July 23, 2026
Mumbai News Kannada
ಸುದ್ದಿ

ಸಂಘಟಕ, ಕಲಾ ಪೋಷಕ ರಾಜು ಮೆಂಡನ್ ವಂಡ್ಸೆ ಅವರಿಗೆ ಮಾತೃ ವಿಯೋಗ.







ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ, ಮುಂಬಯಿ ಇದರ ಅಧ್ಯಕ್ಷ, ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನದ ಗೌರವ ಅಧ್ಯಕ್ಷರೂ ಆಗಿರುವ ರಾಜು ಮೆಂಡನ್ ವಂಡ್ಸೆ ಅವರ ಮಾತೃಶ್ರೀ ಲಚ್ಚು ಮೆಂಡನ್ (84 ವರ್ಷ ) ಇಂದು (9/8/25)ನಿಧನರಾಗಿದ್ದಾರೆ.
ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧು-ಬಳಗವನ್ನು ಅಗಲಿರುವರು.
ಇವರ ನಿಧನಕ್ಕೆ ಮೊಗವೀರ ಕುಲರತ್ನ ನಾಡೋಜಾ ಡಾ. ಜಿ ಶಂಕರ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ್, ಮಾಜಿ ಅಧ್ಯಕ್ಷರುಗಳಾದ ಗೋಪಾಲ್ ಪುತ್ರನ್, ಕರುಣಾಕರ ಪುತ್ರನ್, ಮಹಾಬಲ ಕುಂದರ್, ರಮೇಶ್ ಬಂಗೇರ, ಎನ್ ಎಚ್ ಬಗ್ವಾಡಿ, ನಾಣು ಚಂದನ್, ಸಮಾಜದ ಗಣ್ಯರಾದ ಸಂತೋಷ ಪುತ್ರನ್, ಸಂಘದ ಪದಾಧಿಕಾರಿಗಳು, ಸದಸ್ಯರು, ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ (10/8/25 ಆದಿತ್ಯವಾರ ) ಬೆಳಿಗ್ಗೆ ಅವರ ಸ್ವಗ್ರಹ ಕುಂದಾಪುರ, ಕುಂಟ ನೇರಳು ಬಳ್ಳಿ ಹಿತ್ಲು, ಕರ್ಕುಂಜೆ ಮನೆಯಲ್ಲಿ ಬೆಳಿಗ್ಗೆ 9 ಘಂಟೆಗೆ ನಡೆಯಲಿದೆ.



Related posts

ಟಿಎಂಸಿ ಭದ್ರಕೋಟೆ ಫಾಲ್ಟಾದಲ್ಲಿ ಬಿಜೆಪಿಯ ದೇಬಾಂಗ್ಶು ಪಾಂಡಾಗೆ ಐತಿಹಾಸಿಕ ಗೆಲುವು: ಇತಿಹಾಸ ಬರೆದ ಪಶ್ಚಿಮ ಬಂಗಾಳ ಉಪಚುನಾವಣೆ

Mumbai News Desk

ಸುರತ್ಕಲ್ : 2 ತಂಡಗಳ ನಡುವೆ ಗಲಾಟೆ, ಇಬ್ಬರಿಗೆ ಚೂರಿ ಇರಿತ

Mumbai News Desk

ಯುವ ಸಿಂಚನ ಪತ್ರಿಕೆಯ ಸಂಪಾದಕ, ಎನ್ ಎಸ್ ಸಿಡಿಎಫ್ ನ ಪ್ರಧಾನ ಕಾರ್ಯದರ್ಶಿ ದಿನಕರ್ ಡಿ. ಬಂಗೇರ ಅವರಿಗೆ ಮಾತೃ ವಿಯೋಗ.

Mumbai News Desk

ಕುಲಾಲ ಸಂಘ ಮುಂಬಯಿಯ ಮುಖವಾಣಿ “ಅಮೂಲ್ಯ” ದ ಬೆಳ್ಳಿ ಹಬ್ಬ ಸಮಾರೋಪ . ವಿಶೇಷ ಸಂಚಿಕೆ ಲೋಕಾರ್ಪಣೆ.

Mumbai News Desk

ಬಂಟರ ಸಂಘ ಬಂಟವಾಳ  ಯುವ ವಿಭಾಗದ    ಹಬ್ಬ ದೀಪಾವಳಿ ಸಂಭ್ರಮದ  ಬೊಲ್ಪುದ ಐಸಿರಿ-೨ . ಬಂಟರ   ಸಂಸ್ಕೃತಿಯನ್ನು ಬಿಂಬಿಸಿದೆ:  ಐಕಳ ಹರೀಶ್ ಶೆಟ್ಟಿ

Mumbai News Desk

ಮಂಗಳೂರು : ಉದ್ಯಮಿ, ಕಂಬಳ ಸಂಘಟಕನ ಪುತ್ರನ ಮೃತದೇಹ ನದಿ ತೀರದಲ್ಲಿ ಪತ್ತೆ

Mumbai News Desk