July 23, 2026
Mumbai News Kannada
ಮುಂಬಯಿ

ಬಂಟರ ಸಂಘ ಮುಂಬಯಿ,  ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಯುವ ವಿಭಾಗ ರಕ್ತದಾನ ಶಿಬಿರ.







ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಅದರಿಂದ ಆರೋಗ್ಯ ಉತ್ತಮ: ಪ್ರವೀಣ್ ಭೋಜ ಶೆಟ್ಟಿ.

ಮುಂಬಯಿ ಜು10. ಬಂಟರ ಸಂಘ ಮುಂಬಯಿ,  ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಯುವ ವಿಭಾಗದ ಆಶ್ರಯದಲ್ಲಿ ರಕ್ತದಾನ ಶಿಬಿರ  ಜೂ. 6ರಂದು ಎಸ್. ಎಂ. ಶೆಟ್ಟಿ ಶಾಲೆ, ಪೋವಾಯಿ ಇಲ್ಲಿ ನಡೆಯಿತು.

      ಶಿಬಿರವನ್ನು  ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ . ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್.ಕೆ. ಶೆಟ್ಟಿ,  ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ. ಸೂರಜ್ ಶೆಟ್ಟಿ. ಪ್ರಸಿದ್ಧ ವೈದ್ಯ  ಡಾ. ಸತ್ಯಪ್ರಕಾಶ್ ಶೆಟ್ಟಿ, .ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷ ಡಾ. ಸ್ವರೂಪ್ ಹೆಗ್ಡೆ ಮತ್ತು ಇತರ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡುತ್ತಾ  ಬಂಟ ಸಮುದಾಯದ ಮೂಲಕ ಇಂತಹ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಯುತ್ತಿದ್ದು.

  ಪ್ರತಿ ವರ್ಷ 5000 ಯೂನಿಟ್‌ಗಳವರೆಗೆ ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ರಕ್ತದಾನ ಮಾಡುವ ಕ್ರಮವನ್ನು ರೂಡಿಸಿಕೊಳ್ಳಬೇಕು ಅದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ನುಡಿದರು.

ಡಾ. ಸತ್ಯಪ್ರಕಾಶ್ ಶೆಟ್ಟಿ  ಮಾತನಾಡುತ್ತಾ ಮಹಾರಾಷ್ಟ್ರದಾದ್ಯಂತ ರಕ್ತದಾನದ ಮಹತ್ವವನ್ನು  ಅರಿತುಕೊಂಡು ಇಂಥ ಸೇವಾ ಕಾರ್ಯಗಳನ್ನು ಬಹಳಷ್ಟು ರಕ್ತದಾನಿಗಳು ದಾನವನ್ನುಮಾಡುತ್ತಿದ್ದಾರೆ.ಪ್ರತಿದಿನ ರಕ್ತದ ಅವಶ್ಯಕತೆಗಳು ಹೆಚ್ಚು ಪ್ರಮಾಣದಲ್ಲಿದೆ . ಪ್ರತಿ ಯೂನಿಟ್ ರಕ್ತವು 3 ಜೀವಗಳನ್ನು ಉಳಿಸಬಹುದು ಎಂದು ಹೇಳಿದರು.

  ಪ್ರಾದೇಶಿಕ ಸಮಿತಿಯ  ವೈದ್ಯಕೀಯ ಮತ್ತು ಆರೋಗ್ಯ ಸಮಿತಿಯ ಕಾರ್ಯ ಧ್ಯಕ್ಷ    ಆನಂದ್ ಶೆಟ್ಟಿ ಅವರ ಕಾರ್ಯವನ್ನು ಶ್ಲಾಘಿಸಿ ಇಂತಹ ಶಿಬಿರಗಳು ಮತ್ತು ಚಟುವಟಿಕೆಗಳನ್ನು ಇನ್ನಷ್ಟು ನಡೆಸುವಂತೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಶಿಬಿರವೂ ಪ್ರಾದೇಶಿಕ ಸಮಿತಿಯ   ಕಾರ್ಯಾಧ್ಯಕ್ಷ ಸೂರಜ್ ಶೆಟ್ಟಿ ಮತ್ತು.  ಯುವ ವಿಭಾಗದ   ಕಾರ್ಯಾಧ್ಯಕ್ಷ  ಅದ್ವಿತ್ ಪೂಂಜಾ ಅವರು ಸಮರ್ಥ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮುನ್ನಡೆಸಿದರು. 

