32 C
Mumbai
March 7, 2026
Mumbai News Kannada
ಮುಂಬಯಿ

ಕರ್ನಾಟಕ ಸಂಘ ಕಲ್ಯಾಣ್, ವಾರ್ಷಿಕ ಮಹಾ ಸಭೆ : ಹಾಗೂ ನೂತನ ಪದಾಧಿಕಾರಿಗಳ ನಿಯುಕ್ತಿ, ಅಧ್ಯಕ್ಷರಾಗಿ ಜಯಂತ್ ದೇಶಮುಖ್






ಕರ್ನಾಟಕ ಸಂಘ ಕಲ್ಯಾಣ್ ಇದರ 22ನೇ ವಾರ್ಷಿಕ ಮಹಾಸಭೆಯು ಜುಲೈ 13 ರಂದು ಸಂಜೆ, ಸಂಘದ ಕಾರ್ಯಾಲಯದಲ್ಲಿ ಸಂಘದ ಅಧ್ಯಕ್ಷರಾದ ಕೆ ಎನ್ ಸತೀಶ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘದ 24 – 25 ರ ಪರಿಷ್ಕೖತ ಲೆಕ್ಕ ಪತ್ರಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಹಾಗೂ 2025 – 2026 ಅವಧಿಗೆ ಸಿ. ಎಮ್. ಲಾಡ್ ಎಸೋಸಿಯೇಟ್ಸ್ ಮತ್ತು ಸುಭ್ರಮಣ್ಯಮ್ ಐಯರ್ ರವರನ್ನು ಭಾಹ್ಯ ಹಾಗೂ ಆಂತರಿಕ ಲೆಕ್ಕಪತ್ರ ಪರೀಷ್ಕರರನ್ನಾಗಿ ನೇಮಿಸಲಾಯಿತು.
ಅಧ್ಯಕ್ಷರಾದ ಕೆ. ಎನ್. ಸತೀಶ್ ಮಾತನಾಡುತ್ತಾ ಇತ್ತೀಚೆಗೆ ದೈವಾಧೀನರಾದ ಸ್ಥಾಪಕ ಅಧ್ಯಕ್ಷ ನಂದಾ ಶೆಟ್ಟಿ, ಪೂರ್ವ ಅಧ್ಯಕ್ಷ ಟಿ. ಎಸ್. ಉಪಾಧ್ಯಾಯ ಹಾಗೂ ಪೂರ್ವ ಜನ ಸಂಪರ್ಕ ಅಧಿಕಾರಿ ಶ್ರೀಧರ ಕುಲಕರ್ಣಿಯವರಿಗೆ ನಮನಗಳನ್ನು ಸಲ್ಲಿಸಿದರಲ್ಲದೆ ಸಂಘದ ಅಭಿವೃದ್ಧಿಯ ಬಗ್ಗೆ ಹಾಗೂ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಜೊತೆಗೆ ಮುಂಬರುವ ಸಂಘದ ಬೆಳ್ಳಿ ಹಬ್ಬದ ಪೂರ್ವಾಭಾವಿ ತಯಾರಿಯ ಬಗ್ಗೆ ಸಲಹೆ ನೀಡಿದರು.
ಈಗಿನ ಕಾರ್ಯಕಾರಿ ಸಮಿತಿಯ ಅವಧಿ ಮುಗಿದಿದ್ದು ನವ ಕಾರ್ಯಕಾರಿ ಸಮಿತಿಯ ನೇಮಕದ ಪ್ರಕ್ರೀಯೆ ಪೂರ್ಣ ಗೊಂಡಿದ್ದು 2025 – 2027 ಅವಧಿಯ ನವ ಕಾರ್ಯಕಾರಿ ಸಮಿತಿಯನ್ನು ಘೋಷಿಸಲಾಯಿತು.ದರು. ಜಯಂತ ದೇಶಮುಖ್ ಅಧ್ಯಕ್ಷರನ್ನಾಗಿ, ಜಯಂತಿ ಹೆಗ್ಡೆಯವರನ್ನು ಉಪಾಧ್ಯಕ್ಷರನ್ನಾಗಿ, ವಿಜಯ್ ಪೈಯವರನ್ನು ಗೌರವ ಕಾರ್ಯದರ್ಶಿಯಾಗಿ, ಗಣೇಶ ಪೈಯವರನ್ನು ಕೋಶಾಧಿಕೋರಿಯಾಗಿ ಹಾಗೂ ವೀಣಾ ಕಾಮತ್ ರವರನ್ನು ಮಹಿಳಾಧ್ಯಕ್ಷೆಯಾಗಿ ನಿಯುಕ್ತಿ ಮಾಡಲಾಯಿತು. ಜೊತೆಗೆ ಶ್ರೀಧರ ಹಿಂದೂ ಪೂರ್ ರವರನ್ನು ಸಂಘದ ಮುಖವಾಣಿ ‘ಕಲ್ಯಾಣ ದರ್ಪಣ’ದ ಸಂಪಾದಕರಾಗಿ ಹಾಗೂ ಜನ ಸಂಪರ್ಕ ಅಧಿಕಾರಿಯಾಗಿ, ಶ್ರೀಮತಿ ವಿಭಾ ದೇಶಮುಖರವರನ್ನು ಉಪ ಕಾರ್ಯದರ್ಶಿಯಾಗಿ,ಶ್ರೀಮತಿ ಆಶಾ ನಾಯಕ್ ರವರನ್ನು ಸ್ವರ ಕಲಾವೇದಿಕೆಯ ಕಾರ್ಯಾಧ್ಯಕ್ಷೆಯಾಗಿ ಹಾಗೂ ಶ್ರೀಮತಿ ಪ್ರಸನ್ನ ಹೆಗ್ಡೆಯವರನ್ನು ಯುವ ವಿಭಾಗದ ಪ್ರತಿನಿಧಿಯಾಗಿ ನೇಮಿಸಲಾಗಿದೆಯೆಂದು ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Related posts

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗಾಗಿ ಪುಸ್ತಕ ಹಾಗೂ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮ

Mumbai News Desk

ಮಹಾರಾಷ್ಟ್ರ Education Today.Co.ಇವರ ವತಿಯಿಂದ ಪ್ರಶಸ್ತಿ ಪ್ರಧಾನ ಸಮಾರಂಭ – ಮುಂಬೈ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಡೈನಾಮಿಕ್ ಸ್ಕೂಲ್ ಅವಾರ್ಡ್

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ ರಕ್ತದಾನ ಶಿಭಿರ,

Mumbai News Desk

ಕುಲಾಲ ಸಂಘ ಮುಂಬಯಿ,ಥಾಣ, ಕಸರಾ , ಕರ್ಜತ್ ಮತ್ತು ಭಿವಂಡಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಹಳದಿ ಕುಂಕುಮ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮೀ  ಪೂಜಾ ಸಮಿತಿಯಿಂದ 16 ನೇ ವಾರ್ಷಿಕ  ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಧಾರ್ಮಿಕ ಸಭೆ

Mumbai News Desk

ಮೀರಾರೋಡ್ ಶ್ರೀ ದುರ್ಗಾ ಭಜನ್ ಮಂಡಳಿಯ 18ನೇ ವಾರ್ಷಿಕ ಮಹಾಪೂಜೆ.

Mumbai News Desk