ದತ್ತು ಸ್ವೀಕಾರ ಕಾರ್ಯಕ್ರಮ.

Mumbai News Desk

ಹರಟೆ ಸಾಹಿತಿ ದಿ. ಚಂದ್ರಶೇಖರ ರಾವ್ ಜನ್ಮದಿನಾಚರಣೆ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

Mumbai News Desk