. ಈ ಸಂದರ್ಭದಲ್ಲಿ  ಸಂಘದ ವಿವಾಹ ನೋಂದಣಿಕೆ ಸಮಿತಿಯ  ರಮೇಶ್ ರೈ,   ಪ್ರಾದೇಶಿಕ ಸಮಿತಿಯ ಸಂಚಾಲಕ ರವೀಂದ್ರ ಶೆಟ್ಟಿ .ಕಾರ್ಯದರ್ಶಿ ತಾರಾನಾಥ ಶೆಟ್ಟಿ, ಉಪಾಧ್ಯಕ್ಷ ಯಶವಂತ್ ಶೆಟ್ಟಿ ಬನ್ನಂಜೆ

 ಖಜಾಂಚಿ ಮೋಹನ್‌ದಾಸ್ ಶೆಟ್ಟಿ, ಜ್ಯೋತಿ ಕೋಶಧಿಕಾರಿ ಅಭಿಷೇಕ್ ಶೆಟ್ಟಿ . ದತ್ತು ಸ್ವೀಕಾರ ಸಮಿತಿಯ ಕಾರ್ಯಾಧ್ಯಕ್ಷೆ ಲಕ್ಷ್ಮಣ್ ಶೆಟ್ಟಿ. ಸಮಾಜ ಕಲ್ಯಾಣ ಸಮಿತಿಯ ಕಾರ್ಯ ಧ್ಯಕ್ಷೆ ಭಾರತಿ ಶೆಟ್ಟಿ.

ಮಹಿಳಾ ವಿಭಾಗದ ಮಾಜಿ ಕಾರ್ಯ ಧ್ಯಕ್ಷೆ ವಜ್ರ  ಪೂಂಜಾ.

ಮತ್ತಿತರ ಸದಸ್ಯರು.

ಸದಸ್ಯತ್ವ ನೋಂದಣಿಕೆ ಸಮಿತಿಯ ಕಾರ್ಯಾಧ್ಯಕ್ಷ ಮನೀಶ್ ಶೆಟ್ಟಿ ಮತ್ತಿತರ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. 

  ಕಾರ್ಯಕ್ರಮವನ್ನು ಪ್ರಭಾಕರ್ ಶೆಟ್ಟಿ  ನಿರೂಪಿಸಿದರು.

ಮಹಿಳಾ ವಿಭಾಗದ ಅನಿತಾ ಶೆಟ್ಟಿ ಅವರ ಪ್ರಾರ್ಥನೆ ಮಾಡಿದರು.

ಈ ಶಿಬಿರದ ವ್ಯವಸ್ಥೆಯನ್ನು ನವೀನ್ ಶೆಟ್ಟಿ ತಮ್ಮ ಸಂಸ್ಥೆಯ ಮೂಲಕ ನಡೆಸಿದರು . 

    ರಕ್ತದಾನದಲ್ಲಿ  ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿ ರಕ್ತದಾನ ನೀಡಿದರು.

ಸುಮಾರು 51 ಯೂನಿಟ್ ರಕ್ತವನ್ನು  ಸಂಗ್ರಹಿಸಲಾಗಿತ್ತು

Show quoted text



Related posts

ಭಾರತ್ ಬ್ಯಾಂಕಿನ ಅಂಧೇರಿ ಪೂರ್ವದ ಶಾಖೆಯ 30ನೇ ವರ್ಷ ಆಚರಣೆಯ ಸಂಭ್ರಮ.

Mumbai News Desk

ಮುಂಬೈ ವಿಶ್ವದ 5ನೇ ಅತ್ಯುತ್ತಮ ಆಹಾರ ನಗರ : ಮಾತುಂಗದ ರಾಮ್ ಆಶ್ರಯ ಐಕಾನಿಕ್ ರೆಸ್ಟೋರೆಂಟ್ ಗಳಲ್ಲಿ ಒಂದು

Mumbai News Desk

ಮುಂಬೈ: ಬಾಂದ್ರಾದಲ್ಲಿ ರೈಲ್ವೆ ಭೂಮಿ ತೆರವು ವೇಳೆ ಭಾರಿ ಹಂಗಾಮು, ಪೊಲೀಸರ ಮೇಲೆ ಕಲ್ಲು ತೂರಾಟ, ಲಾಠಿ ಪ್ರಹಾರ

Mumbai News Desk

 ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ  ಬಾಳ-ಕಾಟಿಪಳ್ಳ, ಮುಂಬೈ ಪ್ರವಾಸದ ಉದ್ಘಾಟನೆ, ಸನ್ಮಾನ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ 32 ನೇ ವಾರ್ಷಿಕ ಸಾರ್ವಜನಿಕ ಶನಿಶ್ವರ ಪೂಜೆ ಸಂಪನ್ನ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ : ಲಲಿತ ಕಲಾ ಹಾಗೂ ಮಹಿಳಾ ವಿಭಾಗದ ವತಿಯಿಂದ ಸಂಭ್ರಮದ ನಾಡಹಬ್ಬ.

Mumbai News Desk