ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ, ಮುಂಬಯಿ ಇದರ ಅಧ್ಯಕ್ಷ, ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನದ ಗೌರವ ಅಧ್ಯಕ್ಷರೂ ಆಗಿರುವ ರಾಜು ಮೆಂಡನ್ ವಂಡ್ಸೆ ಅವರ ಮಾತೃಶ್ರೀ ಲಚ್ಚು ಮೆಂಡನ್ (84 ವರ್ಷ ) ಇಂದು (9/8/25)ನಿಧನರಾಗಿದ್ದಾರೆ.
ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧು-ಬಳಗವನ್ನು ಅಗಲಿರುವರು.
ಇವರ ನಿಧನಕ್ಕೆ ಮೊಗವೀರ ಕುಲರತ್ನ ನಾಡೋಜಾ ಡಾ. ಜಿ ಶಂಕರ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ್, ಮಾಜಿ ಅಧ್ಯಕ್ಷರುಗಳಾದ ಗೋಪಾಲ್ ಪುತ್ರನ್, ಕರುಣಾಕರ ಪುತ್ರನ್, ಮಹಾಬಲ ಕುಂದರ್, ರಮೇಶ್ ಬಂಗೇರ, ಎನ್ ಎಚ್ ಬಗ್ವಾಡಿ, ನಾಣು ಚಂದನ್, ಸಮಾಜದ ಗಣ್ಯರಾದ ಸಂತೋಷ ಪುತ್ರನ್, ಸಂಘದ ಪದಾಧಿಕಾರಿಗಳು, ಸದಸ್ಯರು, ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನದ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ (10/8/25 ಆದಿತ್ಯವಾರ ) ಬೆಳಿಗ್ಗೆ ಅವರ ಸ್ವಗ್ರಹ ಕುಂದಾಪುರ, ಕುಂಟ ನೇರಳು ಬಳ್ಳಿ ಹಿತ್ಲು, ಕರ್ಕುಂಜೆ ಮನೆಯಲ್ಲಿ ಬೆಳಿಗ್ಗೆ 9 ಘಂಟೆಗೆ ನಡೆಯಲಿದೆ.




