



ಮೂಲತ್ವ ಫೌಂಡೇಶನ್ ಚಾರಿಟೇಟರ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಆಟಿ ದೊಂಜಿ ದಿನ ಕಾರ್ಯಕ್ರಮವು ನೆರವೇರಿತು. ಸುವರ್ಣ ರೆಸಿಡೆನ್ಸಿ ತಾರೆ ತೋಟ ಮಂಗಳೂರು ಇಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ದಕ್ಷಿಣದ ಶಾಸಕರಾದ ವೇದವ್ಯಾಸ್ ಕಾಮತ್ ಇವರು ಉದ್ಘಾಟಿಸಿ ಆಟಿದ ದಿನದ ವೈಶಿಷ್ಟತೆಯನ್ನು ತಿಳಿಸಿದರು, ಹಾಗೂ ಟ್ರಸ್ಟಿನ ಕಾರ್ಯ ವೈಕ್ಯರಿಯನ್ನು ಮೆಚ್ಚಿದರು.




ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ,ದೈಜಿವರ್ಲ್ಡ್ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ, ಕೇಶವ ಮರೋಲಿ, ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಜಯಕುಮಾರ್, ಸುವರ್ಣ ರೆಸಿಡೆನ್ಸಿಯ ಅಧ್ಯಕ್ಷರಾದ ಯಡಿಪಡಿತಾಯ, ಉಪಸ್ಥಿದ್ದರು.
ಉಪಸ್ಥಿತರಿದ್ದ ಎಲ್ಲಾ ಅತಿಥಿಗಳಿಗೆ ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಸನ್ಮಾನಿಸಲಾಯಿತು. ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಕಾಶ್ ಕೋಟ್ಯಾನ್, ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಲಕ್ಷ್ಮೀಶ ಕೋಟಿಯನ್, ಶೈನಿ ಮೂಲತ್ವ, ಅಕ್ಷತ ಕದ್ರಿ , ಟ್ರಸ್ಟಿನ ಎಲ್ಲಾ ಸದಸ್ಯರು, ಪರಿಸರದವರು ಭಾಗವಹಿಸಿದರು.ಕೊನೆಗೆ ಟ್ರಸ್ಟಿನ ಸದಸ್ಯರು ಆಟಿದ ದಿನದ ಸಾಂಪ್ರದಾಯಿಕ ಶೈಲಿಯ ಊಟ ಉಪಚಾರಗಳನ್ನು ಮಾಡಿ ಬಡಿಸಿದರು.
ಶೈನಿ ಮೂಲತ್ವ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು, ಮಮತಾ ಕಾರ್ಯಕ್ರಮ ನಿರೂಪಿಸಿದರೆ, ಜಯಶ್ರೀ ವಂದಿಸಿದರು.




